Skip to main content

ನ್ಯಾನೊ ಕಥೆ ಪ್ರಾಮಾಣಿಕತೆಯ ಫಲ

ಪ್ರಾಮಾಣಿಕತೆಯ ಫಲ (ನ್ಯಾನೊ ಕಥೆ)
ಒಂದು ಊರಿನಲ್ಲಿ ಗೋವಿಂದನೆಂಬ  ಬಾಲಕನಿದ್ದನು.ಅವನು ತುಂಬಾ ಬಡವನಾಗಿದ್ದ, ತನ್ನ ಬಡತನದಿಂದ ಬೇಸತ್ತು ಹೇಗಾದರೂ ಮಾಡಿ ತಾನು ಹಣಗಳಸಿ ಶ್ರೀಮಂತನಾಗಬೇಕು ಎಂದು ಯೋಚಿಸಿದ ಬೇರೆ ಊರಿನಲ್ಲಿ ಏನಾದರೂ ಕೆಲಸ ಮಾಡಿ ಜೀವಿಸೋಣವೆಂದು   ಅಲೋಚಿಸಿ ಹೊರಟ ಅವನ ಕಿಸೆಯಲ್ಲಿ ಕೇವಲ 10 ರೂಪಾಯಿ ಮಾತ್ರವಿತ್ತು.ಆ ಊರು ಸೇರಿದ  ಮೊದಲ ದಿನ ಆತ ಆ ಹಣದಲ್ಲಿ ಹೊಟ್ಟೆ ತುಂಬಿಸಿದ.ಮರುದಿನದಿಂದ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಾ,ತನ್ನ ಜತೆ ಕೆಲಸಮಾಡುವವರ ಜತೆ ಸ್ನೇಹದಿಂದಿದ್ದು ಪ್ರಾಮಾಣಿಕತೆಯಿಂದ ನಿಷ್ಠೆ ಯಿಂದ  ದುಡಿಯುತ್ತಾ ಮಾಲೀಕರ ಮೆಚ್ಚುಗೆಯನ್ನು ಸಂಪಾದಿಸಿದ.ಆತನ ಪ್ರಾಮಾಣಿಕತೆಯನ್ನು ನೆಚ್ಚಿ ಮಾಲೀಕ ಆತನಿಗೆ ಕೈ ತುಂಬಾ ಹಣ ಕೊಡುತ್ತಿದ್ದ ಆತ ಮಿತವ್ಯಯದಿಂದ ಜೀವನ ಸಾಗಿಸುತ್ತ ಹಣ ಉಳಿತಾಯ ಮಾಡುತ್ತಾ ಬಂದ .ಒಂದು ದಿನ ಗೋವಿಂದನಿಗೆ ಎಷ್ಟು  ದಿನ  ಬೇರೆಯವರ ಕೈ ಕೆಳಗೆ ದುಡಿಯುವುದು  ತಾನೇ ಒಂದು ಸ್ವಂತ ಕೆಲಸ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂತು.  ಆತ ತನ್ನ ಉಳಿತಾಯದ ಹಣದಿಂದ ಚಿಕ್ಕದಾಗಿ ಅಂಗಡಿಯಿಟ್ಟು , ಎಲ್ಲರನ್ನು ಪ್ರೀತಿಯಿಂದ ಕಾಣುತ್ತಾ ಪ್ರಾಮಾಣಿಕತೆಯಿಂದ ಯಾರಿಗೂ ಮೊಸಮಾಡದೆ ಅತಿಯಾಸೆ ಪಡದೆ ತನ್ನಲ್ಲಿದ್ದ ಸಾಮಾನುಗಳನ್ನು ಹೆಚ್ಚು ಬೆಲೆಗೆ ಮಾರದೆ  ಜೀವಿಸುತ್ತಿದ್ದ.ಈ ರೀತಿ ದಿ ಆ ಕಳೆಯುತ್ತಿರಲು ಆತನ ವ್ಯಾಪಾರವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಯಿತು ಆತ ತಾನು ಬಾಡಿಗೆಗೆ ಇದ್ದ ಕಟ್ಟಡವನ್ನು ಕೊಂಡುಕೊಂಡು ಕೆಲಸಕ್ಕೆ ಜನರನ್ನು ನೇಮಿಸಿ ಊರಿನಲ್ಲಿ ಗಣ್ಯವ್ಯಕ್ತಿಯಾದ. ಎಲ್ಲಿ ಹೋದರೂ ಅವನನ್ನು ಎಲ್ಲರೂ ಗೌರವಿಸುತ್ತಿದ್ದರು. ಕೇವಲ 10 ರೂಪಾಯಿ ಬಂಡವಾಳ ದಿಂದ ಆತ ಈಗ ಶ್ರೀಮಂತ ನೂ ಗಣ್ಯನು ಆಗಳು ಆತನ ಪ್ರಾಮಾಣಿಕತೆ ಯೇ ಕಾರಣವಾಗಿತ್ತು
ನೀತಿ.....ಪ್ರಾಮಾಣಿಕರಿಗೆ ಎಲ್ಲವೂ ಒಳಿತಾಗುವುದು
ಪಂಕಜಾ .ಕೆ. ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...