ಶಿವನೊಲುಮೆಇರಲಿ
ಈಶ ನಿನ್ನ ಸ್ಮರಣೆ ಮಾಡಿ ನಿತ್ಯಭಜಿಸುವೆ
ಪಾಶ ಹಸ್ತದಿಂದ ಕಾಯೋ ಶಂಭುಶಂಕರ
ಬಂಧಿಸುವ ನೂರು ನೋವು ನಿತ್ಯ ಕಾಡಿದೆ
ನೋವು ಕಳೆದು ಮನಕೆ ಶಾಂತಿಯನ್ನು ಕರುಣಿಸೋ
ನನ್ನ ಹೃದಯದಲ್ಲಿ ನಿನ್ನ ಮೂರ್ತಿ ತುಂಬಿದೆ
ನೇಮ ನಿಷ್ಠೆಯಿಂದ ನಿನ್ನ ಭಜನೆ ಮಾಡುವೆ
ಕಾಮ ಕ್ರೋದ ಬಿಡಿಸಿ ನನ್ನ ಕಾಯೋ ಶಂಕರ
ಅನುದಿನವೂ ಅನುಗ್ರಹಿಸು ಸೋಮೇಶ್ವರ
ಜನನಿ ಜನಕ ಎಲ್ಲಾ ನೀನೇ ಎನಗೆ ಜಗದೀಶ್ವರ
ಬಂಧು ಬಳಗವೆಲ್ಲ ನೀನೇ ಕಾಯೋ ಈಶ್ವರ
ಹರುಷದಿಂದ ನಿನ್ನ ನಾಮ ಸ್ಮರಣೆ ಮಾಡುವೆ
ಅನುದಿನವೂ ಅನುಗ್ರಹಿಸು ಮಂಜುನಾಥನೇ
ಗಂಗೆಯನು ಶಿರದಲ್ಲಿ ಧರಿಸಿರುವ ಗಂಗಾಧರ
ಭಂಗವನು ತಾರದೆಯೇ ಸಲಹೆಮ್ಮನು
ನಿನ್ನ ಒಲುಮೆಯಿರಲು ನಮಗೆ ಭಯವುಎಲ್ಲಿದೆ
ನಿತ್ಯ ಕರುಣೆಯಿಂದ ನಮ್ಮ ಕಾಯೋ ಕರುಣಾಕರ
ದುಷ್ಟರನ್ನು ಶಿಕ್ಷಿಸುತ ಶಿಷ್ಟರನ್ನು ಕಾಯುತಿರುವೆ
ಜಗದ ತಂದೆ ಪಾರ್ವತಿ ವಲ್ಲಭ ಪರಮೇಶ್ವರ
ಗಜಚರ್ಮ ಧರಿಸಿರುವ ಗೌರೀವರ
ಕಾಶಿಯಲ್ಲಿ ನೆಲೆಶಿರುವ ವಿಶ್ವೇಶ್ವರ
ನಾಮ ಸ್ಮರಣೆ ಮಾತ್ರದಿಂದ ಕಳೆವೆ ಪಾಪವ
ನೇಮದಿಂದ ಭಜಿಸುತ್ತಿರಲು ಒಲಿವೆ ನೀನು ಸುರೇಶ್ವರ
ಅನುದಿನವೂ ಬೇಡುವೆನು ತಂದೆ ವಿಶ್ವನಾಥ
ಕರುಣೆಯಿಂದ ಕಾಯು ಎನ್ನ ಶಶಿಶೇಖರ
ಪಂಕಜಾ .ಕೆ
Comments
Post a Comment