(ನ್ಯಾನೊ ಕಥೆ )
ವೃದ್ಧಾಶ್ರಮ
ಅತ್ತೆ ಮಾವ ಇಲ್ಲಿ ಯಾಕೆ ಅವರನ್ನು ವೃದ್ಧಾಶ್ರಮಕ್ಕೆ ಹಾಕೋಣ ಎಂದು ನಿತ್ಯ ಸವಿತಾ ತನ್ನ ಗಂಡನ ಜತೆ ಜಗಳವಾಡುತ್ತಿದ್ದಳು . ಸಂದೇಶ್ ಪ್ರತೀಬಾರಿಯು ನನ್ನ ಅಮ್ಮ ಅಪ್ಪ ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿ ವಿದ್ಯೆ ಬುದ್ದಿ ಕಲಿಸಿ ನನ್ನನ್ನು ಒಂದು ನೆಲೆಗೆ ತಂದಿದ್ದಾರೆ, ಇಂದು ಈಗ ನಾವು ತಿನ್ನುವ ಅನ್ನ ಅವರ ಭಿಕ್ಷೆ ನೆನಪಿರಲಿ ಎಂದು ಹೇಳುತ್ತಿದ್ದ . ಪ್ರತೀಬಾರಿ ಜಗಳವಾದಾಗಳೂ ಅವರ ಮಗ ಸುಕೇಶ್ ಅವರಿಬ್ಬರ ಮದ್ಯೆ ಮೂಕ ಪ್ರೇಕ್ಷಕನಾಗಿದ್ದ ,ಅವನಿಗೆ ಅಜ್ಜ ಅಜ್ಜಿಯರೆಂದರೆ ಬಹಳ ಪ್ರೀತಿ ,ಆದರೆ ಇನ್ನೂ ಚಿಕ್ಕವನಾದ್ದರಿಂದ ತಂದೆ ತಾಯಿಯರು ಜಗಳ ಮಾಡುವಾಗ ಏನನ್ನು ಹೇಳದೆ ಮೌನವಾಗಿರುತ್ತಿದ್ದ.ಅವನ ಮನಸ್ಸು ಮಾತ್ರ ತಾಯಿಯ ಮಾತುಗಳನ್ನು ವಿರೋಧಿಸುತ್ತಿತ್ತು .ಕೊನೆಗೊಮ್ಮೆ ಹೆಂಡತಿ ಕಾಟ ಸಹಿಸಲಾರದೆ ತನ್ನ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡಲು ಸಂದೇಶ್ ಹೊರಟ ತಕ್ಷಣ ಸುಕೇಶ್ ತನ್ನ ಅಮ್ಮನ ಕೈಯನ್ನು ಹಿಡಿದು ಅಮ್ಮ ನಾಳೆ ನೀನು ಮುದುಕಿಯಾದಮೇಲೆ ನಾನೂ ನಿನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ, ಈಗಲೇ ಹೋಗಿ ಅಲ್ಲಿ ಸೀಟ್ ಮಾಡಿ ಇಡುತ್ತೇನೆ ಆಗದೆ ಎಂದು ಕೇಳುತ್ತಾನೆ ಇದನ್ನು ಕೇಳಿದ ಸವಿತಾ ಒಂದು ಕ್ಷಣ ದಿಗ್ಬ್ರಾಂತಳಾಗುತ್ತಾಳೆ ಮರುಕ್ಷಣವೇ ತನ್ನ ಗಂಡನನ್ನು ಕರೆದು ಅತ್ತೆಮಾವ ನಮ್ಮೊಡನೆಯೇ ಇರಲಿ ವೃದ್ಧಾಶ್ರಮಕ್ಕೆ ಅವರನ್ನು ಸೇರಿಸುವುದು ಬೇಡ ಎನ್ನುತ್ತಾಳೆ ಆದರೆ ಸಂದೇಶ್ ಹೆಂಡತಿಗೆ ನಾಳೆ ಪುನ ನನ್ನೊಡನೆ ಜಗಳ ಮಾಡಬಾರದು ಹಾಗಿದ್ದರೆ ಹೇಳು ಇಂದೇ ಅವರನ್ನು ವೃದ್ಧಾಶ್ರಮದಲ್ಲಿ ಬಿಡುತ್ತೇನೆ ಎಂದು ಹೇಳುತ್ತಾನೆ. ಇಲ್ಲ ನಮ್ಮ ಸುಕೇಶ್ ನನಗೆ ಒಳ್ಳೆಯ ಬುದ್ದಿ ಕಲಿಸಿದ ಅತ್ತೆ ಮಾವನನ್ನು ನನ್ನ ತಂದೆ ತಾಯಿಯರಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ತಪ್ಪಾಯಿತೆಂದು ಅತ್ತೆ ಮಾವನವರ ಕಾಲಿಗೆ ಬೀಳುತ್ತಾಳೆ. ಸೊಸೆಯನ್ನು ಹಿಡಿದೆತ್ತಿದ ಅವರು ಪ್ರೀತಿಯಿಂದ ಸೊಸೆಯನ್ನು ತಬ್ಬಿಕೊಂಡು ಮಗಳೇ ಎನ್ನುತ್ತಾ ಕಣ್ಣಿರುಗರೆಯುತ್ತಾರೆ ಸಂದೇಶ್ ಸುಕೇಶನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡುತ್ತಾನೆ ಮೊಮ್ಮಗನ ಪ್ರೀತಿ ಹಾಗೂ ಪ್ರೌಢಿಮೆ ಕಂಡು ಹಿರಿಯ ಜೀವಗಳು ಸಂತಶದಿಂದ ಕಣ್ಣೀರು ಸುರಿಸುತ್ತಾರೆ.
ಪಂಕಜಾ.ಕೆ
Comments
Post a Comment