Skip to main content

ಭಯಾನಕ ರಾತ್ರಿ ನೀತಿ ಕಥೆ ನವಪರ್ವದಲ್ಲಿ ಉತ್ತಮ

ಭಯಾನಕ  ರಾತ್ರಿ 

ನೀತಿ ಕತೆ

ಅದು ಅಮವಾಸ್ಯೆಯ ಕಾರಿರುಳಿನ ರಾತ್ರಿ  ವಸಂತ ತನ್ನ ಹಳ್ಳಿಯ ಮನೆಗೆ ಹೋಗಲು  ನಗರದಿಂದ ಬರುವ  ಬಸ್ ನಲ್ಲಿ ಕುಳಿತಿದ್ದ .ಬಸ್ ತುಂಬಾ ತಡವಾದುದರಿಂದ   ಊರಿನ ಬಸ್ಸ್ಟ್ಯಾಂಡ್ ಗೆ ಬರುವಾಗ ಸಂಪೂರ್ಣ ಕತ್ತಲು ಆಗಿತ್ತು .ಬಸ್ಟ್ಯಾಂಡ್ ನಿಂದ ವಸಂತನ ಮನೆಗೆ ಆ ರಾತ್ರಿಯಲ್ಲಿ ವಾಹನ ಸಿಗದೆ ಇದ್ದುದರಿಂದ ವಸಂತ  ನಡೆದೇ ಮನೆ ತಲುಪಬೇಕಾಯಿತು. ಭಯಾನಕ ಕಗ್ಗತ್ತಲಿನಿಂದ ತುಂಬಿದ ದಾರಿಯಲ್ಲಿ ಒಬ್ಬನೇ ಹೋಗುವಾಗ ಆತನಿಗೆ ತುಂಬಾ ಭಯವಾಗುತ್ತಿತ್ತು. ಏಕೆಂದರೆ ಆ ದಾರಿಯಲ್ಲಿ ರಾತ್ರಿ ಹೊತ್ತು ದೈವ್ವ ಗಳು ನಡೆದಾಡುತ್ತವೆ ಎಂದು ಊರಿನವರು ಹೇಳುತ್ತಿದ್ದರು.  ದೇವರ ಮೇಲೆ ಭಾರಹಾಕಿ ವಸಂತ ನಡೆಯುತ್ತ ಇರಬೇಕಾದರೆ, ಹಿಂದಿನಿಂದ ಕಾಲಸಪ್ಪಳ ಕೇಳಿದಂತಾಗಿ ವಸಂತ ಭಯದಿಂದ ಬೇಗ ಬೇಗ ಹೆಜ್ಜೆ ಹಾಕಿ ನಡೆಯಲು ಪ್ರಾರಂಭಿಸಿದ. ಹಿಂದೆ ತಿರುಗಲು ಆತನಿಗೆ ತುಂಬಾ ಭಯವಾಗಿತ್ತು ,ಸುಮಾರು ದೂರ ಬಂದ ಮೇಲೆ ಧೈರ್ಯ ಮಾಡಿ ಹಿಂತಿರುಗಿ ನೋಡಿದಾಗ ಬಿಳಿಯ ಬಟ್ಟೆ ತೊಟ್ಟ ವ್ಯಕ್ತಿ ಗಾಳಿಯಲ್ಲಿ ಚಲಿಸುವಂತೆ ಕಂಡು ಆತ ಒಂದೇ ಉಸಿರಿಗೆ ಓಡಿ ಮನೆ ತಲಪಿ ಬಿಟ್ಟ . ತನ್ನ ಭಯವನ್ನು ಮನೆಯವರಲ್ಲಿ ಹೇಳಲು ನಾಚಿಕೆಯಾಗಿ ಆತ ಯಾರಲ್ಲೂ ಹೇಳಲಿಲ್ಲ ಮರುದಿನ ಬೆಳಗಾದಮೇಲೆ ವಸಂತ ತಾನು ನಿನ್ನೆ ಕಂಡುದು ದೈವ್ವ ವೇ ಅಲ್ಲವೇ ಎಂದು ತಿಳಿಯಲು ತಾನು ನಿನ್ನೆ ಬಂದ ದಾರಿಯಲ್ಲಿ ಸ್ವಲ್ಪ ದೂರ ಹೋದಾಗ  ಅಲ್ಲಿ ಗದ್ದೆಗೆ ಹಕ್ಕಿಗಳು ಬಾರದಂತೆ ಕಟ್ಟಿದ್ದ ಬೆರ್ಚಪ್ಪನ  ಬೊಂಬೆ ಆತನನ್ನು  ಅಣಕಿಸಿ ನಕ್ಕಂತಾಯಿತು .

 ನೀತಿ ...ಕಣ್ಣಾರೆ ಕಂಡರೂ ಪರಾಂಬರಿಸಿ ನೋಡಬೇಕು

ಪಂಕಜಾ.ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...