ರೈತ ಮತ್ತು ಭಾರತ
ಹಗಲು ರಾತ್ರಿ ಕಷ್ಟಪಟ್ಟು ದುಡಿವ ನಮ್ಮ ರೈತನು
ಬೇಳೆಕಾಳು ಬೆಳೆದು ಜನರ ಹಸಿವ ಕಳೆಯುತಿರುವನು
ಬಿಸಿಲು ಮಳೆ ಗಾಳಿಗೆಲ್ಲಾ ಬೆಚ್ಚಿ ಬೆದರಲಾರನು
ಕಾಯಕವೇ ಕೈಲಾಸ ಎನುತ ದುಡಿಯುತಿರುವನು
ಕೃಷಿಯಲ್ಲೇ ಖುಷಿಯ ಕಾಣುವ ಮನವು ಇರುವ ರೈತನು
ಭೂಮಿ ತಾಯಿಯ ಸೇವೆ ಮಾಡುತ ತಾನು ತೃಪ್ತಿ ಪಡೆವನು
ಲಕ್ಷ ಲಕ್ಷ ಸಾಲ ಮಾಡಿ ಹೊಲವ ಉತ್ತು ಬಿಡುವನು
ಅತಿವೃಷ್ಟಿ ಅನಾವೃಷ್ಟಿ ಕಾಟದಲ್ಲಿ ನಿತ್ಯ ನರಳುತಿರುವನು
ಕೃಷಿ ಪ್ರಧಾನ ವಾಗಿರುವ ದೇಶ ನಮ್ಮ ಭಾರತ
ರೈತನ ಶ್ರಮವ ತಿಳಿಯಲಾರದ ಮೂಢರಿಂದ ತುಂಬಿದೆ
ಬೆಳೆದ ಬೆಳೆಗೆ ಫಲವು ಸಿಗದೆ ರೈತ ನೋಯುತಿರುವನು
ಸಾಲದ ಉರುಳಿನಲ್ಲಿ ತಾನು ಜೀವ ಸವೆಸುತ್ತಿರುವನು
ಕಾಲ ಕಾಲಕೆ ಮಳೆಯು ಇಲ್ಲದೆ ಬಳಲುತ್ತಿರುವ ನೀತನು
ಹಸಿದ ಹೊಟ್ಟೆಯು ಹರಿದ ಬಟ್ಟೆಯು ಬದುಕ ಬವಣೆಯ ತಿಳಿಸಿದೆ
ಕಾಲ ಕಾಲಕೆ ಮಳೆಯು ಸುರಿಯುತ ಬದುಕ ಬವಣೆಯು ನೀಗಲಿ
ಅನ್ನ ಬೆಳೆಯುವ ರೈತನರಮನೆಯಲಿ ಹೊನ್ನ ಕಣಜವು ತುಂಬಲಿ
ಪಂಕಜಾ ಕೆ ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್.ಮಾಸ್ಟರ್
Comments
Post a Comment