Skip to main content

ಸಾಯಿಬಾಬಾ ಭಕ್ತಿಗೀತೆ ನವಪರ್ವ

ಕಲಿಯುಗದ ಕಾಮಧೇನು (ಭಕ್ತಿಗೀತೆ)

ಶಿರಡಿಯಲ್ಲಿ ನೆಲೆಸಿರುವ ಸಾಯಿಬಾಬನೆ
ಭಕ್ತ ಜನರ ಭಕ್ತಿಗೊಲಿವ ಸಾಯಿನಾಥನೇ
 ನಂಬಿದವರ ಕರುಣೆಯಿಂದ ನೀನು ನೋಡುವೆ
 ಕಲಿಯುಗದ ಕಾಮಧೇನು  ಸಾಯಿಬಾಬನೆ

ಬೇಡಿದ ವರಗಳ ನೀಡುವ ಕಾಮಧೇನುವೆ
ಕರುಣೆಯಲಿ ನೋಡೋಮ್ಮೆ ಸಾಯಿನಾಥನೇ
ನಿತ್ಯ ನಿನ್ನ ಸ್ಮರಣೆ ಮಾಡಲು ಭಯವೂ ಎಲ್ಲಿದೆ
ಮನದ ಕಲ್ಮಶವ ಕಳೆದು ನಿನ್ನ ನಿತ್ಯ ಸ್ತುತಿಸುವೆ

ಭಕ್ತ ಜನರ ಪೊರೆವ ನೀನು ಧೀನ ಬಂಧುವೆ
ಸತ್ಯ ಧರ್ಮ ಶಾಂತಿ ಸಾರುವ ದೇವದೂತನೆ
ಎಲ್ಲೇ ಇರಲಿ ಹೇಗೆ ಇರಲಿ ನಿನ್ನ ಸ್ಮರಣೆ ಮಾಡುವೆ ಬೇಗ ಬಂದು ಕಾಯು ನಮ್ಮ ಓಂ ಸಾಯಿರಾಮನೆ

ಕಷ್ಟ ದುಃಖಗಳನು  ನೀನು ಕ್ಷಣದಲ್ಲಿ ಕಳೆಯುವೆ
ಮನಕೆ ಶಾಂತಿ ನೆಮ್ಮದಿಯ ಕೊಡುಎನಗೆ ದೇವನೆ
ಭಕ್ತಿಯಿಂದ ಬೇಡಿಕೊಳ್ಳುವೆ ನಿತ್ಯ ಸಾಯಿರಾಮನೆ
ಇಷ್ಟಾರ್ಥಗಳನೀಡು ನಮಗೆ ಓಂಸಾಯಿರಾಮನೇ

ಪಂಕಜಾ.ಕೆ ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್



Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020