ಸಿಗ್ನೇಚರ್ ಲೈನ್ ಸಂಚಿಕೆ 42 ಸ್ಪರ್ಧೆಗಾಗಿ
ಬೇಡಿಕೆ
ಜಗದೊಳೆಲ್ಲೆಡೆವಿಷವೇ ತುಂಬಿದೆ ನೀಲಕಂಠನೆ ನೋಡೆಯಾ
ಕೊಲೆ ಸುಲಿಗೆ ಅತ್ಯಾಚಾರಗಳು ತುಂಬಿ ತುಳುಕಿದೆ
ಬದುಕು ಬಾರವಾಗಿದೆ ಕಾಣೆಯ
ಪ್ರೀತಿ ವಿಶ್ವಾಸ ನಂಬಿಕೆಯ ಬೆಲೆಯು ಕಳೆದಿದೆ
ದ್ವೇಷ ಅಸೂಯೆ ಯೇ ತುಂಬಿದೆ ಎಲ್ಕೆಡೆಯು ಜಗದಲಿ
ಹಸಿರು ಕಾಡು ಗುಡ್ಡಗಳ ಅಗೆದು ಬಗೆದನು ಮಾನವ
ತನ್ನ ಗೋರಿಯ ತಾನೇ ತೋಡುತಿರುವನು ತಿಳಿಯೆಯ
ಕಾಂಕ್ರೀಟ್ ಕಾಡು ತುಂಬಿ ಎಲ್ಲೆಡೆ ಗಾಳಿ ಮಲಿನವಾಗಿದೆ
ಪ್ಲಾಸ್ಟಿಕ್ ತ್ಯಾಜ್ಯವು ತುಂಬಿ ತುಳುಕಿ ನೀರ ಸೆಲೆಯು ಅಳಿದಿದೆ
ಬದುಕಲೆಂತು ತಿಳಿಯದಾಗಿದೆ ವಿಶ್ವನಾಥ ನೇ ಕಾಯೆಯ
ಬೇಡಿಕೊಳ್ಳುವೆ ನಿನ್ನ ನಾನು ಕರುಣೆ ತೋರು ನಮ್ಮೆಡೆ
ಜಗದ ಜನರಿಗೆ ಒಳ್ಳೆ ಬುದ್ಧಿಯ ಕೊಟ್ಟು ಕಾಯು ನಮ್ಮನು
ಶರಣು ಬಂದಿಹೆ ದೇವ ನಿನಗೆ
ನಿತ್ಯ ನಮ್ಮನು ಸಲಹೆಯ
ಪಂಕಜಾ.ಕೆ
Comments
Post a Comment