ಭಯಾನಕ ರಾತ್ರಿ
ನೀತಿ ಕತೆ
ಅದು ಅಮವಾಸ್ಯೆಯ ಕಾರಿರುಳಿನ ರಾತ್ರಿ ವಸಂತ ತನ್ನ ಹಳ್ಳಿಯ ಮನೆಗೆ ಹೋಗಲು ನಗರದಿಂದ ಬರುವ ಬಸ್ ನಲ್ಲಿ ಕುಳಿತಿದ್ದ .ಬಸ್ ತುಂಬಾ ತಡವಾದುದರಿಂದ ಊರಿನ ಬಸ್ಸ್ಟ್ಯಾಂಡ್ ಗೆ ಬರುವಾಗ ಸಂಪೂರ್ಣ ಕತ್ತಲು ಆಗಿತ್ತು .ಬಸ್ಟ್ಯಾಂಡ್ ನಿಂದ ವಸಂತನ ಮನೆಗೆ ಆ ರಾತ್ರಿಯಲ್ಲಿ ವಾಹನ ಸಿಗದೆ ಇದ್ದುದರಿಂದ ವಸಂತ ನಡೆದೇ ಮನೆ ತಲುಪಬೇಕಾಯಿತು. ಭಯಾನಕ ಕಗ್ಗತ್ತಲಿನಿಂದ ತುಂಬಿದ ದಾರಿಯಲ್ಲಿ ಒಬ್ಬನೇ ಹೋಗುವಾಗ ಆತನಿಗೆ ತುಂಬಾ ಭಯವಾಗುತ್ತಿತ್ತು. ಏಕೆಂದರೆ ಆ ದಾರಿಯಲ್ಲಿ ರಾತ್ರಿ ಹೊತ್ತು ದೈವ್ವ ಗಳು ನಡೆದಾಡುತ್ತವೆ ಎಂದು ಊರಿನವರು ಹೇಳುತ್ತಿದ್ದರು. ದೇವರ ಮೇಲೆ ಭಾರಹಾಕಿ ವಸಂತ ನಡೆಯುತ್ತ ಇರಬೇಕಾದರೆ, ಹಿಂದಿನಿಂದ ಕಾಲಸಪ್ಪಳ ಕೇಳಿದಂತಾಗಿ ವಸಂತ ಭಯದಿಂದ ಬೇಗ ಬೇಗ ಹೆಜ್ಜೆ ಹಾಕಿ ನಡೆಯಲು ಪ್ರಾರಂಭಿಸಿದ. ಹಿಂದೆ ತಿರುಗಲು ಆತನಿಗೆ ತುಂಬಾ ಭಯವಾಗಿತ್ತು ,ಸುಮಾರು ದೂರ ಬಂದ ಮೇಲೆ ಧೈರ್ಯ ಮಾಡಿ ಹಿಂತಿರುಗಿ ನೋಡಿದಾಗ ಬಿಳಿಯ ಬಟ್ಟೆ ತೊಟ್ಟ ವ್ಯಕ್ತಿ ಗಾಳಿಯಲ್ಲಿ ಚಲಿಸುವಂತೆ ಕಂಡು ಆತ ಒಂದೇ ಉಸಿರಿಗೆ ಓಡಿ ಮನೆ ತಲಪಿ ಬಿಟ್ಟ . ತನ್ನ ಭಯವನ್ನು ಮನೆಯವರಲ್ಲಿ ಹೇಳಲು ನಾಚಿಕೆಯಾಗಿ ಆತ ಯಾರಲ್ಲೂ ಹೇಳಲಿಲ್ಲ ಮರುದಿನ ಬೆಳಗಾದಮೇಲೆ ವಸಂತ ತಾನು ನಿನ್ನೆ ಕಂಡುದು ದೈವ್ವ ವೇ ಅಲ್ಲವೇ ಎಂದು ತಿಳಿಯಲು ತಾನು ನಿನ್ನೆ ಬಂದ ದಾರಿಯಲ್ಲಿ ಸ್ವಲ್ಪ ದೂರ ಹೋದಾಗ ಅಲ್ಲಿ ಗದ್ದೆಗೆ ಹಕ್ಕಿಗಳು ಬಾರದಂತೆ ಕಟ್ಟಿದ್ದ ಬೆರ್ಚಪ್ಪನ ಬೊಂಬೆ ಆತನನ್ನು ಅಣಕಿಸಿ ನಕ್ಕಂತಾಯಿತು .
ನೀತಿ ...ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು
ಪಂಕಜಾ.ಕೆ. ಮುಡಿಪು
Comments
Post a Comment