ನಾನೆಂದರೆ
ನಾನೆಂದರೇನು ಯೋಚನೆಗೆ ಬಿದ್ದೆ ನಾನು
ಉತ್ಸಾಹ ಹುರುಪು ತುಂಬಿದ ಬೆಲೂನು
ಚಿಕ್ಕ ಚಿಕ್ಕ ವಿಷಯಕ್ಕೂ ಒಡೆದು ಹೋಗುವ ಮನ
ಪ್ರಕೃತಿ ಪ್ರೀತಿಯಲಿ ನಿತ್ಯ ನಲಿವ ತನನನ
ನನ್ನೊಳಗೆ ಅವಿತಿಹನೊಬ್ಬ ಮೃದುಮನದ ಕವಿ
ಉಣಿಸುತಿಹನು ದಿನ ದಿನವೂ ಕವಿತೆಯ ಸವಿ
ನೋವೋ ನಲಿವೋ ಆಗುವುದು ಕವಿತೆ
ರಾಗ ತಾಳಗಳಿಲ್ಲದಿದ್ದರೂ ಹೊಮ್ಮುವುದು ಕವಿತೆ
ಜಗಳ ಕದನಗಳೆಂದರೆ ಮಾರು ದೂರ
ಪ್ರೀತಿ ಪ್ರೇಮಕೆ ನಲಿವ ಹಾರ
ಹಲವರಲ್ಲಿ ನಾನೊಬ್ಬಳಾಗಲಾರೆ
ಸಾಧಿಸುವ ಛಲವಿರುವ ಛಲಗಾತಿ ಬಾರೆ
ಪಂಕಜಾ. ಕೆ.
Comments
Post a Comment