ಜಡೆ ಕವನ
ಬಾನಲಿ ಹೊಳೆಯುವ ಬೆಳ್ಳಿಯ ಚಂದಿರ
ಚಂದಿರ ಬರಲು ಧರೆಯಲಿ ನಲಿವು
ನಲಿಯುವ ಮನದಲಿ ಅರಳಿದೆ ನಗೆಯು
ನಗೆಯು ಬಾಳಿಗೆ ತುಂಬುವುದು ಹುರುಪು
ಹುರುಪಲಿ ಕೆಲಸವ ಮಾಡಲು ಗೆಲುವು
ಗೆಲುವು ಕೊಡುವುದು ಮನಸಿಗೆ ಸ್ಫೂರ್ತಿ
ಸ್ಪೂರ್ತಿಯು ಇದ್ದರೆ ಬರುವುದು ಶಕ್ತಿ
ಶಕ್ತಿಯು ತುಂಬಲು ಬೇಕು ಬೇಳೆ ಕಾಳು
ಬೇಳೆಕಾಳು ಬೆಳೆಯಲು ಪಡಬೇಕು ಕಷ್ಟ
ಕಷ್ಟ ಪಟ್ಟರೆ ಸಿಗಬಹುದು ನೆಮ್ಮದಿ ಶಾಂತಿ
ಶಾಂತಿಯ ಹುಡುಕಲು ಕಾಯಕ ಮಾಡಿ
ಕಾಯಕ ಮಾಡುತ ತೃಪ್ತಿಯ ಪಡುವನು ರೈತ
ರೈತನು ಬೆಳೆ ಬೆಳೆದರೆ ದೇಶ ಸಮೃದ್ದಿ
ಸಮೃದ್ದಿ ಬೆಳೆ ರೈತನ ಬಾಳಿಗೆ ನಲಿವು
ನಲಿಯಲು ಕಾಣುವುದು ಬೆಳ್ಳಿಮೋಡ ಬಾನಲಿ
ಪಂಕಜಾ.ಕೆ.
Comments
Post a Comment