(ಚಿತ್ರಕವನ)
ಸ್ಪರ್ಧೆಗಾಗಿ
ಅನ್ನದ ಮಹತ್ವ
ಹಿಡಿ ಅಕ್ಕಿ ಬೆಳೆಯುವ ಕಷ್ಟ
ರೈತನಿಗೆ ಗೊತ್ತು ಅದರ ಕಷ್ಟ ನಷ್ಟ
ಶ್ರೀಮಂತಿಕೆಯ ಮಹಲಿನಲಿದ್ದರೂ
ಹಸಿವೆಯ ತಣಿಸಲು ಬೇಕು ಹಿಡಿ ಅಕ್ಕಿ
ಅನ್ನವ ಬೆಳೆಯುವ ರೈತನ ಶ್ರಮ
ಅರಿತರೆ ಮಾತ್ರ ತಿಳಿದೀತು ಅದರ ಬೆಲೆ
ಬಿಸಿಲು ಮಳೆ ಗಾಳಿಯ ಸಹಿಸುವನೀತ
ನಿತ್ಯವೂ ಕಾಯಕವ ಮಾಡುವ ಅನ್ನದಾತ
ಬರಗಾಲ ಅತಿವೃಷ್ಠಿ ಗಳ ಅಬ್ಬರದ ಆಟ
ದುಡಿದರೂ ದಕ್ಕದ ಮಧ್ಯವರ್ತಿಗಳ ಕಾಟ
ರೈತನ ಶ್ರಮವನ್ನು ಅರಿಯಬೇಕು
ಅನ್ನದ ಮಹತ್ವವನ್ನು ತಿಳಿಯಬೇಕು
ಮುಂದಿನ ಪೀಳಿಗೆಗೆ ಅದನು ತಿಳಿಸಬೇಕು
ಅನ್ನದಾತನ ಹಿರಿಮೆ ಅರಿಯಬೇಕು
ಕಷ್ಟ ನಷ್ಟಗಳಿಗೆ ಒಡ್ಡುವನು ಕೊರಳು
ಸುತ್ತಿದೆ ಸಾಲದ ಹೊರೆಯ ಉರುಳು
ಅನ್ನ ಕೊಡುವ ರೈತನ ಶ್ರಮದ ಫಲ
ಬೆಳೆದ ಬೆಳೆಗೆ ಸಿಗಬೇಕು ಪ್ರತಿಫಲ
ಪಂಕಜಾ.ಕೆ
Comments
Post a Comment