ಕನ್ನಡ ರಾಜ್ಯೋತ್ಸವ ಕವನ ಸ್ಪರ್ಧೆ ಗಾಗಿ
*********************
ಕರ್ನಾಟಕದ ವೀರರಮಣಿಯರು
*******************
ಕೇಳಿರಿ ಗೆಳೆಯರೆಲ್ಲರೆ ಹೇಳುವೆ ನಾನು
ಕನ್ನಡನಾಡನಾಳಿದ ವೀರ ವನಿತೆಯರ ಚರಿತೆಯನು
ವೀರ ವನಿತೆಯರು ಆಳಿದ ಬೀಡಿದು
ಕನ್ನಡ ಭಾಷೆಯ ಆಡುವ ನಾಡಿದು
ಗಂಡು ಮೆಟ್ಟಿದ ನಾಡಿನ ವೀರನಾರಿಯರು
ನಾಡ ರಕ್ಷಣೆಗೆ ಹೋರಾಡಿದವರು
ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರ ಮೂರ್ತಿ
ವೀರ ಧೀರ ಮಹಿಳೆಯರಿವರು
ಮೈನವಿರೇಳಿಸುವ ಅವರ ಕ್ಷಾತ್ರತೇಜದಿ
ಧನ್ಯವಾಯಿತು ನಮ್ಮ ಈ ಕನ್ನಡನಾಡು
ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ
ಸ್ವಾತಂತ್ರ್ಯದ ಕಿಡಿಯನು ಹಚ್ಚಿದ ಮಾತೆ
ಧೈರ್ಯಸಾಹಸಗಳ ತೋರಿದ ಕಿಚ್ಚಿನಕಿಡಿ
ಬ್ರಿಟಿಷರ ವಿರುದ್ಧ ಹೋರಾಡಿದ ಗಂಡುಗಲಿ
ಧೈರ್ಯಸ್ಥೈರ್ಯ ದ ವೀರ ಮಹಿಳೆ
ಮರಾಠರನ್ನು ಸದೆಬಡಿದ ಕೆಚ್ಚೆದೆಯ ಕಲಿ
ಶಿವಾಜಿಯ ಸೊಕ್ಕನು ಮುರಿದಳು ಇವಳು
ರಣಚಂಡಿಯ ಅವತಾರವೇ ಈಕೆ ಬೆಳವಾಡಿಯ ಮಲ್ಲಮ್ಮ
ಮೊಘಲರಾಜ ಔರಂಗಜೇಬನು
ದಂಡೆತ್ತಿ ಬಂದನು ಕೆಳದಿಯ ಕಡೆಗೆ
ಕೆಚ್ಚೆದೆಯಿಂದ ದುರ್ಗಿಯ ತೆರದಲಿ
ವೈರಿಗಳ ಸದೆಬಡಿದ ಧೀರೆ ಕೆಳದಿಯ ರಾಣಿ ಚೆನ್ನಮ್ಮ
ಪೋರ್ಚುಗೀಸರಿಗೆ ಸಡ್ಡು ಹೊಡೆದು
ಉಳ್ಳಾಲದಿ ಕ್ರಾಂತಿ ಕಿಡಿಯನು ಹಚ್ಚಿದಳು
ಕನ್ನಡ ಮಣ್ಣಿನ ಹೆಮ್ಮೆಯ ಮಗಳಿವಳು
ಅವಳೇ ಉಳ್ಳಾಲದ ರಾಣಿ ಅಬ್ಬಕ್ಕ
ಚಿತ್ರದುರ್ಗದ ಕಲ್ಲಿನ ಕೋಟೆ
ಭೇದಿಸಲಸಾಧ್ಯದ ಉಕ್ಕಿನ ಕೋಟೆ
ರಹಸ್ಯ ದಾರಿಯಲಿ ನುಸುಳುವ ವೈರಿಯ ಕಂಡು
ಒನಕೆಯ ಬೀಸಿ ಕೊಂದಳು ನಾರಿ
ಕೋಟೆಯ ಉಳಿಸಿದ ಓಬವ್ವ ನೊಂದವರಿಗೆ ಆಶ್ರಯದಾತೆ
ಮುನಿದರೆ ಮಾರಿ ಒಲಿದರೆ ನಾರಿ
ಪರಾಕ್ರಮ ಸೌಹಾರ್ದತೆಯ ಸಾಕಾರ
ಸಾಧಿಸಿ ಮೆರೆದ ವೀರರಮಣಿಯರು
ನಮ್ಮ ಹೆಮ್ಮೆಯ ಧೀರ ಮಹಿಳೆಯರು
ಕಲಿಯಲೇ ಬೇಕು ಇಂದಿನ ನಾರಿಮಣಿಯರು
ಕನ್ನಡ ನಾಡಿನ ವೀರ ರಮಣಿಯರ ಸಾಧನೆಯ
ಧೈರ್ಯಸ್ಥೈರ್ಯದಿ ಕೆಚ್ಚೆದೆಯಿಂದ ಬಾಳಬೇಕು
ಅನ್ಯಾಯಗಳ ಪ್ರತಿಭಟಿಸಬೇಕು ವೀರಮಹಿಳೆಯರ ತೆರದಿ
ಪಂಕಜಾ. ಕೆ. ಮುಡಿಪು
Comments
Post a Comment