ಈಶನ ಸ್ಮರಣೆ
(ಭಕ್ತಿಗೀತೆ)
ಈಶ ನಿನ್ನ ನಾಮ ಸ್ಮರಣೆ
ತೋಷದಿಂದ ಮಾಡುವೆನು
ದೋಷರಾಶಿ ಕಳೆಯೋ ಸೋಮೇಶ್ವರ
ಶರಣು ಬಂದೆ ನಂದಿಕೇಶ
ಚರಣಕೆರಗಿ ಬೇಡಿಕೊಳ್ಳುವೆ
ಮರಣ ಭಯವ ಕಳೆಯೋ ವಿಶ್ವನಾಥನೇ
ಭಾದಿಸುವ ರೋಗಗಳ
ಕಾಡಿಸುವ ವೈರಿಗಳ
ಭಾದೆ ಬಿಡಿಸಿ ಕಾಯೋ ನಮ್ಮಶಶಿಶೇಖರ
ಭ್ರಷ್ಟರೊಡನೆ ಸೇರುತಲಿ
ಕಷ್ಟವನ್ನು ತಂದುಕೊಂಡೆ
ಕಷ್ಟ ಕಳೆದು ಎನ್ನ ಕಾಯೋ ಮಂಜುನಾಥನೆ
ನಾಮವನ್ನು ಜಪಿಸುತಲಿ
ನೇಮದಿಂದ ನಿನ್ನ ಭಜಿಸೆ
ಭವದ ಕಷ್ಟ ಕಳೆಯೋ ಗಂಗಾಧರ
ಹಾರಿ ಬಂದು ಕಾಡುತಿರುವುದು
ಭಾರಿಯಾದ ರೋಗವಿಂದು
ಭೀತಿ ಕಳೆದು ನಮ್ಮ ಕಾಯೋ ಮಹೇಶ್ವರ
ಪಂಕಜಾ.ಕೆ
Comments
Post a Comment