ಕರಾಳ ದಿನ
ಮನುಜನ ಆಶೆ ಅಕಾಕ್ಷೆಗಳು
ವಿಪರೀತವಾಗಿದೆ
ಎಲ್ಲೇ ಮೀರಿದ ನಡತೆ ಎಲ್ಲೆಲ್ಲೂ ತುಂಬಿದೆ
ಆರಾಜಕತೆಯ ನಡುವೆ ಆತಂತ್ರವಾಗಿದೆ ಜೀವನ
ಬಾಳು ದುರ್ಭರವಾಗಿ ಮನಸು ಆತಂಕದ ಗೂಡಾಗಿದೆ
ಪ್ರೀತಿ ವಿಶ್ವಾಸ ಮಮತೆ ಕರುಣೆಯ ಸೆಳೆ ಬತ್ತಿದೆ
ಮನುಜ ಮನುಜನಲಿ ದ್ವೇಷ ಹೊಗೆಯಾಡಿ ಬಾಳು ಗೋಳಾಗಿದೆ
ಮಾನವನ ದುರಾಶೆಗೆ ಪ್ರಕೃತಿ ಮುನಿದಿಹಳೆ?
ಎಲ್ಲೆಡೆಯೂ ಅತಿವೃಷ್ಠಿ ಅನಾವೃಷ್ಟಿಗಳ ತಾಂಡವ ನೃತ್ಯ
ಜೀವನದಿ ಸರಾಗವಾಗಲು ಮನುಜ ಬುದ್ಧಿಯ ನೀನೆಂದು ಕಲಿವೆ?
ಮೋಹ ಮದ ಮತ್ಸ್ತರ ಗಳ ಪಾಪ ಕೂಪದಲಿ ಬಿದ್ದುನರಳುತ್ತಿರುವ
ಓ ಮನುಜ ನಿನ್ನ ನಿಜ ನೆಲೆಯನು ನೀನೊಮ್ಮೆ ತಿಳಿಯಲಾರೆಯ? ದೇವವನೊಲುಮೆಯ ಪಡೆದುಎಲ್ಲರೊಳಗೊಂದಾಗಿ ಬಾಳಲಾರೆಯ?
ಪಂಕಜಾ.ಕೆ
Comments
Post a Comment