ಅರಿವೆಂಬ ಜ್ಯೋತಿ
ಅಜ್ಞಾನವೆಂಬ ಅಂಧಾಕಾರವ ಕಳೆಯಲು
ಜ್ಞಾನವೆಂಬ ಅರಿವಿನ ಹರಿವು ಇರಲು
ಮನಕೆ ತುಂಬುತಿದೆ ಆನಂದದ ಅಮಲು
ಅಂದಾಕಾರವು ತೊಲಗಿ
ಅರಿವೆಂಬ ಜ್ಯೋತಿ ಬೆಳಗಿ
ಬಾಳು ಬಂಗಾರವಾಗದೆ ಇರದು
ಸಾಹಿತ್ಯಲೋಕದಲಿ ಜ್ಞಾನದ ಹಸಿವು
ಬಗೆ ಬಗೆ ಸಾಹಿತ್ಯದ ರಸದೌತಣದ ಹರಿವು
ಸಾಹಿತಿಯ ಮನದಾಳದ ಅರಿವಿನ ಹರಿವು
ಪುಸ್ತಕದಲಿಹೊಳೆಯಾಗಿ ಹರಿದಿದೆ
ಹರಿದಷ್ಟೂ ಚಿಮ್ಮುತ್ತಿದೆ ಜ್ಞಾನದ ಸಾಗರ
ಬತ್ತದಾ ತೊರೆಯಂತೆ ಜ್ಞಾನದ ಭಂಡಾರ
ಮೊಗೆ ಮೊಗೆದು ಧನ್ಯಳಾಗುವ ಬಾವ
ನೋವು ದುಃಖಗಳ ಮರೆಸುತಿದೆ ಜ್ಞಾನದ ಹಸಿವು
ಮನಕೆ ರಸದೌತಣವ ಉಣಬಡಿಸುತಿದೆ ಸಾಹಿತ್ಯದ ಘಮಲು
ಪಂಕಜಾ.ಕೆ.
Comments
Post a Comment