ಸ್ನೇಹ ಸಂಗಮ ದಲ್ಲಿ 4.7.2020 ರಂದು ಮೆಚ್ಚುಗೆ
ಕೃಷಿ ಖುಷಿ ( ಶರ ಷಟ್ಪದಿ)
ಕೃಷಿಯಲಿ ತೊಡಗುತ
.ಹಸುರಲಿ ನಲಿಯುತ
ಕೃಷಿಕನು ಕಾಯಕ ಮಾಡುವನು
ಕಸಿಯನು ಕಟ್ಟುತ
ಹಸಿವನು ಮರೆಯುತ
ಹೊಸತನ ಹುಡುಕುತ ಕಲಿಯುವನು
ಮಳೆಯದು ಸುರಿದೂ
ಇಳೆಯದು ತಣಿದೂ
ಬೆಳೆಯನು ಬೆಳೆಯಲು ಸಂಭ್ರಮವು
ಮೊಳಕೆಯ ನೋಡುತ
ಕಳೆಯನು ತೆಗೆಯುತ
ಇಳೆಯಲಿ ದುಡಿಯಲು ಸಂತಸವು
ಅನುದಿನ ದುಡಿಯುತ
ತನುವನು ಬಾಗಿಸಿ
ಕನಸಲು ಹಸಿರನೆ ಕಾಣುವನು
ಮನದಲಿ ತುಂಬಿದ
ಕನಸನು ಬಿತ್ತುತ
ನನಸನು ಮಾಡಲ್ ಶ್ರಮಿಸುವನು
ಪಂಕಜಾ.ಕೆ. ಮುಡಿಪು
Comments
Post a Comment