Skip to main content

ರುಬಾಯಿ ಬಗ್ಗೆ

*ರುಬಾಯಿ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ದಯವಿಟ್ಟು ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ*


ರುಬಾಯತ್ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ. ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ಧವಾಗಿರುವ ಕವಿತಾರಚನೆ. ಈಜ ರೀತಿಯ ಪದ್ಯಗಳನ್ನು ಪರ್ಷಿಯದಲ್ಲಿ ಜಾರಿಗೆ ತಂದವ ಷೇಕ್ ಅಬುಲ್ ಸೈಯದ್ ಬಿನ್ ಅಬುಲ್ ಖಯಿರ್ ಎನ್ನುವ ಸೂಫಿ. ಈ ರಚನೆ ಸೂಕ್ಷ್ಮರೀತಿಯ ಭಾವಪ್ರಕಾಶಕ್ಕೆ ಅನುಕೂಲ ವೆಂಬುದನ್ನು ಅರಿತ ಉಮರ್ ಅದನ್ನೇ ತನ್ನ ಮಾಧ್ಯಮವನ್ನಾಗಿ ಬಳಸಿಕೊಂಡ, ರಚನೆ ಹೇಗಿದ್ದರೇನು. ಅಂತರಂಗವನ್ನು ಕಲಕುವ, ಬುದ್ಧಿಯನ್ನು ಕೆರಳಿಸುವ ಭಾವಶಕ್ತಿ ಕವಿಗಿದ್ದರಲ್ಲವೇ ತಂತ್ರವೂ ಅಮರವಾಗುವುದು? ರುಬಾಯುತ್ ಎನ್ನುವುದು ಖ್ಯಾತಿ ಪಡೆಯಲು ಭಾವಸಂಪನ್ನನಾದ ಉಮರನೇ ಕಾರಣ.


ರುಬಾಯಿ‌ ಸಾಹಿತ್ಯ ಬೆಳೆದು ಬಂದ ಹಾದಿ ಅಧ್ಯಯನ ಮಾಡಿರುವಿರೆಂದು ಭಾವಿಸಿರುವೆ. ಕೇವಲ ನಾಲ್ಕು ಸಾಲುಗಳಿರುವ ಎಲ್ಲ ಬರಹವು ರೂಬಾಯಿ ಆಗಲಾರದು. ಮೂರನೆಯ ಸಾಲಿಗೆ ಬರುವಷ್ಟರಲ್ಲಿ ಒಳಾರ್ಥದ ಲೇಪನವಾಗಬೇಕು.
ನಾಲ್ಕನೆಯ ಸಾಲು ಓದಿದಾಗ ದಿವ್ಯತೆ ಹೊಳೆದು ಬಿಡಬೇಕು.ಓದುಗ ತನಗರಿವಿಲ್ಲದೆ ಓಹ್! ಎಂದು ಬಿಡಬೇಕು.ಅಥವಾ ಸಣ್ಣದಾದರೂ ಒಂದು ಕದಲಿಕೆಯ ಭಾವದಲೆ ಆ ಎದೆಯಲ್ಲಿ ಹರಿದುಬಿಡಬೇಕು/ಅಪ್ಪಳಿಸಬೇಕು/ ಎದೆಯಂಚನು ತಾಕಬೇಕು.
ಕೇವಲ ಬರೆವ ಹುಕಿಗೆ ,ಲೈಕ್ ಗಳಿಗಾಗಿ ಆಸೆ ಪಟ್ಟಿರೋ ಅಕ್ಷರಗಳು ಅಸಹ್ಯ ಹುಟ್ಟಿಸುತ್ತವೆ. ನನ್ನ ಪ್ರತಿಕ್ರಿಯೆ ತುಸು ಕಟುವಾಗಿದೆ ,ನಿಜ ಆದರೆ ಅಂಗವಿಕಲ ಕೂಸುಗಳನ್ನು ನೀವು ಹಡೆಯ ಬಾರದೆಂಬುದು ನನ್ನ‌ ಸದಾಶಯ. 

 ಕಾವ್ಯದ ತವರೂರು  ಪುಟದಲ್ಲಿ ಬಂದ ಅನಿಸಿಕೆ
ಸೂಫೀ ಕವಿಗಳ ಚರ್ಚೆ ಬಂದಾಗ ಉಮಾರ‍್ ಖಯಾಮ್ ಗಣಿತ ಹಾಗೂ ಜ್ಯೋತಿಷ್ಯಕ್ಕಾಗಿ ಹೆಸರಾಗಿದ್ದಾನೆ. ಸೂಫೀ ಕಾವ್ಯಕ್ಕಾಗಿ ಅಲ್ಲ. ಆದರೆ ಅವನ ಸ್ವಚ್ಛಂದತೆ ಪಾಶ್ಚಾತ್ಯರಿಗೆ ಎಷ್ಟೊಂದು ಪ್ರಿಯವಾಯಿತೆಂದರೆ ಅವನ ಮುಂದೆ ಉಳಿದೆಲ್ಲಾ ಫಾರಸಿ ಕವಿಗಳು ನಿಸ್ತೇಜರಾದರು. ರೂಮಿ ಮತ್ತು ಹಾಫಿಜರನ್ನು ಜನ ಮರತಂತೆ ಭಾಸವಾಗ ತೊಡಗಿತು. ಆದರೆ ಖಯಾಮ್ ವಿಜೃಂಭಿಸುತ್ತಿದ್ದಾನೆ. ಆತನ ಕವಿತೆ ಸಮಯಾನುಕೂಲವಾಗಿದೆ. ಆತ ಅನೇಕರ ದೃಷ್ಟಿಯಲ್ಲಿ ಸುರತಿ ಹಾಗೂ ಸುರೆಯ ನಿಜವಾದ ಭಕ್ತನಾಗಿದ್ದ ಮತ್ತು ಯಾವುದೋ ಪಾರ್ಥಿವ ಸಾಕಿಯೊಂದಿಗೆ ತನ್ನ ಗೋಳನ್ನು ತೋಡಿಕೊಳ್ಳುತ್ತಿದ್ದ. ದ್ರಾಕ್ಷಿಯ ಕನ್ಯೆಯಲ್ಲೇ ಅವನಿಗೆ ಎಲ್ಲವೂ ಕಾಣುತ್ತಿತ್ತು. ಏನಾದರಾಗಲಿ ಖಯಾಮ್ ಆನಂದಕ್ಕಾಗಿ ಕವಿತೆ ಬರೆಯುತ್ತಿದ್ದ.
          ಸೂಫೀ ಸಾಹಿತ್ಯದಲ್ಲಿ ರುಬಾಯಿಗಳಲ್ಲಿ ಪ್ರತೀಕಗಳಿಗೆ ಗಜಲ್ ನಂತೆಯೇ ಸ್ಧಾನ ದೊರೆಯಿತು. ಸೂಫೀಗಳು ಹೃದಯ ತೋರುವುದು ಗಜಲ್ ನಲ್ಲೇ , ಭಾವಸಾಗರ ಗಜಲ್ ನಲ್ಲಿ ಉಕ್ಕಿ ಹರಿದಂತೆ ಬೇರೆ ಛಂಧಸ್ಸಿನಲ್ಲಿ ಆಗಲಿಲ್ಲ, ಗಜಲ್ ನಲ್ಲಿ ಪ್ರೇಮದ ಪ್ರಚಂಡ ಬಿರುಗಾಳಿ ಬೀಸಿತು. ಅದರಲ್ಲಿ ಧರ್ಮ, ಕರ್ಮ, ಆಚಾರ, ವಿಚಾರಗಳೆಲ್ಲ ಹಾರಿಹೋದವು. ಗಜಲ್ ಗಳಲ್ಲಿ ಶರಾಬು, ಸಾಕಿ, ಬುಲ್ ಬುಲ್, ಚಮನ್ ಮೊದಲಾದ ಪ್ರತೀಕಗಳ ಗುಣಗಾನವೇ ಗುಣಗಾನ.
          ಪ್ರಸಿದ್ದ ರುಬಾಯಿಕರ ಉಮರ‍್ ಖಯಾಮ್ ಲಹರಿಯ ಜೀವ. ಆತ ಅಮರದ್ ಷರಸ್ತ್ (ಪ್ರಣಯ ಉಪಾಸಕ) ಅಲ್ಲ. ರಮಣಿಯ ಉಪಾಸಕ. ಆತ ರಮಣಿಯನ್ನೇ ಆಲಂಬನವನ್ನಾಗಿ ಮಾಡಿಕೊಂಡ, ಅಮರದ್ ನನ್ನು ಅಲ್ಲ ಅವನ ರುಬಾಯಿಗಳು ಕರ್ಮಕಾಂಡವನ್ನು ಚಿಂದಿಯೆಬ್ಬಿಸಿದ್ದಾನೆ. ಸೂಫೀ ಸಾಹಿತ್ಯದಲ್ಲ ಭಾವ ಪ್ರದರ್ಶನಕ್ಕೆ ಗಜಲ್ ಗಳಾದರೆ, ವ್ಯಂಗ್ಯ ವಿಡಂಬನೆಗೆ ರುಬಾಯಿಗಳನ್ನು ಆರಿಸಿಕೊಂಡರು. ಮಸ್ನವಿಯಲ್ಲಿ ರೂಮಿ, ಗಜಲ್ ನಲ್ಲಿ ಹಾಫಿಜ್ ಹಾಗೂ ರುಬಾಯಿಯಲ್ಲಿ ಖಯಾಮ್ ಆಯಾ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಿ ಸಾಹಿತ್ಯವನ್ನು ರಚಿಸಿದರು. ಆದ್ದರಿಂದ ರೂಮಿ ಆಚಾರ್ಯನೆನಿಸಿಕೊಂಡರೆ, ಹಾಫಿಜ್ ಭಕ್ತನೆನಿಸಿಕೊಂಡ, ಖಯಾಮ್ ಮನಸ್ವಿಯೆನಿಸಿದ.
          ಉಮಾರ‍್ ಖಯಾಮ್ ಪರ್ಷಿಯಾ ದೇಶದಲ್ಲಿ ಆತ ಜ್ಯೋತಿಷಿಯಾಗಿ ಗಣಿತ್ಞನಾಗಿದ್ದ. ೧೧ನೇ ಶತಮಾನದ ಮಧ್ಯೆದಲ್ಲಿ ಜನಿಸಿದ ಖಯಾಮ್ ೧೨ ಶತಮಾನದಲ್ಲಿ ಮರಣ ಹೊಂದಿದ ಎಂದು ಕೆಲವರು ಹೇಳುತ್ತಾರೆ. ಖಯಾಮ್ ನ ಪೂರ್ವಿಕರು ಗುಡಾರ ಕಟ್ಟುವ ಕೆಲಸ ಮಾಡುತ್ತಿದ್ದರಂತೆ. "ಖೇಮಾ"(ಗುಡಾರ) ಶಬ್ದದಿಂದ ಖಯಾಂ ಶಬ್ದ ಬಂದಿರಬಹುದೆಂದು ಕೆಲವರ ಊಹೆ. ಖಯಾಮ್ ನ ಕವಿತೆಗಳ ಪೂರ್ಣ ಸಂಗ್ರಹ ಇನ್ನೂ ದೊರೆತಿಲ್ಲ. ಅತ್ಯಂತ ಪ್ರಾಚೀನ ಹಸ್ತಲಿಪಿ ಅವನ ನಿಧನದ ೭೫ ವರ್ಷಗಳ ತರುವಾಯ ನಿರ್ಮಿತವಾಯಿತು. ಇದೊಂದು ಸಂಕಲನದಲ್ಲಿ ೩೫೦ ರುಬಾಯಿಗಳಿವೆ. ಸುಮಾರು ಒಂದು, ಒಂದೂವರೆ ಸಾವಿ ರುಬಾಯಿಗಳಿಂದ ಇದನ್ನು ಸಂಗ್ರಹಿಸಿರಬಹುದು. ಈ ಕವಿ ಶಬ್ದಗಳ ಗುಡಾರ ಶಬ್ದಗಳ ಗುಡಾರ ಕಟ್ಟಿ ನಿಲ್ಲಿಸಬಲ್ಲ. ರೂಬಾಯಿಯ ನಾಲ್ಕುಗಳುಗಳ ಮೇಲೆ ಭಾವ ಅಥವಾ ವಿಚಾರಗಳನ್ನು ಗುಡಾರ ಹಾಕಿ ಬಿಡುತ್ತಾನೆ ಎಂದು ಹಿಂದಿಯ ಪ್ರಸಿದ್ದ ಕವಿ ಹರಿವಂಶರಾಯ್ ಬಚ್ಚನ್ ಹೇಳಿದ್ದಾರೆ.
          ೧೮ನೇ ಶತಮಾನದ  ಮಧ್ಯದಲ್ಲಿ ಆಕ್ಸ್ ಫರ್ಡಿನ ಬೋಡಲಿಯನ್ ಲೈಬ್ರರಿಯಲ್ಲಿ ಒಂದು ಫಾರಸೀ ಹಸ್ತಲಿಪಿಯತ್ತ ಪ್ರೊ.ಕೋವೆಲ್ಲರ ಗಮನ ಹರಿಯಿತು. ಆದರಲ್ಲಿ ಖಯಾಮ್ ೧೫೮ ರುಬಾಯಿಗಳಿದ್ದವು ಇದನ್ನು ಇಂಗ್ಲೀಷ್ ಗೆ ಅನುವಾದಿಸಿದರು. ರುಬಾಯಿಗಳ ಮೂಲ ಸೌಂದರ್ಯವನ್ನು ಗ್ರಹಿಸದ್ದೇ ಅಲ್ಲ ಇನ್ನೂ ಹೆಚ್ಚಿಸಿದರು ಇದರಿಂದಾಗಿ ಅವರು ಅನುವಾದ ಚಕ್ರವರ್ತಿ ಎನಿಸಿಕೊಂಡರು. ಇಷ್ಟದರೂ ಅನುವಾದದ ರುಬಾಯಿಗಳಿಗೆ ಅಷ್ಟಾಗಿ ಸ್ವಾಗತ ದೊರೆಯಲಿಲ್ಲ ಒಬ್ಬ ಸಂಪಾದಕರಂತು ಇದು ಪ್ರಕಾಶನಕ್ಕೆ ಅನರ್ಹ ಎಂದು ತಿರಸ್ಕರಿಸಿದ್ದರು. ೧೮೫೯ರಲ್ಲಿ ೭೬ ರುಬಾಯಿಗಳಿದ್ದ ಪ್ರಥಮ ಸಂಸ್ಕರಣ ೨೫೦ ಪ್ರತಿಗಳನ್ನು ಅಚ್ಚು ಮಾಡಿದರು ಬೆಲೆ ಇಳಿಸಿದರು ಸಹ ಯಾರು ಕೊಳ್ಳುವರಿಲ್ಲದೆ ಕೊನೆಗೆ ಪ್ರಕಾಶರು ಹಳೆಯ ಹರಕಲು ಪುಸ್ತಕದ ಗುಂಪಿಗೆ ದೂಡಿದರು. ಇಂಗ್ಲೀಷ್ ನ ಇಬ್ಬರು ಪ್ರಸಿದ್ದ ಕವಿಗಳು ಅದು ಹೇಗೋ ಅದನ್ನು ಕೊಂಡರು, ಸರಿ, ಅವರಿಗೆ ಕೆಸರಿನಲ್ಲಿ ಕಮಲ ಕಂಡಿತು ಅವರು ಅದನ್ನು ಮನಸಾರೆ ಕೊಂಡಾಡಿದರು ದಿನಬೆಳಗಾಗುವುದರೊಳಗೆ ಅದು ಪ್ರಸಿದ್ದವಾಯಿತು. ಇಂದು ಒಂದು ಹಳೆಯ ಪ್ರತಿಗೆ ಲಕ್ಷಾಂತರ ಹಣ ಸುರಿಯವವರಿದ್ದಾರೆ.
          ರುಬಾಯಿ ಕಾವ್ಯ ಸೌಂದರ್ಯವಂತೂ ಅದ್ಭುತ. ಇನ್ನು ದರ್ಶನದ ದೃಷ್ಟಿಯಿಂದ ಕೆಲವರಿಗೆ ಅದರಲ್ಲಿ ಸುಖವಾದೀ ದರ್ಶನ ಕಂಡುಬಂದರೆ ಕೆಲವರಿಗೆ ದು:ಖವಾದೀ ದರ್ಶನ. ಈ ನೆಲದ ಚೆಲುವು ಪರಮಾತ್ಮನ ಚೆಲುವೇ ಎಂಬ ಸೂಫೀ ದರ್ಶನ ಇದರಲ್ಲಿ ಗುಪ್ತಗಾಮಿನಿಯಾಗಿ ಹರಿದಿದೆ. . ಸಾಕಿ, ಮಧು, ಮಧುಬಾಲೆ, ಮಧುಶಾಲೆಯಂತೂ ಸೂಫೀಗಳ ಪ್ರಿಯ ರೂಪಕಗಳು ಉಮರ‍್ನ ಕಾವ್ಯ ತನ್ನ ಜಗತ್ತಿನ ಸ್ಧೂಲ, ಅಸಾಧಾರಣ, ಆಕರ್ಷಕ, ವರ್ಣರಂಜಿತ ಹಾಗೂ ಅರ್ಥಗರ್ಭಿತ ದೃಶ್ಯ ಹಾಗೂ ರೂಪಕಗಳ ಮಾಯಾ ಲೋಕವನ್ನೇ ನಮ್ಮ ಕಣ್ಣು ಮುಂದೆ ತೆರೆಯುತ್ತದೆ. ಆತನ ಭಾವಗಳು ನಮ್ಮ ಎದೆಯ ತುಡಿತವನ್ನು ಪ್ರತಿಬಿಂಬಸುತ್ತವೆ. ಎಂಬ ಅನುಭವ ಪ್ರತಿಯೊಬ್ಬನಿಗೂ ಉಂಟಾಗುತ್ತದ

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...