World News in Kannada: Latest International World News in Kannada | Vijaya Karnataka
http://vijaykarnataka.indiatimes.com/rssfeeds/11181729.cms
Copyright:(C) 2020 Bennett Coleman & Co. Ltd, http://in.indiatimes.com/policyterms/1554651.cms
More Channels
Showcase
Articles on this Page
- 01/02/18--15:30: _ಮನೆ ಮದ್ದು
- 01/03/18--02:00: _ಮನೆ ಮದ್ದು:ರಕ್ತಹೀನತೆ...
- 01/04/18--15:30: _ಮನೆ ಮದ್ದು: ಮುಖದ ಕಾಂ...
- 01/05/18--15:30: _ಮನೆ ಮದ್ದು: ಕಣ್ಣಿನ ಸ...
- 01/06/18--16:00: _ಮನೆ ಮೆಡಿಸಿನ್: ಕಿತ್...
- 06/17/17--17:00: _ಶಿಶುಗೀತೆ: ಮರಳಿ ಶಾಲೆಗೆ
- 07/08/17--17:00: _ಶಿಶುಗೀತೆ: ಗಾಳಿಪಟ
- 07/15/17--17:00: _ಶಿಶುಗೀತೆ: ಪಂಜರದ ಗಿಳಿ
- 07/22/17--17:00: _ಶಿಶುಗೀತೆ: ಕಾಮನಬಿಲ್ಲ...
- 07/29/17--17:00: _ಶಿಶುಗೀತೆ: ಮಳೆಗಾಲ
- 08/05/17--17:00: _ಶಿಶುಗೀತೆ: ಪಿಂಕಿಯ ರಕ...
- 08/12/17--17:00: _ಶಿಶುಗೀತೆ: ಜಯಗೀತ
- 08/19/17--20:30: _ಶಿಶುಗೀತೆ
- 09/09/17--17:00: _ಶಿಶುಗೀತೆ: ಬಾರೆ ಶಾಲೆಗೆ
- 10/07/17--17:00: _ಶಿಶುಗೀತೆ: ಮುದ್ದು ಟೋನಿ
- 11/11/17--16:00: _ಶಿಶುಗೀತೆ: ತಾಯಿ ನಾಡು
- 12/02/17--16:00: _ಶಿಶುಗೀತೆ: ಯೋಧ ಗೀತೆ
- 12/09/17--16:00: _ಶಿಶುಗೀತೆ: ಆಕಾಶ ದೇವಿ
- 12/30/17--16:00: _ಶಿಶುಗೀತೆ: ಬಾಲ್ಯ ಬೇಕ...
- 01/06/18--16:00: _ಶಿಶುಗೀತೆ: ಭೂಮಿ ಬಾಡಿ...
Channel Description:
ಬಾಯಿ ಹುಣ್ಣು ಗುಣ ಮಾಡುವ ಹಾಗಲ ರಸ
-ಹಾಗಲ ಒಂದು ಬಳ್ಳಿ . ಹೆಚ್ಚಾಗಿ ಹಾಗಲ ಕಾಯಿಯನ್ನು ತರಕರಿಯಾಗಿ ಉಪಯೋಗಿಸುವರು. ಇದರಲ್ಲಿ ಹಳದಿ ಹೂವು ಬಿಡುತ್ತದೆ. ಎಲ್ಲರಿಗೂ ತಿಳಿದಂತೆ ಮಧುಮೇಹ ಇರುವವರು ಇದನ್ನು ಹೆಚ್ಚಾಗಿ ಬಳಸುತ್ತಾರೆ . ಇದಲ್ಲದೆ ಹಾಗಲ ಕಾಯಿಯಲ್ಲಿ ಬಹಳ ಔಷಧೀಯ ಗುಣಗಳಿದೆ.
-ಹಾಗಲ ಕಾಯಿಯ ರಸವನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಿರುವ ಕಿವಿಗೆ ಎರಡರಿಂದ ಮೂರು ಹನಿಗಳು ಹಾಕಿದರೆ ಕಿವಿ ನೋವು ಗುಣವಾಗುತ್ತದೆ.
-ಪದೇ ಪದೇ ಬಾಯಿ ಹುಣ್ಣಿನ ಸಮಸ್ಯೆ ಕಾಡುತ್ತಿದ್ದರೆ ಹಾಗಲ ಕಾಯಿಯ ರಸಕ್ಕೆ ಸೀಮೆ ಸುಣ್ಣವನ್ನು ಬೆರೆಸಿ ಹುಣ್ಣಿನ ಮೇಲೆ ಲೇಪಿಸಿದರೆ ಹುಣ್ಣು ಬೇಗ ಮಾಯತ್ತದೆ.
-ಹಾಗಲ ಎಲೆಗಳಿಂದ ರಸ ತೆಗೆದು, ಆ ರಸವನ್ನು ಅಂಗಾಲುಗಳಿಗೆ ಹಚ್ಚಿದರೆ ಅಂಗಾಲು ಉರಿ ಕಡಿಮೆಯಾಗುತ್ತದೆ.
-ಹಾಗಲ ಕಾಯಿಯನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ. ಎರಡರಿಂದ ಮೂರು ಗ್ರಾಂ ಹಾಗಲ ಪುಡಿಗೆ ಒಂದು ಚಮಚ ಜೇನುತುಪ್ಪ ಅಥವಾ ನೀರಿ ನೋಡನೆ, ದಿನಕ್ಕೆ 3 ಬಾರಿ ಊಟದ ಮುಂಚೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
-ಹೂಟ್ಟೆಯ ಹುಳುವಿನ ಸಮಸ್ಯೆಗೆ 10 - 12 ಹಾಗಲ ಎಲೆಗಳ ರಸವನ್ನು ತೆಗೆದು 3 ರಿಂದ 4 ದಿನಗಳ ಕಾಲ ಸೇವಿಸಿದರೆ ಹೊಟ್ಟೆ ಹುಳುವಿನ ಸಮಸ್ಯೆ ನಿವಾರಣೆಯಾಗುತ್ತದೆ.
ರಕ್ತಹೀನತೆ ನಿವಾರಿಸುವ ಏಲಕ್ಕಿ
-ಏಲಕ್ಕಿ ಪುಡಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಬಾಯಿ ಹುಣ್ಣು ಗುಣವಾಗುತ್ತದೆ.
-ಉರಿ ಮೂತ್ರವಿದ್ದಲ್ಲಿ ಏಲಕ್ಕಿ ಪುಡಿಯ ಜೊತೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ.
-ಏಲಕ್ಕಿಯ ಎಲೆ ಮತ್ತು ಬೇರಿನ ಕಷಾಯವನ್ನು ಸೇವಿಸಿದರೆ ಭೇದಿ ನಿಲ್ಲುತ್ತದೆ.
-ಹೊಟ್ಟೆ ನೋವಿನಲ್ಲಿ ಏಲಕ್ಕಿ ಪುಡಿಯನ್ನು ಹಿಪ್ಪಲಿ ಬೇರಿನ ಪುಡಿ ಮತ್ತು ತುಪ್ಪದ ಜೊತೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
-ಎರಡರಿಂದ ಮೂರು ಏಲಕ್ಕಿ ಹಾಕಿ ಮಾಡಿದ ಕಷಾಯಕ್ಕೆ 4ರಿಂದ 5 ಪುದೀನಾ ಎಲೆಯ ರಸ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
-ರಕ್ತಹೀನತೆ ಇದ್ದಲ್ಲಿ, ಒಂದು ಚಿಟಿಕೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ಅರಿಶಿನದ ಪುಡಿಯನ್ನು ಒಂದು ಲೋಟ ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಹೀನತೆ ನಿವಾರಣೆಯಾಗುತ್ತದೆ.
-ನಿಯಮಿತವಾಗಿ ಏಲಕ್ಕಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿ ವೃದ್ಧಿಸುತ್ತದೆ.
- ವಾತ, ಪಿತ್ತ, ಕಫ್, ದಂತ ರೋಗ ಮತ್ತು ಬಾಯಿ ವಾಸನೆ ನಿವಾರಣೆಗೆ ಏಲಕ್ಕಿ ಉತ್ತಮ ಪರಿಹಾರ.
-ಆ್ಯಸಿಡಿಟಿ ನಿವಾರಣೆಗೆ ಒಂದೆರಡು ಏಲಕ್ಕಿಯನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಸಿ ನಂತರ ಕುಡಿದರೆ ಆ್ಯಸಿಡಿಟಿ ನಿವಾರಣೆಯಾಗುತ್ತದೆ.
ಚರ್ಮದ ಕಾಂತಿ ಹೆಚ್ಚಿಸುವ ಚಕ್ಕೆ ಪುಡಿ
-ಮಂಡಿ ನೋವು ಮತ್ತು ಊತ ವಿದ್ದರೆ ಪ್ರತಿ ದಿನ ಬೆಳಗ್ಗೆ ಒಂದು ಚಮಚ ಚಕ್ಕೆ ಪುಡಿಗೆ 2 ಚಮಚ ಜೇನುತುಪ್ಪ ಕಲಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
-ಅರ್ಧ ಚಮಚ ಚಕ್ಕೆ ಪುಡಿಯನ್ನು ಒಂದು ಚಿಟಿಕೆ ಜಾಯಿಕಾಯಿ ಪುಡಿ ಮತ್ತು ಅರ್ಧ ಲೋಟ ಮೊಸರಿನೊಂದಿಗೆ ಸೇವಿಸಿದರೆ ಭೇದಿ ನಿಲ್ಲುತ್ತದೆ .
-ಮೊಡವೆಗಳು ಮತ್ತು ಕಪ್ಪು ಕಲೆಗಳಿದ್ದರೆ ಒಂದು ಚಮಚ ಚಕ್ಕೆ ಪುಡಿಯನ್ನು ಎರಡರಿಂದ ಮೂರು ಚಮಚ ನಿಂಬೆ ರಸದಲ್ಲಿ ಕಲಸಿ ಲೇಪನ ಮಾಡಿದರೆ ಮೊಡವೆ ಹಾಗೂ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ .
- ಅರ್ಧ ಚಮಚ ಚಕ್ಕೆ ಪುಡಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ ಸೇರಿಸಿ ಕಷಾಯ ತಯಾರಿಸಿ ಆ ಕಷಾಯವನ್ನು ತಣ್ಣಗಾದ ಮೇಲೆ ಜೇನುತುಪ್ಪದೊಂದಿಗೆ ಕುಡಿದರೆ ಗಂಟಲು ನೋವು, ಶೀತ, ಕೆಮ್ಮು ಕಡಿಮೆಯಾಗುತ್ತದೆ.
- ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಚರ್ಮ ಮೃದುವಾಗಲು ಚಕ್ಕೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಲೇಪಿಸಬೇಕು.
-ಚಕ್ಕೆಯನ್ನು ಅರ್ಧ ಟೀ ಚಮಚದಷ್ಟು ಬಳಸುವುದರಿಂದ ರಕ್ತದಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿ, ಮಧುಮೇಹವನ್ನು ನಿಯಂತ್ರಿಸುತ್ತದೆ.
-ಚಕ್ಕೆ ಹಲ್ಲುನೋವು, ಅಜೀರ್ಣ, ವಾಕರಿಕೆ, ವಾಂತಿ, ಅತಿಸಾರ ಮತ್ತು ಬಾಯಿ ದುರ್ವಾಸನೆಯನ್ನು ತಡೆಗಟ್ಟಲು ಸಹಕಾರಿ.
ಕಣ್ಣಿನ ಸಮಸ್ಯೆ ದೂರ ಮಾಡುವ ಕ್ಯಾರೆಟ್
- ಕ್ಯಾರೆಡ್ ಭೂಮಿಯ ಕೆಳಗೆ ಬೆಳೆಯುವ ಗಡ್ಡೆ ತರಕಾರಿ. ಈ ತರಕಾಯಿಯಲ್ಲಿ ವಿಟಮಿನ್ ಎ ಹೇರಳವಾಗಿದೆ .
-ಕ್ಯಾರೆಟ್ನ ರಸಕ್ಕೆ ಸಕ್ಕರೆ, ಕರಿಮೆಣಸಿನ ಪುಡಿಯನ್ನು ಹಾಕಿ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಕಫ ಯುಕ್ತ ಕೆಮ್ಮು ಕಡಿಮೆಯಾಗುತ್ತದೆ.
-ಕಣ್ಣಿನ ಸಮಸ್ಯೆಗಳಾದ ಜಿಬುರು ಕಟ್ಟುವುದು, ಉರಿ, ಗುಳ್ಳೆಗಳಾಗಿದಲ್ಲಿ ಹಸಿಯ ಕ್ಯಾರೆಟ್ ತುರಿಯನ್ನು ತೆಳ್ಳನೆಯ ನೀರು ಹಿಂಡಿದ ಬಟ್ಟೆಯಲ್ಲಿ ಹಾಕಿ ಇದನ್ನು ಕಣ್ಣಿನ ಮೇಲೆ 1 ಗಂಟೆ ಇಟ್ಟರೆ ಕಣ್ಣಿನ ತೊಂದರೆಗಳು ಗುಣವಾಗುತ್ತದೆ.
- ಬೇಯಿಸಿದ ಕ್ಯಾರೆಟ್ ಅನ್ನು ಕಲ್ಕ ಮಾಡಿ ಸುಟ್ಟ ಗಾಯದ ಮೇಲೆ ಲೇಪಿಸಿದರೆ ಉರಿ ಕಡಿಮೆಯಾಗುತ್ತದೆ.
-ಕಣ್ಣಿನ ನರಗಳ ಶಕ್ತಿ ಹೆಚ್ಚಿಸುವುದಕ್ಕೆ ಮತ್ತು ದೃಷ್ಟಿ ದೋಷವನ್ನು ದೂರ ಮಾಡುವುದಕ್ಕೆ ನಿಯಮಿತ ರೂಪದಲ್ಲಿ ಹಸಿಯಾದ ಕ್ಯಾರೆಟ್ ಸೇವಿಸಬೇಕು.
-ಕ್ಯಾರೆಟ್ ರೋಗ ನಿರೋಧಕ ಶಕ್ತಿ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಕೊಲೆಸ್ಟ್ರಾಲ್ ಕಡಿಮೆಮಾಡುತ್ತದೆ.
-ಕಿತ್ತಳೆ ಮರದ ಎಲ್ಲಾ ಭಾಗಗಳು ಔಷಧೀಯ ಗುಣಗಳನ್ನು ಹೊಂದಿವೆ. ಇದರ ಹಣ್ಣು, ಹೂವು, ಸಿಪ್ಪೆಗಳಲ್ಲಿ ಕೆಲವು ಕಾಯಿಲೆಯನ್ನು ನಿವಾರಿಸುವ ಗುಣಗಳಿವೆ.
-ಒಂದು ಲೋಟ ಕಿತ್ತಳೆ ಹಣ್ಣಿನ ರಸಕ್ಕೆ ಒಂದು ಚಮಚ ಉಪ್ಪು, ಒಂದು ಚಮಚ ಜೇನುತುಪ್ಪ ಹಾಕಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಕಫ ಮತ್ತು ಕೆಮ್ಮು ಕಡಿಮೆಯಾಗುತ್ತವೆ.
-ಒಂದು ಲೋಟ ಕಿತ್ತಳೆ ಹಣ್ಣಿನ ರಸಕ್ಕೆ ಅರ್ಧ ಚಮಚ ಉಪ್ಪು, ಅರ್ಧ ಚಮಚ ಕರಿಮೆಣಸಿನ ಪುಡಿ ಹಾಕಿ ಸೇವಿಸಿದರೆ ಅಜೀರ್ಣ, ವಾಕರಿಕೆ ಮತ್ತು ವಾಂತಿ ಕಡಿಮೆಯಾಗಿ ನಾಲಿಗೆಯ ರುಚಿ ಹೆಚ್ಚುತ್ತದೆ.
-ತಲೆಗೂದಲು ಉದುರುವಿಕೆ, ತಲೆ ಹೊಟ್ಟು ಸಮಸ್ಯೆಗಳಿದ್ದರೆ ಕಿತ್ತಳೆಯ ಹೂವುಗಳನ್ನು ತಲೆಗೆ ಚೆನ್ನಾಗಿ ತಿಕ್ಕಿ. ಇದರಿಂದ ಸಮಸ್ಯೆ ನಿವಾರಣೆಯಾಗುತ್ತದೆ.
-ಕಿತ್ತಳೆಯ ತಾಜಾ ಸಿಪ್ಪೆಯನ್ನು ಮುಖಕ್ಕೆ ತಿಕ್ಕಿ ಐದು ನಿಮಿಷ ಬಿಟ್ಟು ಬೆಚ್ಚನೆಯ ನೀರಲ್ಲಿ ತೊಳೆದರೆ ಮುಖದ ಮೇಲಿನ ಮೊಡವೆ, ಕಪ್ಪು ಚುಕ್ಕೆಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.
-ಶರೀರದ ಉಷ್ಣತೆ ಹೆಚ್ಚಾಗಿ ಕುರುವಾಗಿದ್ದರೆ ಕಿತ್ತಳೆ ಸಿಪ್ಪೆಯನ್ನು ಜಜ್ಜಿ ಕುರುವಿನ ಸುತ್ತಲೂ ಲೇಪಿಸಿದರೆ ಕುರು ಹಣ್ಣಾಗಿ ಬೇಗನೇ ಮಾಯುತ್ತದೆ.
-ಮೂರು ಚಮಚ ಕಿತ್ತಳೆ ಸಿಪ್ಪೆಯ ಕಷಾಯಕ್ಕೆ ಮೂರು ಚಮಚ ನಿಂಬೆ ರಸ ಸೇರಿಸಿ ಸೇವಿಸಿದರೆ ನಾಲಿಗೆಯ ರುಚಿ ಹೆಚ್ಚಾಗಿ ಹಸಿವು ಕೂಡಾ ಹೆಚ್ಚುತ್ತದೆ.
ಕಲಿಯುವ ಶಾಲೆಯ ಮಕ್ಕಳಿಗೆ
ಮುಗಿಯಿತು ರಜೆಯ ಮಜವು
ಮುಂದಿನ ಕಲಿಕೆಗೆ ಬಾಗಿಲ ತೆರೆದು
ಸ್ವಾಗತಿಸಿದೆ ಶಾಲಾ ದೇಗುಲವು
ಹರುಷದಿ ಆಡುತ ಕುಣಿಯುತಲಿ
ಕಳೆದ ರಜೆಯ ಮಜದಾನಂದ
ಓದು ವ್ಯಾಸಂಗ ಆಯಾಸವನು
ಮರೆಯಿಸಿತು ಬಲು ಮುದದಿಂದ
ಯಾವುದೆ ಕೆಲಸದ ನಡುವಿರಬೇಕು
ಶ್ರಮ ನೀಗಿಸಲು ವಿಶ್ರಾಂತಿ
ದಶ ಮಾಸಗಳು ದಣಿವ ಮಕ್ಕಳಿಗೆ
ಸೂಟಿ ನೀಡುವುದು ಮನಃಶಾಂತಿ
ಊಟದ ಜೊತೆಗೆ ಉಪ್ಪಿನಕಾಯಿ
ನೆಂಚಿಕೊಂಡರೆ ರುಚಿ ಹೆಚ್ಚು
ಜ್ಞಾನ ಭೋಜನದ ಮಧ್ಯದಲಿ
ಬಿಡುವಿರೆ ಕಲಿಕೆಯು ಅಚ್ಚುಮೆಚ್ಚು
ಮುಂದಿನ ಕಲಿಕೆಗೆ ಬೇಸಿಗೆ ಸೂಟಿ
ಪುನಶ್ಚೇತನವ ತುಂಬುವುದು
ಅಭ್ಯಾಸ ಅವಧಿ ಹರಣ ಮಾಡದೆ
ಕಲಿತರೆ ಯಶಸ್ಸು ಲಭಿಸುವುದು
ಗುರುಗಳ ಜೊತೆಗಿನ ಕಲಿಕೆಯ ಆಟ
ಸಾಗಲಿ ಸಂತಸ ಶ್ರಮದಿಂದ
ಕಲಿವಿನ ಫಲವನು ಪಡೆದರೆ ಮಾತ್ರ
ಬದುಕಬಹುದು ಗೌರವದಿಂದ
ಹೊರಾ.ಪರಮೇಶ್ ಹೊಡೇನೂರು
ಬಣ್ಣ ಬಣ್ಣದ ಹಾಳೆಗಳು
ಬಿದಿರಿನ ಎರಡು ಕಡ್ಡಿಗಳು
ಬಿಲ್ಲಿನ ಹಾಗೊಂದನು ಬಗ್ಗಿಸಿದೆ
ಬಾನದ ಹಾಗೊಂದ ನಿಲ್ಲಿಸಿದೆ
ಹಾಳೆಯ ಇವಕೆ ಅಂಟಿಸಿದೆ
ಸೂತ್ರವ ಅಜ್ಜಗೆ ಹೇಳಿ ಮಾಡಿಸಿದೆ
ಬಾಲಂಗೋಚಿಗೆ ಅಮ್ಮ ಕೊಟ್ಟಳು
ತನ್ನಯ ಹರಿದ ಸೀರೆ ತುಂಡನು
ಅಪ್ಪ ಕೊಟ್ಟರು ಎರಡು ರೂಪಾಯಿ
ತರಲು ದಾರದ ಉಂಡಿಯನು
ದಾರವ ತಂದೆ ಬಾಲವ ಕಟ್ಟಿದೆ
ಹಾರಿಸೇ ಬಿಟ್ಟೆ ಗಾಳಿಪಟ
ಹಾರಿತು ಮೇಲೆ ದೂರದೂರಕೆ
ಬಣ್ಣ ಬಣ್ಣದ ನನ್ನ ಪಟ
ತಿರುವಾ ಮುರುವಾ ಆಯಿತು ತಾನು
ಗಾಳಿಯ ವೇಗಕೆ ತಲೆಬಾಗಿ
ಎಳೆದೆ ಅದನು ಹತ್ತಿರಕೆ
ಮತ್ತೆ ಬಿಟ್ಟೆ ದೂರಕ್ಕೆ
ಹಾರಿತು ಹಾರಿತು ನನ್ನ ಪಟ
ಹಕ್ಕಿಯ ಹಾಗೆ ಜಾಣ ಪಟ
ಕೃಷ್ಣ ಶ್ರೀಕಾಂತ ದೇವಾಂಗಮಠ
ಚುಂಕಿ ಪಿಂಕಿ ರಜೆಯಲ್ಲೊಮ್ಮೆ
ತೋಟಕೆ ಹೋದರು
ಪುಟ್ಟ ಗಿಳಿ ಮರಿಗಳ ಅಂದಕೆ
ಮಾರು ಹೋದರು
ಕೆಂಪು ಕೊಕ್ಕು ಹಸಿರು ಮೈ
ಎಂಥ ಚೆಂದವು
ಮುದ್ದಿನಿಂದ ಸಾಕುವೆವೆಂದು
ಮನೆಗೆ ತಂದರು
ಸುಂದರ ಪಂಜರ ಸೇರಿ ಗಿಳಿ
ಮಾತು ಕಲಿತವು
ಹೋಗಿ ಬನ್ನಿರೆನುತ ಎಲ್ಲರ
ಪ್ರೀತಿ ಪಡೆದವು
ರಾಮ ರಾಮ ಎನುತಾ ತಾವೂ
ನಾಮ ಜಪಿಸುತಾ
ಅಜ್ಜ ಅಜ್ಜಿ ಅಕ್ಕರೆಯಿಂದಾ
ದಪ್ಪನಾದವು
ಮಕ್ಕಳು ಮಂದಿ ಇಲ್ಲದ ವೇಳೆ
ಠಕ್ಕ ಬೆಕ್ಕು ಬಂದಿತು
ರಕ್ಕಸನಂತೆ ಹೆಣ್ಣು ಗಿಳಿಯ
ಮುಕ್ಕಿ ಮುಗಿಸಿತು
ಗಂಡು ಗಿಳಿಯು ಹೆದರಿ ಹೆದರಿ
ಮೂಲೆ ಸೇರಿತು
ಗೆಳತಿಯನ್ನು ನೆನೆದು ನೆನೆದು
ಸೊರಗಿ ಹೋಯಿತು
ಗಿಳಿಯ ಸ್ಥಿತಿಯ ಕಂಡು ಅಪ್ಪ
ಮರುಕಪಟ್ಟರು
ಹಣ್ಣು ಹಾಲು ಹಾಕಲು ಅಮ್ಮ
ವ್ಯರ್ಥವಾಯಿತು
ಪಂಜರದಲಿ ಗಿಳಿಯನೆಂದೂ
ಕೂಡಬೇಡಿರಿ
ಬಂಧನವಿಲ್ಲದೆ ಬದುಕಲವು
ಬಿಟ್ಟು ಕಳಿಸಿರಿ
ಚಂದ್ರೇಗೌಡ ನಾರಮ್ನಳ್ಳಿ
ಕಾಮನಬಿಲ್ಲೇ ಕಾಮನಬಿಲ್ಲೇ
ಬಂದೆನ್ನ ಅಂಗೈಯೊಳಗೆ ಸೇರೆ
ನಿನ್ನೊಗಿನ ಏಳು ಬಣ್ಣಗಳು
ಬಗೆ ಬಗೆಯ ಸೊಬಗಿನ ಹೂಗಳು
ತಾಜಾ ತಾಜಾ ಸ್ಫಟಿಕದಲ್ಲಿ
ಕುಳಿವ ನೀನು ವೈಲೆಟ್ ಬಣ್ಣ ಹೊತ್ತಿರುವೆ
ಹೊಳೆವ ಶಂಕಪುಷ್ಪದಲ್ಲಿ
ಕುಳಿತ ನೀ ಇಂಡಿಗೊ ಬಣ್ಣ ತಳೆದಿರುವೆ
ನಳ ನಳಿಸುವ ನೀಲಿ ಹೂನಲ್ಲಿ ಕುಳಿತ ನೀ
ಬಟ್ಟೆಗಳಿಗೆ ಬಣ್ಣ ತುಂಬುವ ಬ್ಲೂ ಬಣ್ಣ ನೀಡುವೆ
ಬಗೆ ಬಗೆಯ ಎಲೆಗಳಿಗೆ ಹಸಿರ ತುಂಬಿ
ಉಸಿರ ನೀಡಿದವಳು ನೀನಲ್ಲವೆ
ಕಾಮನಬಿಲ್ಲೇ ಕಾಮನಬಿಲ್ಲೇ
ಬಂದೆನ್ನ ಅಂಗೈಯೊಳಗೆ ಸೇರೆ
ನಿನ್ನೊಗಿನ ಏಳು ಬಣ್ಣಗಳು ನೀಡುವವು
ನಿತ್ಯ ನೂತನ ಸೊಬಗಿನ ಹೂಗಳು
ಪಕ ಪಕ ಸೂರ್ಯಕಾಂತಿ ಪಕಳೆಗಳಿಗೆ
ಚಿನ್ನದ ಬಣ್ಣ ಸುರಿಸಿ ಹಳದಿ ಆಗಿ ಕುಳಿವೆ
ಮತ್ತ ತರಿಸುವ ಮುತ್ತುಗದ ಹೂವಿಗೆ
ಆರೆಂಜ್ ಹೊಂಬಣ್ಣ ಸುರಿಸಿ ಆಕರ್ಷಕ ಎನಿಸೆ
ಪರಿ ಪರಿ ಪ್ರೀತಿಯ ಪ್ರತೀಕದ ಕೆಂಗುಲಾಬಿಗೆ
ರೆಡ್ ಬಣ್ಣ ತುಂಬಿ ಸೋಜಿಗ ಎನಿಸುವೆ
ಕಾಮನಬಿಲ್ಲೇ ಕಾಮನಬಿಲ್ಲೇ
ಬಂದೆನ್ನ ಅಂಗೈಯೊಳಗೆ ಸೇರೆ
ಎಡೆಯೂರು ಪಲ್ಲವಿ
ದಿನವು ಕಳೆಯಲು ಕಾಲವು ಉರುಳಲು
ಆಗಲೇ ಬರುವುದು ಮಳೆಗಾಲ
ಬಿಸಿಲನು ನುಂಗುತ ಚಳಿಯನು ತರುತಾ
ಧರೆಗಿಳಿಯುವನು ಮಳೆರಾಯ
ಗಾಳಿಯು ಬೀಸಿ, ಮುಗಿಲನು ಓಡಿಸಿ
ಮಿಂಚುತ ಸಿಡಿಲನು ಸಿಡಿಸುವನು
ಮುಗಿಲಿಗೆ ಮುಗಿಲನು ಡಿಕ್ಕಿ ಹೊಡೆಸುತ
ನೀರನು ಸುರಿಸಿದ ರಭಸದಲಿ
ಗಿಡ, ಮರ ಹುಲ್ಲನು ರಕ್ಷಿಸಿ ಮಳೆಯು
ನೆಲವನು ಮಾಡುತ ಹಚ್ಚ ಹಸಿರು
ಜೀವಿಯ ಜೀವವ ಉಳಿಸಿ ಬೆಳೆಸಿ
ತಂಪನು ನೀಡುತ ಸಾಗುವನು
ನೀರನು ಹನಿಸಿ ಪೈರನು ಅರಳಿಸಿ
ರೈತನ ಮೊಗದೊಳು ಸಂತಸ ತರಿಸಿ
ಧೂಳನು ಕುಗ್ಗಿಸಿ ರೋಗವ ಅಳಿಸಿ
ನೆಲದಾ ಮಲಿನವ ತೊಡೆಯುವನು
ಜೀವ ಸಂಕುಲದ ದಾಹ ನೀಗಿಸಿ
ಸ್ವಚ್ಛತೆಯ ಅರಿವಾ ಮೂಡಿಸಿ
ಬಾಲ್ಯದ ನೆನಪಾ ಕಾಡುವನು
ಮಕ್ಕಳ ಮನಸನು ಕುಣಿಸುವನು
ಇಂದಿರಾ ಪಿ.
ನಾಗೇಶ ಜಿ. ವೈದ್ಯ
ರಕ್ಷಾಬಂಧನ ಹಬ್ಬವು ಬಂದರೆ
ಪಿಂಕಿಯ ಮನದಲಿ ಸಂತಸವು
ಅಣ್ಣನ ಹಣೆಗೆ ತಿಲಕವನಿಟ್ಟು
ಪೂಜೆಯ ಮಾಡುವ ಶುಭ ದಿನವು
ಪೇಟೆಯ ಸುತ್ತಿ ತಂದಿಹ ರಾಖಿ
ಸೋದರಿ ಪ್ರೀತಿಯ ಸಾರುತಿದೆ
ರಾಖಿಯ ಕಟ್ಟುತ ಅಣ್ಣನ ಕೇಳ್ವಳು
ರಕ್ಷಿಸು ನನ್ನನು ಎಡಬಿಡದೆ
ಬೇಡುವಳವಳು ಭಗವಂತನಲಿ
ಅಣ್ಣಗೆ ದೀರ್ಘಾಯಸ್ಸು
ಜೀವನದುದ್ದಕು ಸುಖ ಸಿರಿ ಸಿಗಲಿ
ಹೀಗೆಯೇ ಇರಲಿ ಹೂ ಮನಸು
ಅಣ್ಣನ, ಪಿಂಕಿಯ ಪ್ರೀತಿಯ ಬಂಧನ
ಚಂದ್ರಮ, ಚುಕ್ಕಿಯ ಹಾಗೆ
ಎಲ್ಲೇ ಇರಲಿ ತಂಗಿಯು ಕರೆದರೆ
ಬಂದೇ ಬರುವನು ಕ್ಷ ಣದೊಳಗೆ
ರಾಖಿಯ ನೋಡುತ ನುಡಿದನು ಅಣ್ಣ
ನಿನ್ನಯ ಹಾಗೇ ಚೆಂದವಿದೆ
ಪ್ರೀತಿಯ ತಂಗಿಯ ಪಡೆದಿಹ ನಾನು
ಭಾಗ್ಯವಂತನು ಜಗದೊಳಗೆ
ಕೆನ್ನೆಯ ಚಿವುಟಿ ನೀಡಿರೆ ಉಡುಗೊರೆ
ಅಪ್ಪ, ಅಮ್ಮನು ಬಳಿ ಬಂದು
ಹರಸಿದರವರನು ಆಶೀರ್ವದಿಸಿ
ನಗುತ ಬಾಳಿ ನೀವೆಂದೆಂದು
ಚಂದ್ರೇಗೌಡ ನಾರಮ್ನಳ್ಳಿ
ಯಾರು ಕೊಟ್ಟರು, ಯಾರು ತಂದರು
ಸ್ವತಂತ್ರವನು ದೇಶಕೆ
ಯಾರು ಹಚ್ಚಿದ ನಂದಾ ದೀಪವು
ಬೆಳಗುತಿಹುದೀ ನಾಡನು
ಭರತ ಮಾತೆಯ ಕಣ್ಣ ನೀರನು
ಒರೆಸಿದವರು ಯಾರು
ಕಬಂಧ ದಾಸ್ಯದ ಹಿಡಿತ ಸಡಿಲಿಸಿ
ಬಿಡುಗಡೆ ಯಾರು ತಂದರು
ಯಾರ ತ್ಯಾಗದ ಫಲ ಸ್ವರೂಪವೋ
ಹೆಗಲಿನ ನೊಗ ಕಳಚಿತು
ಯಾರು ಪಡೆದ ಕರಿ ನೀರ ಶಿಕ್ಷೆಯೋ
ನಮ್ಮೆಲ್ಲರ ಸೆರೆ ತಪ್ಪಿತು
ಯಾರ ಬಂಧನಕೆ ಸಂದ ಬೆಲೆಯಿದೊ
ನಮ್ಮ ಬಾಳುವೆ ಸುಂದರ
ಯಾವ ಮಹಿಮರ ಬಲಿದಾನವೋ ಇದು
ಆ ಮಹಾತ್ಮರ ನೆನೆಯುವ
ಮಸಾಲೆ ವಸ್ತುಗೆ ಮನವ ಸೋತು
ಕಡಲು ದಾಟಿ ಬಂದರು
ಅರಿವೆ ಮಾರುತ ಸುಳಿವು ಅರಿಯುತಾ
ದಾಳ ಉರುಳಿಸಿ ಗೆದ್ದರು
ನೆರವು ಸೈನ್ಯದ ನೆಪವ ಒಡ್ಡುತ
ನುಂಗಿ ಬಿಟ್ಟರು ದೇಶವ
ದತ್ತು ಮಕ್ಕಳ ಹಕ್ಕು ಕೀಳುತಾ
ಕಬಳಿಸಿದರು ಖಂಡವ
ತಾತ್ಯಾ, ನಾನಾ, ಪಾಂಡೆ,ಲಕ್ಷ್ಮಿಬಾಯಿ
ಹಚ್ಚಿದಂಥ ಕಿಡಿಯಿದು
ಭರತ ಖಂಡವೇ ಹೊತ್ತಿ ಉರಿಯಿತು
ಜಲಿಯನ್ ದಂಡಿ,ಅಸಹಕಾರದಿ
ಗಾಂಧಿ, ನೆಹರು, ಪಟೇಲ್, ಸುಭಾಸರು
ಧುಮುಕಿದರು ಮುಂಚೂಣಿಗೆ
ಬಿಪಿನ್, ಲಜಪತ್, ಸಾವರ್ಕರ್, ತಿಲಕರು
ಮಾಡಿ ಮಡಿದ ಮಹಾತ್ಮರು
ಮದನ, ಆಜಾದ, ಸುಖದೇವ, ಭಗತರ
ಹರಣ ತೊರೆದ ಧೀರರು
ಪರಂಗಿ ಜನರ ಫಿರಂಗಿ ಗುಂಡಿಗೆ
ಎದೆಯನೊಡ್ಡಿದ ವೀರರು
ಅಹಿಂಸೆಯೆ ಹೋರಾಟ ಮಂತ್ರವು
ಸತ್ಯಾಗ್ರಹವೇ ತಂತ್ರವು
ತ್ಯಜಿಸಿ ಶಸ್ತ್ರವ ಮಣಿಸೆ ಶತ್ರುವ
ರಾಷ್ಟ್ರ ಜಿಗಿಯಿತು ಸಂಗ್ರಾಮಕೆ
ನಾಡೇ ಕೂಗಿತು ಮುಗಿಲು ಮುಟ್ಟಿತು
ಸ್ವಾಯತ್ತತೆಯ ಬೇಡಿಕೆ
ದಿಗಿಲು ಹುಟ್ಟಿತು ಓಟ ಕಿತ್ತಿತು
ಕಂಪನಿ ಜನ ಸ್ವದೇಶಕೆ
ನಾಲ್ವತ್ತೇಳರ ಆಗಸ್ಟ್ ಮಾಸದಿ
ಗಗನಗಾಮಿ ತಿರಂಗವು
ಹದಿನಾಲ್ಕರ ನಡು ರಾತ್ರಿಯಲ್ಲಿ
ಧರೆಗಿಳಿದ ಒಕ್ಕೂಟ ಪತಾಕೆಯು
ಉರಿಯಲಿ ನಿತ್ಯ ಸ್ವತಂತ್ರ ಹಣತೆಯು
ಹುತಾತ್ಮರ ನೆನಪೇ ಬತ್ತಿಯು
ಮೆರೆಸಲು ಎಲ್ಲೆಡೆ ನಾಡ ಘನತೆಯ
ನಮ್ಮ ದುಡಿಮೆಯೇ ತೈಲವು.
ಕರಿಮುಖನೆ ಬಾರೋ ನಮ್ಮನೆಗೆ
ಪ್ರಕಾಶ್ ಆರ್. ಕಮ್ಮಾರ್
ತೂಗಾಡುವ ತೊನೆದಾಡುವ
ಸೊಂಡಿಲಂತಹ ಮೂಗುಳ್ಳವನೇ
ಆನೆ ಮೊಗದಲಿ ಬೀಸುವ ಆಲಿಸುವ
ಮೊರದಂತಹ ಕಿವಿಯುಳ್ಳವನೇ
ಚಿಕ್ಕದಾದ ಗೋಲಿಯಂತಹ
ಸಣ್ಣ ಸಣ್ಣ ಮಿಂಚುಳ್ಳ ಕಣ್ಣುಳ್ಳವನೇ
ಗಜ ಮೊಗದ ಮೋಹಕನೇ
ನೀನೆಲ್ಲರಿಗೂ ಅಚ್ಚುಮೆಚ್ಚು
ಸರ್ಪವನು ಬಿಗಿದಪ್ಪಿದ
ಡೊಳ್ಳಿನಂತಹ ಹೊಟ್ಟೆಯವನೇ
ಪಂಚಕಜ್ಜಾಯ ಮೋದಕ ಕಡುಬು
ನೀಡುವೆ ಬಾರೋ ನಮ್ಮನೆಗೆ
ರಾವಣನ ಗರ್ವ ಮುರಿದವನೇ
ಭಾರತ ಬರೆದ ಕರುಣಾ ಸಾಗರನೇ
ನಿನ್ನ ಮಹಿಮೆ ಅಪಾರ
ನಿನ್ನ ಚರಣಕೆ ಶರಣಾಗುವೆನು
ಇಬ್ಬರೂ ಕೂಡಿ ಆಡೋಣು ಪ್ರೀತಿಯಲಿ
ಎಲ್ಲರನು ನಕ್ಕು ನಗಿಸುವೆಯಂತೆ
ನಗದವರು ನಗುವರು ನಿನ್ನಾ ಕಂಡು
ಬಾರೋ ಗಣೇಶ ನಮ್ಮನೆಗೆ
ವಿನೋದ ಪ್ರಿಯ ಮಕ್ಕಳ ಪ್ರಿಯ
ಮಕ್ಕಳಿಗೊಲಿಯುವ ಸಂಕಷ್ಟಹರ
ಅಭಯ ಹಸ್ತವ ನೀಡುವ
ಕರಿಮುಖನೇ ಬಾರೋ ನಮ್ಮನೆಗೆ
ಎನ್.ಶೈಲಜಾ ಹಾಸನ
ಬಾರೆ ಬಾಲೆ ನೀನು ಶಾಲೆಗೆ
ಬಾ ಬಾರೆ ಇದು ನಿನ್ನ ಮನೆ
ಕಸ ಮುಸುರೆ ತೊಳೆದು
ಗುಡಿಸಿ ಬಳಿದಿದ್ದು ಸಾಕೆ
ನಿನಗೀಗ ಸರಿ ವಯಸ್ಸು
ಬಂದು ಕಲಿಯಲು ವಿದ್ಯೆ
ಬಿಡದಿರು ನೀನು ಶಾಲೆ
ಬಾಲ್ಯ ವಿವಾಹವನು ಧಿಕ್ಕರಿಸು
ಸ್ತ್ರೀ ಸಮಾನತೆಯ ಪುರಸ್ಕರಿಸು
ಸ್ವಾಭಿಮಾನವನು ಅನುಕರಿಸು
ಅನ್ಯಾಯದ ವಿರುದ್ಧ ಪೂತ್ಕರಿಸು
ನಿನಗುಂಟು ಜಯಿಸುವ ಸರ್ವಶಕ್ತಿ
ನೀ ತೋರು ಸಮಸ್ಯೆಗಳಿಗೆ ಮುಕ್ತಿ
ಶಾಪವಾಗು ಮಾಡುವವರಿಗೆ ಕುಯುಕ್ತಿ
ಸದಾ ಗೆಲ್ಲಲೇ ಬೇಕು ನಿನ್ನ ಯುಕ್ತಿ
ಆತ್ಮವಿಶ್ವಾಸಕೆ ಕಲಿ ನೀ ಕರಾಟೆ
ಓದಿ ನೀ ಆಗಬೇಕು ಅಧಿಕಾರಿ
ಹೆಣ್ಣು ಕಲಿತರೆ ಆ ಮನೆಯೇ ಸ್ವರ್ಗ
ಅದು ತಿಳಿಯಬೇಕು ಜಗಕೆ
ಅಂಜಿ ಅಳುಕದೆ ಮುನ್ನಡೆ
ಶಾಪವಲ್ಲ ನಿನ್ನ ಹುಟ್ಟು
ಗರ್ಭದಲಿ ಕೊಲ್ಲುವವರಿಗೆ
ಕಲಿಸು ನೀನು ಪಾಠವನು
ಸಾಧನೆಯ ಶಿಖರದಿ ನಿಂತು
ನಗಬೇಕು ಹರುಷದಿ ನೀನು
ಹೆಣ್ಣು ಹೆತ್ತವರು ಬೀಗಬೇಕು.
ಬಿ.ಆರ್ ನಾಡಗೌಡ
ನಮ್ಮ ಸಾಕುನಾಯಿ ಮುದ್ದು
ಟೋನಿ ಬಹಳ ತುಂಟನು
ಮನೆಯ ಮಂದಿಗೆಲ್ಲ ಇಷ್ಟ
ಪರಮ ಆಪ್ತ ಮಿತ್ರನು
ಹಾಲಿನಂತೆ ಹೊಳೆವ ಬಣ್ಣ
ಥಳಕು ಕಣ್ಣು ಕುಕ್ಕಿದೆ
ಅಂದವಾದ ಮೈಯ ಮಾಟ
ನೋಟ ಮೋಡಿ ಮಾಡಿದೆ
ಶಾಲೆಯಿಂದ ಮನೆಗೆ ಬರಲು
ಒಡನೆ ಓಡಿ ಬರುವುದು
ತುತ್ತು ಮಾಡಿ ಬಾಯಿಗಿಡಲು
ಮುತ್ತು ಕೊಡಲು ಜಿಗಿವುದು
ಸ್ವಾಮಿ ಬಂಟ ನಮ್ಮ ನೆಂಟ
ಟೋನಿ ಕದನ ಪ್ರಿಯನು
ಹಗಲು ಇರುಳು ಬಿಡದೆ ಸದಾ
ಮನೆಯ ಕಾಯುತಿರುವನು
ಏನು ಬೇಕು ಬೇಡವದಕೆ
ನಿತ್ಯ ಗಮನ ಹರಿಸುವೆ
ಜೀವಕ್ಕಿಂತ ಅಧಿಕ ಒಲವು
ತೋರಿ ಸಾಕು ಸಲಹುವೆ
ಉಂಡ ಮನೆಗೆ ಜೀವ ಸವೆಸಿ
ಬದುಕು ಇದರ ಕಾಯಕ
ಒಡೆಯನನ್ನು ನಂಬಿ ನಡೆವ
ಸ್ವಾಮಿ ನಿಷ್ಠ ಸೇವಕ.
ಚಂದ್ರೇಗೌಡ ನಾರಮ್ನಳ್ಳಿ
ನಾಡು ನಮ್ಮದು
ಕರುನಾಡು ನಮ್ಮದು
ದಾಸ, ಶರಣ, ಕವಿ, ಸಂತರ
ಗುಡಿಯು ನಮ್ಮದು
ಕೃಷ್ಣೆ, ತುಂಗೆ, ಕಾವೇರಿ, ಭೀಮೆ
ಹಸಿರ ಸೊಬಗು ಮೂಡಿಸೆ
ಶಾರದೆ, ಚಾಮುಂಡಿ, ದುರ್ಗೆ
ವರವ ನೀಡಿ ಹರಸೆ
ಗೀತ, ನಾಟ್ಯ, ಸಾಹಿತ್ಯ, ಶಿಲ್ಪ
ವಿಜ್ಞಾನ, ಶಿಕ್ಷ ಣ ಕಾಶಿಯು
ತಾಯ ಮಡಿಲು ತುಂಬಿಹುದು
ಅನ್ನ, ಹೊನ್ನ ರಾಶಿಯು
ದೂರ ಹಬ್ಬಿ ನೀಲ ತೀರ
ಪಡುವಣದಾಳ ಸಾಗರ
ತೆಂಗು, ಕಂಗು, ನಂದಿ, ಸುರಗಿ
ಸಿರಿಗಂಧ, ಹೊನ್ನೆಯಾಗರ
ಗಂಗ, ಕದಂಬ, ರಾಷ್ಟ್ರಕೂಟ
ವಿಜಯನಗರ ವೈಭವ
ಚಾಲುಕ್ಯ, ಹೊಯ್ಸಳ, ಕಲಚೂರ್ಯ
ಕೆಳದಿ, ಮೈಸೂರ ಹೊಗಳುವ
ಚೆನ್ನಮ್ಮ, ರಾಯಣ್ಣರಿಟ್ಟ
ಸ್ವಾತಂತ್ರ್ಯದ ಕಿಡಿಯು
ಡೆಪ್ಯೂಟಿ, ದೇಶ್ಪಾಂಡೆ, ಆಲೂರರ
ಏಕೀಕರಣದ ನುಡಿಯು
ಹಸಿರನುಟ್ಟ ಘಟ್ಟ ಬೆಟ್ಟ
ಬಯಲು, ಮಲೆಯನಾಡು
ಆನೆ, ಜಿಂಕೆ, ಚಿರತೆ, ಹುಲಿ
ಪಕ್ಷಿ ಮೆರೆವ ಕಾಡು
ಭಿನ್ನ, ವಿಭಿನ್ನ ಭೂಪ್ರದೇಶ
ಕನ್ನಡ ನಾಡೇ ಚೆಂದವು
ಚೆನ್ನ ಭಿನ್ನ ಆಡುಭಾಷೆ
ನಮ್ಮ ಬೆಸೆವ ಬಂಧವು
ಕನ್ನಡಿಗರು ಸೇರಿ ನಾವು
ತಾಯ ಅಡಿಗೆ ನಮಿಸುವಾ
ಕನ್ನಡದ ಕಸ್ತೂರಿ ಕಂಪು
ದಿಕ್ಕು ದಿಕ್ಕಿಗೆ ಹರಡುವಾ.
ಸೋಮಲಿಂಗ ಬೇಡರ
ನಾನು ಯೋಧನಾಗಲು
ಸೇನೆಯನ್ನು ಸೇರುವೆ
ವೈರಿಗಳನು ತಡೆಯಲು
ದಿಟ್ಟತನದಿ ಹೋರುವೆ
ದೇಶವನ್ನು ಕಾಯಲು
ವೀರ ಸೈನ್ಯ ಕಟ್ಟುವೆ
ದುಷ್ಟರನ್ನು ಅಟ್ಟಲು
ಹಗಲು ಇರುಳು ಸೆಣಸುವೆ
ಉಗ್ರರನ್ನು ಹಿಡಿಯಲು
ಆನೆ ಬಲದಿ ನುಗ್ಗುವೆ
ಧೀರತನವ ಮೆರೆಯಲು
ಸಿಂಹದಂತೆ ಗುಡುಗುವೆ
ದೇಶ ಭಕ್ತಿ ಉಕ್ಕಲು
ವೀರ ಗೀತೆ ಹಾಡುವೆ
ಕೀರ್ತಿ ಧ್ವಜವ ಮೆರೆಸಲು
ಶೂರ ಕಹಳೆ ಮೊಳಗುವೆ
ತೊಟ್ಟ ಗುರಿಯ ತಲುಪಲು
ದಿಟ್ಟ ಹೆಜ್ಜೆ ಹಾಕುವೆ
ಕೊಟ್ಟ ಮಾತನುಳಿಸಲು
ಜಟ್ಟಿಯಾಗಿ ಗೆಲ್ಲುವೆ.
ಜೆಸ್ಸಿ ಪಿ.ವಿ
ನೀಲಿಯ ಸೀರೆಯ ಉಟ್ಟುಕೊಂಡು
ನಕ್ಷ ತ್ರ ಹಾರವ ಹಾಕಿಕೊಂಡು
ಚಂದ್ರನ ಬಿಂದಿಗೆ ತೊಟ್ಟುಕೊಂಡು
ಹೊರಟಳು ಆಕಾಶ ದೇವಿ
ದೇವರ ಕೈಯಿಂದ ಕುಂಚವ ಪಡೆದು
ಚಂದದ ಬಣ್ಣವ ಹರಡಿಕೊಂಡು
ಚಂದದ ಚಿತ್ತಾರ ಬಿಡಿಸಿಕೊಂಡು
ನಲಿದಳು ಆಕಾಶ ದೇವಿ
ಮೋಡದ ತುರುಬನು ಕಟ್ಟಿಕೊಂಡು
ನೀರಿನ ಕೊಡವನು ಹೊತ್ತಕೊಂಡು
ಭೂಮಿಯ ಹಸಿರಿಗೆ ನೀರನು ಹರಿಸಿ
ನಡೆವಳು ಆಕಾಶ ದೇವಿ
ಸೂರ್ಯ ದೇವನ ಜೊತೆಯಲಿ ಬಂದು
ಭೂಮಿಗೆ ಬೆಳಕನು ಹರಿಸುತಾ ನಿಂದು
ಜೀವಜಾಲಕೆ ಪೋಷಣೆ ಕೊಟ್ಟು
ನಕ್ಕಳು ಆಕಾಶ ದೇವಿ
ಮಂಜಿನ ಮಾಲೆಯ ಪೋಣಿಸಿ ತಂದು
ಮರಗಿಡಗಳನು ಸಿಂಗಾರ ಮಾಡಿ
ಹಿತಕರ ಚಳಿಯನು ಎಲ್ಲೆಡೆ ಹರಡಿ
ನೋಡ್ವಳು ಆಕಾಶ ದೇವಿ
ಮಂಜಿನ ಮುಸುಕನು ಮೆಲ್ಲನೆ ಸರಿಸಿ
ವಸಂತನನ್ನು ಭೂಮಿಗೆ ಕಳಿಸಿ
ಎಲ್ಲೆಡೆ ಕೆಂಪನೆ ಚಿಗುರನು ತಂದು
ನಲಿವಳು ಆಕಾಶ ದೇವಿ.
ಮಹಾಂತೇಶ್ ಎಸ್. ಪಾಟೀಲ
ಬಾಲ್ಯದಲ್ಲಿ ಆಡಿದಂಥ ಆಟ ಸುಂದರ
ಬಾಲ್ಯವನ್ನು ಮರಳಿ ತಾರೋ ಬ್ರಹ್ಮದೇವರಾ
ಕುಣಿದು ಕುಪ್ಪಳಿಸಿ ಆಡಿದಂಥ ಆಟ ಸೊಗಸು
ಕಲ್ಲು ಮಣ್ಣು ಕೆಸರಿನಲ್ಲಿ ಹೊರಳಿದಂಥ ನೆನಪು
ಗೋಲಿ ಬುಗುರಿ ಗಾಳಿಪಟದ ಆಟವೆಷ್ಟು ಸೊಗಸು
ಚಿಣ್ಣಿದಾಂಡು ಬ್ಯಾಟು ಬಾಲು ಎತ್ತಿ ಹೊಡೆದ ನೆನಪು
ಮಣ್ಣಿನೆತ್ತು ಬಾರುಕೋಲು ಬೀಸಿ ಹೊಡೆದ ಸದ್ದು
ಬೆಂಡು ಬತ್ತಾಸು ತಿಂದು ಜಾತ್ರೆ ಕಂಡ ನೆನಪು
ಅಂತೆ ಕಂತೆ ಚಿಂತೆ ಇರದೆ ಆಡಿಕೊಂಡ ನೆನಪು
ಹಳ್ಳ ಕೊಳ್ಳ ಬೆಟ್ಟ ಗುಡ್ಡ ಸುತ್ತಿದಂಥ ನೆನಪು
ಮಳೆಯ ಹನಿ ಸುರಿಯುತಿರಲು ಕಾಗದದ ದೋಣಿ
ಕಳ್ಳ ಪೊಲೀಸ್ ಆಟಕೆ ಮೈದಾನ ನಮ್ಮ ಓಣಿ
ಹೋಗುತಿರುವ ಬಂಡಿ ಮೇಲೆ ಹತ್ತಿ ಕುಂತ ನೆನಪು
ಬಾಡದಿರುವ ನವಿಲುಗರಿ ಪುಸ್ತಕದಿ ಇಟ್ಟ ನೆನಪು
ಬಣ್ಣ ಬಣ್ಣದ ಹಾರಂಗಿ ಕಡ್ಡಿ ಪೊಟ್ಟಣದಲ್ಲಿ
ಹಸಿರು ಎಲೆ ಅದಕಾಗಿ ಹರಿದ ಚಡ್ಡಿ ಕಿಸೆಯಲ್ಲಿ
ನದಿಯ ದಂಡೆ ಮರಳಿನಲ್ಲಿ ಗೂಡು ಕಟ್ಟಿದ ನೆನಪು
ಗುಬ್ಬಿ ಹಿಡಿದು ಬಣ್ಣ ಹಚ್ಚಿ ಹಾರಿ ಬಿಟ್ಟ ಸೊಗಸು
ಮಾವು ತಂದು ಹಣ್ಣು ಹಾಕಿ ಚೀಪಿ ತಿಂದ ನೆನಪು
ಉಳಿದ ವಾಟೆ ಗುಂಪು ಹಾಕಿ ಆಡಿದಂಥ ನೆನಪು
ಹುಳಿಯ ನೆಲ್ಲಿ ಬಾಯಿ ಜೊಲ್ಲು ಉಪ್ಪು ಖಾರ ಜೊತೆಗೆ
ಹುಣಸೆ ಹಣ್ಣು ಬೆಲ್ಲ ಕುಟ್ಟಿ ಚಪ್ಪರಿಸಿ ತಿಂದೆ ರುಚಿಗೆ
ಬಿಸಿಲ ಸುತ್ತಿ ಬೆವರ ಹರಿಸಿ ಸವಿದ ಐಸುಕಡ್ಡಿ
ಕೆರೆ ಬಾವಿ ನೀರು ಕಂಡು ಜಿಗಿದ ಸ್ನಾನದ ನೆನಪು
ಎಷ್ಟು ಅಂತ ಹೇಳಲಿ ಚೆಂದ ಬಾಲ್ಯದ ಮಹಿಮೆ
ಜಗದ ಜಂಜಡವು ಸಾಕು ಬಾಲ್ಯ ಬೇಕು ನನಗೆ.
ಸಿದ್ದನಗೌಡ ಬಿಜ್ಜೂರ
ಭೂಮಿ ಎಂದಾರ ಬಾಡ್ಗೆ ಕೊಡಿ ಅಂತ
ಬಾಯ್ ಬಾಯ್ ಬಿಟೈತಾ?
ಬಾನು ಎಂದಾರ ಭಕ್ಷಿಸು ಕೊಡಿ ಅಂತ
ಬೊಬ್ಬೆ ಹೊಡದೈತಾ?
ರಾಗಕೆ ರೊಕ್ಕ ಕೊಡಿ ಕೊಡಿ ಅಂತ
ಕೋಗಿಲೆ ಕೇಳೈತಾ?
ಹಣ್ಣಿಗೆ ಹಣವ ಕೊಡಬೇಕಂತ
ಮರವು ಬೇಡೈತಾ?
ಹೊಲದಲಿ ಬೆಳೆದಾ ಹಸಿರಿನ ಪೈರು
ಪಾಲನು ಬೇಡೈತಾ?
ಬೀಸುವ ಗಾಳಿ ತಾಸಿನ ಲೆಕ್ಕದಿ
ಕಾಸನು ಕೇಳೈತಾ?
ಮಳೆಯನು ಸುರಿಸಿದ ಮೋಡವು ನೀರಿನ
ಕರವನು ಕೇಳೈತಾ?
ಉಸಿರನು ನೀಡುವ ಹಸಿರಿನ ವನವು
ಹೊನ್ನನು ಬೇಡೈತಾ?
ಕೊಟ್ಟಿದ್ದೆಲ್ಲಾ ಪುಕ್ಕಟೆ ಉಂಡು
ಕುಣಿದ್ರೆ ಮುಗಿದೋಯ್ತಾ?
ಊರಿಗೆ ನೂರು ಮರಗಳ ನೆಡಲು
ನಿಮಗೇನ್ ದೊಡ್ಡ ರೋಗ ಬಂದೈತಾ?
ನಡಿ ನಡಿ ಬಡ ಬಡ ಮನೆಯನು ಬಿಟ್ಟು
ಬೇಗನೆ ಹೊರಗೆ ನಡಿ
ಭೂಮಿಯ ತುಂಬಾ ಗಿಡಗಳ ನೆಟ್ಟು
ಪುಕ್ಕಟೆ ಊಟ ಪಡಿ.
Comments
Post a Comment