ಸ್ನೇಹ ಸಂಗಮ ಸ್ಪರ್ಧೆಗಾಗಿ
ಪ್ರಕೃತಿ ಹರಣ
ಗಿಡ ಮರಗಳ ಕಡಿದೊಗೆದು
ಪ್ರಕೃತಿ ಹರಣವ ಮಾಡಿ ನಲಿದು
ಅಟ್ಟಹಾಸದಿ ಮೆರೆದಾಡಿದ ಫಲವೇ
ಕಂಡ ಕಂಡಲ್ಲಿ ಎಸೆದ ಕಸದ ತ್ಯಾಜ್ಯ
ಎಲ್ಲೆಂದರಲ್ಲಿ ಉಗುಳುವ ದುರಾಭ್ಯಾಸ
ಆಪತ್ತನ್ನು ಮೈ ಮೇಲೆ ಏರಿಸಿಕೊಂಡನೆ ಮನುಜ
ಗಿರಿಕಂದರಗಳೆಲ್ಲವನು ಮುಟ್ಟಿ ತಟ್ಟಿ
ಕಾಂಕ್ರೀಟ್ ಕಾಡುಗಳ ಕಟ್ಟಿ ಮೆರೆದು
ದುರಾಸೆಗೆ ಬಲಿಯಾದ ಮಾನವನೀಗ ಬಂಧಿ
ಕೊರೊನಾ ಮಹಾಮಾರಿಯ ಧಾಳಿಗೆ
ಬೆಚ್ಚಿ ಬೆರಗಾಗುತ ದಾರಿಕಾಣದ ಪರಿಸ್ಥಿತಿ
ಮನೆಯಲ್ಲೇ ನಾಲ್ಕು ಗೋಡೆಯ ಮದ್ಯೆ ಬಂದಿಯಾಗುವ ಸ್ಥಿತಿ
ಮಾನವನ ದುರಾಸೆಗೆ ಮುನಿದಳೆ ಪ್ರಕೃತಿ
ಆಗುತ್ತಿದೆ ಮನುಜರ ಮಾರಣಹೋಮ
ದಾರಿಕಾಣದೆ ದೇವ ದೇವನಿಗೆ ಶರಣಾಗುವುದೇ ನೆಮ್ಮದಿ
ಪಂಕಜಾ .ಕೆ.ಮುಡಿಪು
Comments
Post a Comment