Skip to main content

ಕಾವ್ಯಾಕುಟದಲ್ಲಿ ಉತ್ತಮ ಭಾವಗೀತೆ ಒಲವೇ ಜೀವನ

[04/07, 11:03 PM] pankajarambhat: ಕಾವ್ಯಾಕೂಟ ಚಿತ್ರಕವನ ಸ್ಪರ್ಧೆಗಾಗಿ. 

ಒಲವೇ ಜೀವನ

ಮುಂಗಾರು ಮಳೆ ಸುರಿದು ಮೈಮನಕೆ ಮುದ ತಂದಿದೆ
ನಿನ್ನೊಲವ ಧಾರೆಯಲಿ ತನುಮನಕೆ  ಉಲ್ಲಾಸ ತುಂಬಿದೆ
ಈ ಕೆಂಗುಲಾಬಿಯು ನಮ್ಮಿಬ್ಬರ ಒಲವಿಗೆ ಸಾಕ್ಷಿಯಾಗಿದೆ 
ನಾವಿಬ್ಬರೊಂದಾಗಿ ಒಲವ ಸವಿ ಸವಿಯೋಣ ಬಾ ನಲ್ಲೆ 

ಬಿಸಿಲು ಮಳೆಯ ಎಡೆಯಲಿ ಮೂಡುತಿದೆ ಕಾಮನಬಿಲ್ಲು
ಹೊಸರಾಗವ ಹಾಡುತ ಕುಣಿಯುತ್ತಿದೆ  ಜೋಡಿ ನವಿಲು
ತುಂತುರು ಮಳೆಯಲಿ ನಮ್ಮಿಬ್ಬರ ಈ ಪ್ರೇಮಬಂಧ
ಒಲವಿನ ಓಲೆಯಲಿ ನಿನಗಾಗಿ ಬರೆದೆ ಈ ಪ್ರೇಮಸಂದೇಶ

ನಮ್ಮಿಬ್ಬರ ಮಿಲನದಾ ಈ ಶುಭಗಳಿಗೆಯಲಿ ಮೂಡಿದೆ ಕಾಮನಬಿಲ್ಲು
ನಿನಗಾಗಿ ತಂದಿರುವೆ  ಈ ಚಂದದ ಕೆಂಗುಲಾಬಿಯ ನಲ್ಲೆ
ಕೈಯಲ್ಲಿರುವ ಕೊಡೆ ಯ ಹಂಗು ನಮಗೇಕೆ  ಹೇಳು ನಲ್ಲೆ
ನಲಿಯೋಣ ತುಂತುರು ಮಳೆಯಲಿ ಒಂದಾಗಿ ನಲ್ಲೆ

ಬಾಳೊಂದು ಭಾವಗೀತೆ ಹಾಡೋಣ ಜತೆಯಾಗಿ ನಲ್ಲೆ
ಒಲವೇ ಜೀವನ  ಅನುದಿನವೂ  ಬಾಳೋಣ ಬಿಗಿಯಪ್ಪುಗೆಯಲಿ ನಲ್ಲೆ
ನಿನ್ನ ಪ್ರೇಮದುಸಿರಲ್ಲಿ ಒಂದಾಗುವಾಸೆ  ನನಗೆ ನಲ್ಲ
ಪ್ರೇಮ ಮುದ್ರೆಯ ಒತ್ತಿ ಬಂಧನವ ಬಿಗಿ ಗೊಳಿಸು ನಲ್ಲ
ಪಂಕಜಾ.ಕೆ.ಮುಡಿಪು
[04/07, 11:03 PM] pankajarambhat: *ಕಾವ್ಯಕೂಟದ ಎಲ್ಲಾ ಕವಿಮನಗಳಿಗೆ ನಮಸ್ಕಾರಗಳು* 
🙏🙏🙏🙏🙏🙏🙏🙏
*ಭಾವಯಾನದ ಇಂದಿನ ಫಲಿತಾಂಶ ಪಟ್ಟಿ* 
*ಕೂಟದಲ್ಲಿ ಇಂದು ಭಾವಗೀತೆ ಬರೆದು  ಅಂದವನ್ನು ಹೆಚ್ಚಿಸಿರುವಿರಿ...*
*ಬರೆದ ಭಾವಗೀತೆಗಳೆಲ್ಲ* *ಮನಸೂರೆಗೊಳ್ಳುವಂತಿವೆ.. ಬರೆದು ಭಾಗವಹಿಸಿದ* 
*ಎಲ್ಲರಿಗೂ ಅಭಿನಂದನೆಗಳು*
🌹🌹🌹🌹🌹🌹🌹🌹
 
*👏👏👏👏ಅತ್ಯುತ್ತಮ👏👏👏👏* 

*🏆ಸಂಚಲನ ✍ಶಮಾ ಜಮಾದಾರ* 
*🏆ತೋಳ ತೊಟ್ಟಿಲು ✍ಅಶೋಕ ಬೇಳಂಜೆ*
*🏆ಉಲ್ಲಾಸ ✍ಡಾ. ಸುರೇಶ ನೆಗಳಗುಳಿ*

*👏👏👏👏ಉತ್ತಮ👏👏👏👏* 

*🏆ಒಲವಿನೊಡತಿ ✍ರಮೇಶ್ ಕುಲಾಲ್*
*🏆 ಪಿಸುಮಾತು ✍ ಜೀವಪರಿ*
*🏆 ಒಲವೆ ಜೀವನ ✍ ಪಂಕಜಾ ಕೆ.*

*👏👏👏👏ಪ್ರಥಮ👏👏👏👏*

*🏆 ಜೇನಿನ ಮಳೆ ✍ಲಕ್ಷ್ಮೀ ಭಟ್*
*🏆 ಸ್ವರ್ಗ ಸುಖ ✍ ಭಾಷಿಣಿ ಬೆಳ್ತಂಗಡಿ*
*🏆ನಾನೇ ಕಾವ್ಯ ನೀನೇ ಕತೃ ✍ಅಕ್ಕಮಹಾದೇವಿ*

*👏👏👏👏ದ್ವಿತೀಯ👏👏👏👏*

*🏆 ಒಲವ ಮಳೆ ✍ಈಶ್ವರ ಮಮದಾಪೂರ*
*🏆ನನ್ನ ಹಾರೈಕೆ ✍ಕುಮಾರ್ ಚಲವಾದಿ*
*🏆ಮನದನಿ ಸಲಿಗೆ✍ ಕಾಸೀಮ್ ನದೀಫ್*

*👏👏👏👏ತೃತೀಯ👏👏👏👏*

*🏆ಅಭ್ಯಂಗದ ಸುಖವ ✍ಅನಸೂಯ*
*🏆 ಸಂಗಾತಿ ✍ಲಕ್ಷ್ಮೀ ಅಡಿಕೆ*
*🏆 ಪ್ರೇಮದ ಒರತೆ ✍ಹೇಮಲತಾ ಕೆ*

*👏👏👏👏ಮೆಚ್ಚುಗೆ👏👏👏👏*

*🏆 ಸರಸಮಯ ✍ಮಂಜುನಾಥ್*
*🏆 ಪ್ರೇಮ ಭಾವದ ಸರಿಗಮ ✍ದೀಪಿಕಾ ಚಾಟೆ*
*🏆 ಮಧುರಾಲಿಂಗನ ✍ಶಕುಂತಲಾ*
*🏆 ಕಾಣಿಕೆ ✍ದೀಪಾ ಸದಾನಂದ*
*🏆 ಒಂದಾಗೋಣ ✍ಜ್ಯೋತಿ ಹೊಸಕೋಟೆ*
*🏆 "........." ✍ಶಾಂತಾ ಜೆ*
 
 
🤝🤝🤝🤝🤝🤝🤝🤝
*ಇಂದಿನ ನಿರ್ವಹಣೆಯ ಸೇವೆಯಲ್ಲಿ*
*ಶಿರ*
*ಮಧು ವಸ್ತ್ರದ*
*ದಿವ್ಯಾ ಶೇಟ್*
🤝🤝🤝🤝🤝🤝🤝🤝

✍️✍️✍️✍️✍️✍️✍️✍️✍️
*ನಮ್ಮೆಲ್ಲರಿಗೂ ಬರೆಯುವ ಅವಕಾಶವನ್ನು ನೀಡುತ್ತಿರುವ ಈಶ್ವರ್ ಜೀ ಅವರಿಗೆ ಹಾಗೂ ಬಳಗದ ಹಿರಿ ಚೇತನರಿಗೆ ಮನಪೂರ್ವಕ  ಧನ್ಯವಾದಗಳು..*
🙏🙏🙏🙏🙏🙏🙏🙏
*ಶುಭರಾತ್ರಿ*

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...