Skip to main content

ಮನದರಸನಿಗೊಂದು ಒಲವಿನ ಒಲೆ

ಮನದರಸನಿಗೊಂದು ಒಲವಿನ ಓಲೆ

ನನ್ನರಸ  ,
ನಿನಗೆ ಗೊತ್ತೇ ನಿನ್ನ ಪರಿಚಯ ಯಾಗುವ  ಮೊದಲು ನಾನು ಶೂನ್ಯಳಾಗಿದ್ದೆ  . ನೀನೆಂದು ನನ್ನ ಮನದ ಗುಡಿಗೆ ಬಂದೆಯೋ ಅಂದಿನಿಂದವೇ ನನ್ನೆಲ್ಲಾ ಕನಸುಗಳು ನಿನ್ನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು.
ಆ ದಿನ ನಿನಗೂ ನನ್ನ ಮೇಲೆ ಮನಸು ಇದೆ ಎಂದು  ನನ್ನೊಡನೆ ಮಾತನಾಡುವಾಗ ಮಿಂಚಿದ ನಿನ್ನ ಕಣ್ಣು  ಕೆಂಪೇರಿದ ನಿನ್ನ ಮುಖ  ಕಂಡಾಗಳೇ ನನಗೆ ಅನಿಸಿತ್ತು,ಆದರೂ ನಿನ್ನ ಬಾಯಿಯಿಂದವೇ ಅದನ್ನು ಕೇಳುವ ಆಸೆಗೆ ನಿನ್ನ ಸಂದೇಶವನ್ನು ಹೊತ್ತು ತಂದ ನಮ್ಮಿಬ್ಬರ  ಸಹೋದ್ಯೋಗಿಯ ಜತೆ  ನಾನು ಅವರೇ ಅದನ್ನು ಹೇಳಲಿ ಎಂದು ಬಿಂಕ ತೋರಿಸಿದ್ದೆ .ಆದರೆ ನಿನ್ನದು ತುಂಬಾ ಸರಳ  ಸ್ವಭಾವ ಮರುದಿನವೇ ನೀನು ಒಂದು ಪತ್ರದಲ್ಲಿ  ನಿನ್ನೆಲ್ಲ ಪ್ರೀತಿ ಭಾವನೆಗಳನ್ನು ತುಂಬಿ ನಡುಗುವ ಕೈಗಳಿಂದ ನನ್ನೆಡೆಗೆ ಚಾಚಿ ನಿಂತ ಆ ಕ್ಷಣದ ನೆನಪು ಇಂದಿಗೂ ನನ್ನ ಮನದಲ್ಲಿ ಹಸಿರಾಗಿದೆ 
ನಾವಿಬ್ವರು ಒಬ್ಬರೊಡನೆ  ಇನ್ನೂಬ್ಬರು ಮಾತನಾಡಿದ್ದೆ ಇಲ್ಲ ಆದರೂ ನಮ್ಮಿಬ್ಬರ ಹೃದಯವೂ ಒಂದಾಗಿತ್ತು ಅಲ್ಲವೇ. ಆ ದಿನ ನೀನು ನನ್ನ ತಂದೆಯವರ ಜತೆ ಮಾತಾಡಲೆಂದು  ಬಂದಾಗ ನೀನು ಹೇಳಿದ ಆ ಒಂದೇ ಮಾತು ನನ್ನ ಎದೆಯನ್ನು ಮೃದುಗೊಳಿಸಿ ನಿನ್ನ ಮೇಲೆ ಪ್ರೀತಿ ಮೂಡುವಂತೆ ಮಾಡಿತು ಅದೇನೆಂದು ನಾನು ನಿನಗೆ ನೆನಪಿಸುವ ಅಗತ್ಯ ಇಲ್ಲ ಅಲ್ಲವೇ .
ನಮ್ಮ ಒಡನಾಟಕ್ಕೆ ಹಿರಿಯರ ಒಪ್ಪಿಗೆಯ ಮುದ್ರೆ ಬಿದ್ದುದೇ ತಡ ನೀನು ಹೇಗೆ ಬದಲಾಗಿಬಿಟ್ಟೆ ನನಗೆ ನಂಬಲೇ ಆಷಾಧ್ಯವಾಗಿತ್ತು .ಹೆಣ್ಣು ಮಕ್ಕಳನ್ನು ಕಂಡರೆ ಮಾರು ದೂರ ಹಾರುವ ನೀನು ನನ್ನೊಡನೆ ಹೋಟೆಲ್ ಸಿನೆಮಾ ಎಂದು ತಿರುಗಾಡಿದ್ದು  ಎಂತಹ ಮಧುರ ದಿನಗಳು ಅದು ಅಲ್ಲವೇ ?
ಮೊದಲ ಬಾರಿಗೆ ನೀನು ನನಗೆ ತೆಗೆದು ಕೊಟ್ಟ ಆ ಸೀರೆ ರಾಧೆ ಕೃಷ್ಣ ಕೊಟ್ಟ  ನವಿಲುಗರಿಯನ್ನು ಜತನದಿಂದ   ಇಟ್ಟಂತೆ ಅದನ್ನು ಈಗಲೂ ಇಟ್ಟಿರುವೆ  ನಾನು ನಿನಗಾಗಿ ತಂದ ಶರ್ಟ್ ಬಿಗಿಯಾದರೂ ಅದನ್ನು ಈಗಲೂ ನವಿರಾಗಿ ನೀನು ಸವರುವುದು ನನಗೆ ತಿಳಿದಿಲ್ಲ ಎಂದು ತಿಳಿಯಬೇಡ  
ನಾವಿಬ್ಬರೂ ದಿನ ಐಸ್ಕ್ರೀಮ್ ತಿನ್ನುವುದು ತಿಳಿದ ನನ್ನ ಅಣ್ಣ ಮದುವೆಗೆ ಆಗುವಾಗ ಸೀತವಾದೀತು ತಂಗಿ ದಿನ ಐಸ್ಕ್ರೀಮ್ ತಿನ್ನಬೇಡಿ ಎಂದು ನಗುತಲೆ ಬುದ್ದಿ ಹೇಳಿದ್ದು ನಮಗಿಬ್ಬರಿಗೆ  ಹಿಡಿಸಲೇ ಇಲ್ಲ ಅಲ್ಲವೇ  
ಮದುವೆಯ ಮದಲು  ನಮ್ಮಿಬ್ಬರಲ್ಲಿದ್ದ ಪ್ರೀತಿ ಇಂದಿಗೂ ಬತ್ತದೆ ಇರುವುದಕ್ಕೆ ಸಾಕ್ಷಿಯಾಗಿ ನಮ್ಮಿಬ್ಬರ ಮಕ್ಕಳು ನಮ್ಮನ್ನು
ಹಾಸ್ಯ ಮಾಡುವುದೇ ಸಾಕ್ಷಿ .
ಪತ್ರ ದೀರ್ಘವಾಯಿತೇನೋ ಮನದಾಳದ ಭಾವನೆಗಳು ನಿನ್ನೊಡನೆ ಹೇಳುವ ಮದಲೇ ನಿನಗೆ ತಿಳಿದು ಬಿಡುವುದು ನನಗೊಂದು ಸೋಜಿಗ .ಈ ಪತ್ರ ಸಿಕ್ಕಿದ ತಕ್ಷಣ ಉತ್ತರಿಸುತ್ತಿಯ ಅಲ್ಲವೇ ?
ಇಂತು  
 ನಿನ್ನ  ಒಲವಿನ ದೋಣಿಯಲಿ ತೇಲುತ್ತಾ ಇರುವ 
ನಿಮ್ಮೊವಿನ
ಪಂಕಜಾ.ಕೆ

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ಗುಣಗಳು ಎದ್ದು ಕಾಣುತ್

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲವರಸವನು ಹರಿಸುತ ಮನದಲಿ ಸಂತಸ ಸಂಭ್ರಮ ತುಂಬುವನು ಬಾನಲಿಇಣುಕುವ ಚಂದ್ರನ ಕಂಡು ತನ್ನೊಡನಾಡಲು ಬರುವನು ಎಂದು ನೈದಿಲೆ ಮೊಗವನು ಅರಳಿಸಿತು ಮುಗ್ದ ಮಗುವಿನ ತೆರದಲಿ ನಗುತ ಜೀವಕೆ ಉಲ್ಲಾಸವ ತುಂಬುವನು ಮೋಡದ ಮರೆಯಲಿ ಇಣುಕುವ ಚಂದ್ರನ ಕಾಣುತ ನನ್ನನು ನಾನೇ ಮರೆಯುವೆನು ಪಂಕಜಾ.ಕೆ

ಮಗು..ನಗು

ಮಗು...ನಗು ಅರಳಿದೆ ತನುವು ನಿನ್ನೊಲವ ಸವಿದು ಸಂತಸದ ಹೊನಲು ಹರಿಯುತ್ತಿದೆಇಂದು ಒಲವಿನಾ ಬಳ್ಳಿಯು ಚಿಗುರುತಿದೆ ನಮ್ಮೊಲವಿಗೆ ಸಾಕ್ಷಿಯಾಗಿ ನಗುತಿದೆ ಮನದಲಿ  ಮುದ ತುಂಬಿದೆ ಇನಿಯ ಒಡಲೆಲ್ಲಾಹರಿದಾಡಿನೀಡುವನು  ಕಚಗುಳಿಯ ಕಂದಮ್ಮ ಮನೆ ತುಂಬಾ ನಲಿದಾಡಿ ಕೊಡುವನು ಸಂತಸವ ಬಾಳೆಲ್ಲ ಹರಿದಾಡಿ ಮುದ್ದು ಮಗುವಿನ ಆಟ ಪಾಠ ತುಂಬಿದೆ ಮನೆಯಲಿ ಸಂತಸದ ಕೂಟ ಆತನ ಬಾಲ ಲೀಲೆಗಳೇನು ಚೆನ್ನ ನಂದಗೋಕುಲ ಮಗುವಿರುವ ಮನೆ ಚಿನ್ನ ಬಂಜೆಯೆಂಬ ಸೊಲ್ಲಡಗಿ ಸಂತಸವ ತಂದೆ ನಮ್ಮ ಬಾಳಿಗೆ ತುಂಬಿದ ಹರುಷವನಿಂದೆ ಸಾರ್ಥಕವಾಯಿತು ನನ್ನೀ ಬಾಳು ಇನ್ನಿಲ್ಲ ಮನದಲ್ಲಿ  ಎಂದು ಗೋಳು ಮನೆತುಂಬ ತುಂಬಿದೆ  ಅಳು ನಗು ಮನೆ ಒಳ ಹೊರಗೆಲ್ಲಾ ನಿನ್ನದೇ ಮಗು ನಗುತಿರು ಎಂದೆಂದೂ. ನನ್ನ  ಕಂದ ಬಾಳಲ್ಲಿ ತುಂಬಿರಲಿ ನಿತ್ಯ ಆನಂದ ಪಂಕಜಾ ಕೆ.