Skip to main content

ಹನಿ ಹನಿ ಇಬ್ಬನಿ ಬಳಗದ ಸ್ಪರ್ಧೆಗಾಗಿ. ಕಳಿಸಿದ ಬರಹಗಳು

[20/04, 12:24 PM] pankajarambhat: ಕುವೆಂಪು ತಂಡ

ಹನಿ ಹನಿ ಇಬ್ಬನಿ  ವಿಸ್ಮಯ ಸ್ಪರ್ಧೆಗಾಗಿ  ಸ್ಪರ್ಧೆ..1

ಹನಿಕವನಗಳು

ಹನಿಕವನ..1

ಬೇಡಿಕೆ

ಕಾಲವನು ಜಯಿಸಿದೆ
ಎಂಬ ಹಮ್ಮಿನಲಿ
ಬೀಗುತಿದ್ದರು ಲೋಕದ ಜನ
ಬಂದ ಕಂಟಕವ ಪರಿಹಾರಕೆ
ತತ್ತರಿಸುತ ಬೇಡುತಿರುವರು
ಅಭಯಕಾಗಿ  ಕಾಣದ  ಶಿವನ 

ಹನಿ ಕವನ 2

ಶಿಕ್ಷೆ
ಪ್ರಕೃತಿಯ ಮಡಿಲಲ್ಲಿತ್ತು
ಆರೋಗ್ಯ ಸಂಪತ್ತು
ಹರಣ ಮಾಡಿದ ಮಾನವ
ಆಗುತ ತಾನು ದಾನವ
ಮಾಡಿದ ಪಾಪದ ಫಲಕೆ
ಕೊಟ್ಟಿರುವಳೇ ಶಿಕ್ಷೆ ಜನಕೆ
ಕಾಲನ ಚಕ್ರವು ತಿರುಗಿದಾಗ
ಲೋಕವೇ ಆಗಿದೆ ಅಡಿಮೇಲು
[21/04, 2:11 PM] pankajarambhat: ಕುವೆಂಪು ತಂಡ 

ಹನಿ ಹನಿ ಇಬ್ಬನಿ  ವಿಸ್ಮಯ ಸ್ಪರ್ಧೆಗಾಗಿ ಸ್ಪರ್ಧೆ  ..2

ಭಾವಗೀತೆ

ನಿರೀಕ್ಷೆ

ಕಾಡಿನ ದಾರಿಯ ಮದ್ಯದಲಿ
ತನ್ನಯ ಮುರುಕಲು ಗುಡಿಸಿಲಲಿ
ಶ್ರೀ ರಾಮನ ದಾರಿಯ ಕಾಯುತಲಿ
ಕುಳಿತಿಹಳು ಶಬರಿಯು ಕಾತರದಿ

ನಿತ್ಯವೂ ಕಾಡನು ಸುತ್ತುವಳು
ಬಗೆ ಬಗೆ ಹೂಗಳ ಕೊಯ್ಯುವಳು
ತರ ತರ ಹಣ್ಣನು ಆರಿಸಿ ಹೆಕ್ಕುತ
ಶ್ರೀ ರಾಮನ ದಾರಿಯ ಕಾಯುವಳು

ಬಂದೇ ಬರುವನು ಎನ್ನುತಲಿ
ಕಣ್ಣನು ಹಿಗ್ಗಿಸಿ  ಇಣುಕುವಳು
ಸಹನೆಯಲಿ ದಾರಿಯ ಕಾಯುತಲಿ
ನಿರೀಕ್ಷೆಯ ತಪದಲಿ ಬಳಲಿದಳು
 
ಹೆಕ್ಕಿದ ಹಣ್ಣಿನ ರುಚಿಯನು ನೋಡಿ
ಸಿಹಿಯಾದ ಹಣ್ಣನು ತೆಗೆದಿಡುತ
ತನ್ನನ್ನು ತಾನೇ ಮರೆಯುವಳು 
ಭಕ್ತಿಯ  ಮನದಲಿ ತುಂಬುತ ಕಾಯುವಳು
[23/04, 2:27 PM] pankajarambhat: ಹನಿ ಹನಿ ಇಬ್ಬನಿ ವಿಸ್ಮಯ ಸ್ಪರ್ಧೆಗಾಗಿ. ಸ್ಪರ್ಧೆ ...3

(ಮಕ್ಕಳ ಕವನ)
ಹುಣ್ಣಿಮೆ ಚಂದಿರ

ಮೋಡದ ಮರೆಯಲಿ ಮುಖವನು 
ಮರೆಸಿ  ಚಂದಿರ ಇಣುಕುವನು

ಬೆಳ್ಳಿಯ ತಟ್ಟೆಯ ತೆರದಲಿ
ಹೊಳೆಯುತ  ಬಾನಲಿ ಚಲಿಸುವನು

ನಾನು ಓಡಲು ತಾನೂ ಓಡುತ
ನನ್ನಯ ಜತೆಯಲಿ ಬರುತಿಹನು

ಹಾಲಿನ ಬೆಳಕನು ಭೂಮಿಗೆ ಹರಡುತ
ಮನಕೆ ಮುದವನು ತುಂಬುವನು

ಗುಂಡಗೆ ಹೊಳೆಯುತ ಬಾನಲಿ ತೇಲುತ
ಚಿಣ್ಣರ ಮನವನು ಸೆಳೆಯುವನು

ತಾರೆಗಳ ತೋಟದ ಮಧ್ಯದಲಿರುತ
ರಾಜನ ತೆರದಲಿ ಕಾಣುವನು

ನನ್ನಯ ಗೆಳತನ ಬಯಸುತ ಚಂದಿರ
ನನ್ನೆಡೆ  ನೋಡಿ ನಗುತಿಹನು
 
ರೆಕ್ಕೆಯು ಇದ್ದರೆ  ಚಂದಿರ ಲೋಕಕೆ
ನಾನೂ ಹೋಗುವೆ ಬಿಡು ಅಮ್ಮ
[24/04, 1:52 PM] pankajarambhat: ಕುವೆಂಪು ತಂಡ 

ಸ್ಪರ್ಧೆಗಾಗಿ

ಅಳಲು

ಒಂದೇ ಒಂದು ಬಾರಿ  ನಿನ್ನ ನೋಡಬೇಕೆನಿಸಿದೆ
ಮನಸಿಂದು ನಿನ್ನನೇ ನೆನೆಯುತ್ತಿದೆ
ಈ ವಿರಹವಾ ನಾ ಸಹಿಸೆನು ಬಾಳೆಲ್ಲಾ ಬರಿದಾಗಿದೆ

ನನ್ನ ಹೃದಯವ ಬೆಳಗೊ ಚಂದಿರ ನೀನು
ಪ್ರೀತಿಯ ಹೂವೊಂದು ನಿನಗಾಗಿ ಅರಳಿದೆ
ನೀನಿಲ್ಲದ ಬಾಳು ಶಶಿಯಿಲ್ಲದಾ ಬಾನಿನಂತೆ ಕಳೆಗೆಟ್ಟಿದೆ
ನನ್ನೆದೆಯ ತುಂಬೆಲ್ಲಾ ನೀನೇ ಇರುವೆ  ನೀನಿಲ್ಲದಾ  ದಿನ ಸಾಗದಾಗಿದೆ


ಬಾ ಬೇಗ ನನ್ನ ನಲ್ಲಾ  ನಿನಗಾಗಿ ಕಾದಿಹೆನು
ನೂರೊಂದು ಕನಸುಗಳು ಮನದಲಿದೆ
ನನಸು ಮಾಡಲದನು ನೀನು ಬರಬೇಕಿದೆ
ಬಾಂದಳದ ಶಶಿಯಂತೆ ನೀ ಬರಲು ಬಾಳೆಲ್ಲಾ ಬೆಳಕಾಯಿತು
ನಾ ಕಂಡ ಕನಸೆಲ್ಲಾ ನನಸಾಯಿತು
ಮನವಿಂದು ಹಕ್ಕಿಯಾಗಿ ಹಾರಡಿದೆ

ಬದುಕಲ್ಲಿ ಚೆಲು ಹೂವೊಂದು ಬಿರಿದರಳಿದೆT
ನಿನ್ನೊಡನಾಟವು ಕುಶಿ  ತಂದಿದೆ
 ಬಾಳೆಲ್ಲಾ  ಜತೆಯಾಗಿ ಸಾಗೋಣವೇ
ಕನಸನ್ನು ನನಸಾಗಿಸುತ ನಲಿಯೋಣವೇ
[25/04, 10:27 AM] pankajarambhat: ಕುವೆಂಪು ತಂಡ

ಹನಿಕವನಗಳು

1..ಕನಸಿನ ಕನ್ಯೆ 

ಕಣ್ಣಲ್ಲಿ   ಕರೆದೆ 
ಮನದಲ್ಲಿ ನಿಂದೆ
ಓ ನನ್ನ ಒಲವೆ
ನೀನಿರಲು ಗೆಲುವೆ
ಜಗವೆಷ್ಟು ಸುಂದರ
ಬಾಳೊಂದು ಬಂಧುರ
ತುಂಬಿದೆ ನಿನ್ನ ಒಲವು
ತಂದಿದೆ ನನಗೆ ಗೆಲುವು

 2  ಒಲವ ಹೂವು

 ಒಲವು ಎನ್ನುವುದು ಒಂದು ಹೂವು
ನೀ ಜತೆಯಲಿರಲು ತುಂಬುವುದು ಗೆಲುವು
ನಿನ್ನೊಡನಾಟದಲಿದೆ ಏನೋ  ತಂಪು
ಮನಸಲಿ ತುಂಬಿದೆ ಮಲ್ಲಿಗೆಯ   ಕಂಪು
ಒಲವಿರಲು ಬಾಳೊಂದು ನಂದನ
ಅನುರಾಗದಲೆಗಳಲಿ ತೇಲುವ ಹೂ ಬನ
[25/04, 12:56 PM] pankajarambhat: ಕುವೆಂಪು  ತಂಡ 

ಚುಟುಕುಗಳು

1 ಕಾಲನ ಕರೆ

ನಮ್ಮ ಜೀವನ ಶಾಶ್ವತವಲ್ಲ 
ಕಾಲನಕರೆ ಬರುವ ಮೊದಲು
ಮಾಡಬೇಕು  ನಾವು ಸತ್ಕರ್ಮಗಳ
ಮನಸ್ಸನ್ನು ಹದಗೊಳಿಸುತ ದಿನವೂ

2 ತೆರೆದಮನಸು

ಯಾವಾಗಲೂ ತೆರೆದ  ಮನಸು ಇರಬೇಕು
ಎಲ್ಲರೊಡನೆ  ನಗುತ ಬೆರೆಯಬೇಕು
ಸುಮ್ಮನೆ ಕಾಲಹರಣ ಮಾಡದೆ
ಜೀವನವನ್ನು ಮನಸಾರೆ ಅನುಭವಿಸಬೇಕು
[25/04, 2:43 PM] pankajarambhat: ಕುವೆಂಪು ತಂಡ

ಚಿತ್ರ ಕವನ ಸ್ಪರ್ಧೆಗಾಗಿ

ಬಡತನದ ಬವಣೆ

ಬೆಳಕು ಹರಿದರೂ ಬಿಡದು ಚಿಂತೆ
ಹೆಂಡತಿ ಮಕ್ಕಳಿಗೆ ಆಗಿದೆ ಅರೆಹೊಟ್ಟೆ
ನಿತ್ಯ ದುಡಿದು ಉಣ್ಣುವ ಜನರಿವರು
ಲಾಕ್ ಡೌನ್ ನಿಂದಾಗಿ ಬೀದಿಯಲಿರುವರು

ಮನೆ ಮಠಗಳಿಲ್ಲದ ಅಲೆಮಾರಿಗಳು
ಮನೆಯಲ್ಲೇ ಇರಿ ಎಂದರೆ ಎಲ್ಲಿರಬೇಕವರು
ಕುಳಿತಿರುವರು  ತೂಬಿನೆಡೆಯಲ್ಲಿ
ಹಸುಗೂಸುಗಳ ಹಿಡಿದು ತೆಕ್ಕೆಯಲಿ

ಅತ್ತು ಕರೆದು ಕಣ್ಣುಗಳು ಮಡುಕಟ್ಟಿವೆ
ಎಣ್ಣೆ ಕಾಣದೆ ಕೂದಲು ಜಡೆಕಟ್ಟಿವೆ
ಖಾಲಿ ಪಾತ್ರೆಗಳು ಹೇಳುತಿದೆ  ಬವಣೆ
ಅರೆಹೊಟ್ಟೆಯಲಿರುವ ಇವರ ಕಥೆ

ಚಿಂತಿಸುತ ಕುಳಿತಿರುವ ಮೇಲ್ಗಡೆ
ಹೆಂಡತಿ ಮಕ್ಕಳ ಸಾಕುವ ಪರಿ ತಿಳಿಯದೆ
ಚಿಗುರುವ ಕನಸುಗಳು ಮುರುಟಿವೆ
ಬದುಕದಾರಿಯಲಿ ಬಡತನ ಹಾಸು ಹೊಕ್ಕಿದೆ
[27/04, 11:18 AM] pankajarambhat: ಕುವೆಂಪು ತಂಡ

ಶಾಯರಿ ..1
ನಿನ್ನ ಮೋಹಕ ಕಾಂತಿಯಲ್ಲಿ
ಚಂದ್ರಕಾಂತಿ ಕುಗ್ಗಿತಲ್ಲ ನಲ್ಲೆ
ಮನಸು ನಿನ್ನ ಧ್ಯಾನದಲ್ಲಿ
ತೇಲಿ  ಹೋಯಿತಲ್ಲಾ ನಲ್ಲೆ

ಶಾಯರಿ.2
ರಾತ್ರಿಯಲ್ಲಿ ನಿನ್ನ ನೆನಪಾಗುತಿದೆ ನಲ್ಲ
ಕನಸಲ್ಲೂ ಬಂದು ಕಾಡುತಿರುವಿಯಲ್ಲ
ಅಂಗಳದಲ್ಲಿ ಬೆಳದಿಂಗಳು ಹರಡಿದೆ ನಲ್ಲ
ತಂಪುಗಾಳಿಯೂ ಮನತಣಿಸುತ್ತಿಲ್ಲವಲ್ಲ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...