ಪ್ರಾಮಾಣಿಕತೆಯ ಫಲ (ನ್ಯಾನೊ ಕಥೆ)
ಒಂದು ಊರಿನಲ್ಲಿ ಗೋವಿಂದನೆಂಬ ಬಾಲಕನಿದ್ದನು.ಅವನು ತುಂಬಾ ಬಡವನಾಗಿದ್ದ, ತನ್ನ ಬಡತನದಿಂದ ಬೇಸತ್ತು ಹೇಗಾದರೂ ಮಾಡಿ ತಾನು ಹಣಗಳಸಿ ಶ್ರೀಮಂತನಾಗಬೇಕು ಎಂದು ಯೋಚಿಸಿದ ಬೇರೆ ಊರಿನಲ್ಲಿ ಏನಾದರೂ ಕೆಲಸ ಮಾಡಿ ಜೀವಿಸೋಣವೆಂದು ಅಲೋಚಿಸಿ ಹೊರಟ ಅವನ ಕಿಸೆಯಲ್ಲಿ ಕೇವಲ 10 ರೂಪಾಯಿ ಮಾತ್ರವಿತ್ತು.ಆ ಊರು ಸೇರಿದ ಮೊದಲ ದಿನ ಆತ ಆ ಹಣದಲ್ಲಿ ಹೊಟ್ಟೆ ತುಂಬಿಸಿದ.ಮರುದಿನದಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ,ತನ್ನ ಜತೆ ಕೆಲಸಮಾಡುವವರ ಜತೆ ಸ್ನೇಹದಿಂದಿದ್ದು ಪ್ರಾಮಾಣಿಕತೆಯಿಂದ ನಿಷ್ಠೆ ಯಿಂದ ದುಡಿಯುತ್ತಾ ಮಾಲೀಕರ ಮೆಚ್ಚುಗೆಯನ್ನು ಸಂಪಾದಿಸಿದ.ಆತನ ಪ್ರಾಮಾಣಿಕತೆಯನ್ನು ನೆಚ್ಚಿ ಮಾಲೀಕ ಆತನಿಗೆ ಕೈ ತುಂಬಾ ಹಣ ಕೊಡುತ್ತಿದ್ದ ಆತ ಮಿತವ್ಯಯದಿಂದ ಜೀವನ ಸಾಗಿಸುತ್ತ ಹಣ ಉಳಿತಾಯ ಮಾಡುತ್ತಾ ಬಂದ .ಒಂದು ದಿನ ಗೋವಿಂದನಿಗೆ ಎಷ್ಟು ದಿನ ಬೇರೆಯವರ ಕೈ ಕೆಳಗೆ ದುಡಿಯುವುದು ತಾನೇ ಒಂದು ಸ್ವಂತ ಕೆಲಸ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂತು. ಆತ ತನ್ನ ಉಳಿತಾಯದ ಹಣದಿಂದ ಚಿಕ್ಕದಾಗಿ ಅಂಗಡಿಯಿಟ್ಟು , ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ ಪ್ರಾಮಾಣಿಕತೆಯಿಂದ ಯಾರಿಗೂ ಮೊಸಮಾಡದೆ ಅತಿಯಾಸೆ ಪಡದೆ ತನ್ನಲ್ಲಿದ್ದ ಸಾಮಾನುಗಳನ್ನು ಹೆಚ್ಚು ಬೆಲೆಗೆ ಮಾರದೆ ಜೀವಿಸುತ್ತಿದ್ದ.ಈ ರೀತಿ ದಿ ಆ ಕಳೆಯುತ್ತಿರಲು ಆತನ ವ್ಯಾಪಾರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಯಿತು ಆತ ತಾನು ಬಾಡಿಗೆಗೆ ಇದ್ದ ಕಟ್ಟಡವನ್ನು ಕೊಂಡುಕೊಂಡು ಕೆಲಸಕ್ಕೆ ಜನರನ್ನು ನೇಮಿಸಿ ಊರಿನಲ್ಲಿ ಗಣ್ಯವ್ಯಕ್ತಿಯಾದ. ಎಲ್ಲಿ ಹೋದರೂ ಅವನನ್ನು ಎಲ್ಲರೂ ಗೌರವಿಸುತ್ತಿದ್ದರು. ಕೇವಲ 10 ರೂಪಾಯಿ ಬಂಡವಾಳ ದಿಂದ ಆತ ಈಗ ಶ್ರೀಮಂತ ನೂ ಗಣ್ಯನು ಆಗಳು ಆತನ ಪ್ರಾಮಾಣಿಕತೆ ಯೇ ಕಾರಣವಾಗಿತ್ತು
ನೀತಿ.....ಪ್ರಾಮಾಣಿಕರಿಗೆ ಎಲ್ಲವೂ ಒಳಿತಾಗುವುದು
ಪಂಕಜಾ .ಕೆ. ಮುಡಿಪು
Comments
Post a Comment