ಕಾವ್ಯದೀಪ ಸಾಹಿತ್ಯ ಕಲಾವೇದಿಕೆ
ಅಖಿಲ ಭಾರತ ಕವನ ಸ್ಪರ್ಧೆಗಾಗಿ
ವಿಷಯ. ರಾಷ್ಟ್ರ ನಮನ
ದೇಶಭಕ್ತಿ ಗೀತೆ
ತಾಯಿ ಭಾರತಿ
ನಿತ್ಯ ನೂತನ ತಾಯಿ ಭಾರತಿ
ಸರ್ವ ಹೃದಯದ ಸುಂದರಿ
ಗುಡಿ ಗೋಪುರ ಶಿಲ್ಪ ವೈಭವ
ಸಾರುತಿರುವಳು ಮೋದದಿ
ಹಸಿರು ಹಾಸಿದ ಗಿರಿ ಕಂದರ
ದೇವನದಿಗಳ ಬೀಡಿದು
ಪೈರು ಪಚ್ಚೆ ತುಂಬಿ ತುಳುಕುವ
ದೇವ ಸದೃಶ ನಾಡಿದು
ಸಿಂಧು ಯಮುನೆ ದೇವಗಂಗೆ
ಸಲಿಲ ತೀರ್ಥವು ಹರಿಯುವುದು
ದೇಶಭಕ್ತಿಯ ಬಿಸಿಯ ರಕ್ತವು
ಚಿಮ್ಮುತ್ತಿರುವುದು ನಮ್ಮಲಿ
ವಿಶ್ವಪ್ರೇಮ ಶಾಂತಿ ಮಂತ್ರವು
ಮೊಳಗುತ್ತಿರುವುದು ಎಲ್ಲೆಡೆ
ಸಕಲ ಧರ್ಮ ಸಮನ್ವಯವನು
ಸಾರುತಿರುವುದು ಭಾರತ
ಮಾತೃಭೂಮಿಯ ಮಣ್ಣ ಕಣ ಕಣ
ಕ್ಷಾತ್ರ ತೇಜವ ತುಂಬಿದೆ
ಕೋಟಿ ಜನ್ಮವು ಇರುವುದಿದ್ದರೂ
ಹುಟ್ಟಿ ಬರುವೆನು ಇಲ್ಲಿಯೇ
ಪಂಕಜಾ.ಕೆ .ಮುಡಿಪು
ಹೆಸರು..ಪಂಕಜಾ.ಕೆ.
ವಿಳಾಸ ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ
Comments
Post a Comment