[14/06, 9:31 PM] pankajarambhat: *ಇಂದು ಬಹುಷಃ ಯಾವುದೇ ಪೀಟಿಕೆ/ ಪದಭಂಡಾರ ಮತ್ತೇನೋ ಬೇಡವೆನಿಸುತಿದೆ. ನಿಮ್ಮೆಲ್ಲರ ಭಾಗವಹಿಸುವಿಕೆಯೇ ಸಂತಸದ ಸಾಕ್ಷಿ.....*
*ತಲೆಕೆರೆಸಿಕೊಂಡು ಮತ್ತೆ ಮತ್ತೆ ಓದಿಕೊಂಡು... ನನ್ನೊಳಗೆ ನಿಮ್ಮನ್ನು ಅರ್ಥಮಾಡಿಕೊಂಡಂತೆ, ಇಂದಿನ ಫಲಿತಾಂಶ ಈ ಕೆಳಗಿನಂತಿದೆ...*
ಅತ್ಯುತ್ತಮ- *ಶಿವಪ್ರಕಾಶ್ ಗಂಧರ್ವ*
ಉತ್ತಮ- *ಭೂಮಿಕ ಮಹೇಶ್*
ಪ್ರಥಮ- *ಸುರೇಶ್ ನೆಗಳಗುಳಿ*
*ಶಿರ*
ದ್ವಿತೀಯ- *ಗಣೇಶ್ ಪೈ*
*ಶಶಿವಸಂತ*
*ಶ್ರೀಮತಿ ಜೋಶಿ*
ತೃತೀಯ- *ಶ್ಯಾಮ್ ಸುಂದರ್*
*ಪಂಕಜ*
*ರತ್ನಮ್ಮ*
*ಅಭಿ*
[14/06, 9:32 PM] pankajarambhat: ಮರಳಿ ಗೂಡಿಗೆ
ಅಂದು ಮನೆಯಲ್ಲಿ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು .ಅವರ ದೊಡ್ಡ ಸೊಸೆ ಮೀರಾ ಭಕ್ತಿಯಿಂದ ಪೂಜಾ ಕಾರ್ಯಕ್ರಮಗಳನ್ನು ಪುರೋಹಿತರ ಉಪಸ್ಥಿತಿಯಲ್ಲಿ ಮಾಡುತ್ತಿದ್ದಳು . ಮನೆಯ ಹಿರಿಯ ಮಗ ವಿಶ್ವಾಸ್ ಮನೆ ಬಿಟ್ಟು ಹೋಗಿ .5 ವರ್ಷವಾಯಿತು,.ಅತ್ತೆ ಮಾವ ಎಲ್ಲರೂ ತುಂಬಾ ಚಿಂತೆಯಲ್ಲಿದ್ದರು. .ಎಲ್ಲಿದ್ದಾನೆ ಎಂದು ಹುಡುಕುವ ಅವರ ಪ್ರಯತ್ನವೆಲ್ಲಾ ವ್ಯರ್ಥವಾಗಿತ್ತು .,ಕೊನೆಯ ಪ್ರಯತ್ನವೆಂದು ದೇವರ ಮೊರೆಹೊಕ್ಕಿದ್ದಳು ಮೀರಾ. ಕಟ್ಟುನಿಟ್ಟಾದ ವ್ರತ ಉಪವಾಸ ಮಾಡಿ ಇಂದು ಉದ್ಯಾಪನೆ ದಿನ, ತನ್ನ ಗಂಡ ಮರಳಿ ಮನೆಗೆ ಬಂದೆ ಬರುತ್ತಾನೆ ಎನ್ನುವ ವಿಶ್ವಾಸ ಅವಳದು ...ಮಂಗಳಾರತಿ ಇನ್ನೇನು ಆಗುತ್ತದೆ ಎನ್ನುವಾಗ ಹೊರಗೆ ಗಲಾಟೆ ಕೇಳಿ ಅತ್ತೆಯವರು ಹೋಗಿ ನೋಡಿದಾಗ ಮನೆ ಬಿಟ್ಟು ಹೋದ ಮಗ ಮಿಲಿಟರಿ ಕಾರಿನಲ್ಲಿ ಬಂದು ತಂದೆ ತಾಯಿಯರ ಕಾಲು ಹಿಡಿಯುತ್ತಾನೆ. .ದೇವರ ಕಾರ್ಯಕ್ರಮ ಎಲ್ಲರನ್ನು ಸೇರುವಂತೆ ಮಾಡಿತು.ಅತ್ತೆಯವರ ಮುಖದಲ್ಲೂ ಸಂತೋಷದ ನಗೆ ಹರಿದಾಡಿತ್ತು..ಸೊಸೆಯ ನಿಷ್ಠೆ ದೇವರ ಮೇಲಿನ ಭಕ್ತಿ ಯನ್ನು ಅವರು ಮನಸಾರೆ ಕೊಂಡಾಡಿದರು
ಪಂಕಜಾ.ಕೆ.ಮುಡಿಪು
Comments
Post a Comment