Skip to main content

ನ್ಯಾನೊ ಕಥೆ ವೃದ್ಧಾಶ್ರಮ

(ನ್ಯಾನೊ ಕಥೆ )

 ವೃದ್ಧಾಶ್ರಮ

ಅತ್ತೆ ಮಾವ ಇಲ್ಲಿ ಯಾಕೆ ಅವರನ್ನು ವೃದ್ಧಾಶ್ರಮಕ್ಕೆ ಹಾಕೋಣ  ಎಂದು ನಿತ್ಯ ಸವಿತಾ  ತನ್ನ ಗಂಡನ ಜತೆ ಜಗಳವಾಡುತ್ತಿದ್ದಳು  . ಸಂದೇಶ್  ಪ್ರತೀಬಾರಿಯು ನನ್ನ ಅಮ್ಮ ಅಪ್ಪ ನನ್ನನ್ನು ತುಂಬಾ ಕಷ್ಟಪಟ್ಟು ಸಾಕಿ ವಿದ್ಯೆ ಬುದ್ದಿ ಕಲಿಸಿ ನನ್ನನ್ನು ಒಂದು ನೆಲೆಗೆ ತಂದಿದ್ದಾರೆ, ಇಂದು ಈಗ ನಾವು ತಿನ್ನುವ ಅನ್ನ ಅವರ ಭಿಕ್ಷೆ ನೆನಪಿರಲಿ ಎಂದು ಹೇಳುತ್ತಿದ್ದ . ಪ್ರತೀಬಾರಿ ಜಗಳವಾದಾಗಳೂ ಅವರ  ಮಗ ಸುಕೇಶ್ ಅವರಿಬ್ಬರ ಮದ್ಯೆ ಮೂಕ ಪ್ರೇಕ್ಷಕನಾಗಿದ್ದ ,ಅವನಿಗೆ ಅಜ್ಜ ಅಜ್ಜಿಯರೆಂದರೆ  ಬಹಳ ಪ್ರೀತಿ ,ಆದರೆ ಇನ್ನೂ ಚಿಕ್ಕವನಾದ್ದರಿಂದ ತಂದೆ ತಾಯಿಯರು ಜಗಳ ಮಾಡುವಾಗ ಏನನ್ನು ಹೇಳದೆ ಮೌನವಾಗಿರುತ್ತಿದ್ದ.ಅವನ ಮನಸ್ಸು ಮಾತ್ರ ತಾಯಿಯ ಮಾತುಗಳನ್ನು ವಿರೋಧಿಸುತ್ತಿತ್ತು .ಕೊನೆಗೊಮ್ಮೆ ಹೆಂಡತಿ  ಕಾಟ ಸಹಿಸಲಾರದೆ ತನ್ನ ತಂದೆ ತಾಯಿಯರನ್ನು ವೃದ್ಧಾಶ್ರಮದಲ್ಲಿ ಬಿಡಲು ಸಂದೇಶ್  ಹೊರಟ ತಕ್ಷಣ ಸುಕೇಶ್ ತನ್ನ ಅಮ್ಮನ ಕೈಯನ್ನು ಹಿಡಿದು ಅಮ್ಮ ನಾಳೆ ನೀನು ಮುದುಕಿಯಾದಮೇಲೆ ನಾನೂ ನಿನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ, ಈಗಲೇ ಹೋಗಿ ಅಲ್ಲಿ ಸೀಟ್ ಮಾಡಿ ಇಡುತ್ತೇನೆ ಆಗದೆ ಎಂದು ಕೇಳುತ್ತಾನೆ ಇದನ್ನು ಕೇಳಿದ ಸವಿತಾ ಒಂದು ಕ್ಷಣ ದಿಗ್ಬ್ರಾಂತಳಾಗುತ್ತಾಳೆ ಮರುಕ್ಷಣವೇ ತನ್ನ ಗಂಡನನ್ನು ಕರೆದು ಅತ್ತೆಮಾವ ನಮ್ಮೊಡನೆಯೇ ಇರಲಿ ವೃದ್ಧಾಶ್ರಮಕ್ಕೆ ಅವರನ್ನು ಸೇರಿಸುವುದು ಬೇಡ ಎನ್ನುತ್ತಾಳೆ ಆದರೆ ಸಂದೇಶ್ ಹೆಂಡತಿಗೆ ನಾಳೆ ಪುನ ನನ್ನೊಡನೆ ಜಗಳ ಮಾಡಬಾರದು ಹಾಗಿದ್ದರೆ ಹೇಳು ಇಂದೇ ಅವರನ್ನು ವೃದ್ಧಾಶ್ರಮದಲ್ಲಿ ಬಿಡುತ್ತೇನೆ ಎಂದು ಹೇಳುತ್ತಾನೆ. ಇಲ್ಲ ನಮ್ಮ ಸುಕೇಶ್ ನನಗೆ ಒಳ್ಳೆಯ ಬುದ್ದಿ ಕಲಿಸಿದ ಅತ್ತೆ ಮಾವನನ್ನು ನನ್ನ ತಂದೆ ತಾಯಿಯರಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿ ತಪ್ಪಾಯಿತೆಂದು ಅತ್ತೆ ಮಾವನವರ ಕಾಲಿಗೆ ಬೀಳುತ್ತಾಳೆ. ಸೊಸೆಯನ್ನು ಹಿಡಿದೆತ್ತಿದ ಅವರು ಪ್ರೀತಿಯಿಂದ ಸೊಸೆಯನ್ನು ತಬ್ಬಿಕೊಂಡು ಮಗಳೇ ಎನ್ನುತ್ತಾ ಕಣ್ಣಿರುಗರೆಯುತ್ತಾರೆ ಸಂದೇಶ್  ಸುಕೇಶನನ್ನು ಗಟ್ಟಿಯಾಗಿ ತಬ್ಬಿಕೊಂಡು ಮುದ್ದಾಡುತ್ತಾನೆ ಮೊಮ್ಮಗನ ಪ್ರೀತಿ ಹಾಗೂ ಪ್ರೌಢಿಮೆ ಕಂಡು ಹಿರಿಯ ಜೀವಗಳು ಸಂತಶದಿಂದ ಕಣ್ಣೀರು ಸುರಿಸುತ್ತಾರೆ.

ಪಂಕಜಾ.ಕೆ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...