ಸತ್ಯವಂತರ ಕಾಲ
ಅದೆಂತ ಕಾಲವಿತ್ತು ಅಂದು
ಸತ್ಯನೀತಿ ನ್ಯಾಯದಲಿ
ನಡೆದು ಗುರಿ ಸೇರುವ ತವಕ
ಒಬ್ಬರಿಗಿನೊಬ್ಬರು ಸಹಕರಿಸಿ
ಒಗ್ಗಟ್ಟಿನಲಿ ಕೂಡಿ ಬಾಳುತ್ತಿದ್ದ ಕಾಲ
ಸತ್ಯಕ್ಕೆ ಜಯ ವೆನ್ನುವಂತಿದ್ದ ದಿನ
ಪ್ರೀತಿ ವಿಶ್ವಾಸ ನಂಬಿಕೆಯ ಗೂಡು
ಕಡಿಯಲಾರದ ಭಾಂಧವ್ಯದ ನಾಡು
ದಟ್ಟ ದರಿದ್ರತೆಯಲ್ಲೂ ಸತ್ಯವನು ಬಿಡದವರು
ಅಮಿಷಕೆ ಸೋಲದ ದೃಢ ಮನ
ಪ್ರಾಣಕ್ಕೆ ಪ್ರಾಣಕೊಡುವ ಮುಗ್ಧ ಜನ
ಇಂದೀಗ ಅಪರೂಪ ಇಂಥಹ ಜನ
ನಿತ್ಯವೂ ಕಾಣುತ್ತಿದೆ ಕೊಲೆ ಸುಲಿಗೆ
ಹಸು ಕಂದಮ್ಮಗಳನ್ನೂ
ಬಿಡದ ಕಾಮಾಂಧತೆ
ಅನ್ಯಾಯ ಅನಾಚಾರಗಳು ತುಂಬಿ
ಬದುಕು ದುರ್ಭರವಾಗುತಿದೆ
ಕಳೆದು ಹೋದ ಕಾಲ ಬಂದೀತೆ ಇನ್ನೊಮ್ಮೆ
ಪಂಕಜಾ.ಕೆ.
Comments
Post a Comment