ನ್ಯಾನೊ ಕತೆ. ದತ್ತ ಪದ ಇದೇ ಸರಿಯಾದ ಉಪಾಯ
ನನಸಾದ ಕನಸು
ಎಂ.ಡಿ. ಯಲ್ಲಿ ಚಿನ್ನದ ಪದಕ ಪಡೆದುಕೊಂಡ ರಮೇಶನಿಗೆ ಒಂದೇ ಕನಸು, ತಾನು ತನ್ನ ಹಳ್ಳಿಯ ಜನರ ಸೇವೆ ಮಾಡಿ ತನ್ನ ವಿದ್ಯೆ ಸಾರ್ಥಕ ಪಡಿಸಬೇಕು ಎನ್ನುವುದು . ಆದರೆ ಆತನ ತಂದೆ ತಾಯಿಯರಿಗೆ ಮಗ ದೊಡ್ಡ ಆಸ್ಪತ್ರೆಯಲ್ಲಿ ಕೆಲಸ ಮಾಡಿ ಸಾಧ್ಯವಾದರೆ ಹೊರದೇಶಕ್ಕೂ ಹೋಗಲಿ ಎನ್ನುವ ಆಸೆ .ಏನು ಮಾಡುವುದೆಂದು ತಿಳಿಯದೆ ಚಿಂತೆಯಲ್ಲಿದ್ದ ರಮೇಶ ಸ್ನೇಹಿತನ ಸಲಹೆಯಂತೆ ಇದೆ ಸರಿಯಾದ ಉಪಾಯ ಎಂದು ತನಗೆ ವಿಪರೀತ ಹೊಟ್ಟೆನೋವು ಎಂದು ನಟನೆ ಮಾಡಿದ ತಂದೆ ತಾಯಿ ಗಾಬರಿಯಾದರು ಮಧ್ಯರಾತ್ರಿಯ ಆ ಹೊತ್ತಿನಲ್ಲಿ ಆ ಹಳ್ಳಿ ಕೊಂಪೆಯಲ್ಲಿ ಯಾವದೇ ಡಾಕ್ಟರ್ ಆಗಲಿ, ವಾಹನವಾಗಲಿ , ಇಲ್ಲದೆ ಇದ್ದುದರಿಂದ ತಂದೆ ತಾಯಿ ಮಗನ ಸಂಕಟ ನೋಡಲಾರದೆ ಕಣ್ಣೀರು ಹಾಕುತ್ತಿದ್ದರು. ರಮೇಶ ತನ್ನ ಕನಸು ನನಸಾಗುವುದು ತಿಳಿದು ಖುಷಿಯಿಂದ ನಿದ್ದೆ ಹೋದ
ಪಂಕಜಾ.ಕೆ
Comments
Post a Comment