ನವಪರ್ವ ಬಳಗದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ನನ್ನ ಕವನ
ವೈದ್ಯ ದೇವ
ನಂಬಿದ ರೋಗಿಯ ಸೇವೆಯ ಮಾಡುತ
ತನ್ನಯ ಸುಖವನು ಮರೆಯುವನು
ನಗುಮುಖದಿಂದಲಿ ರೋಗಿಯ ನೋಡುತ
ಮನದಲಿ ಸ್ಟೈರ್ಯವ ತುಂಬುವನು
ನಾಡಿಯ ಮಿಡಿತದಿ ರೋಗವ ತಿಳಿಯುತ
ಪ್ರೀತಿಯ ಮಾತಲಿ ಸಾಂತ್ವನ ಹೇಳುವನು
ಜೀವವ ಉಳಿಸಲು ಶ್ರಮವನು ಪಡುತ
ಹಸಿವೆ ನಿದ್ದೆಯನು ಮರೆಯುವನು
ರೋಗಿಯ ಸೇವೆಯಲಿ ತೃಪ್ತಿಯ ಕಾಣುತ
ತನ್ನ ಆಸೆ ಆಕಾಂಕ್ಷೆಗಳ ತೊರೆಯುವನು
ನಂಬಿದ ರೋಗಿಗೆ ಭರವಸೆ ಕೊಡುತ
ಆತ್ಮವಿಶ್ವಾಸವ ಅವನಲಿ ತುಂಬುವನು
ತನ್ನಯ ನೋವನು ತೋರಗೊಡದೆಯೇ
ರೋಗಿಯ ಆರೈಕೆ ಮಾಡುವನು
ರೋಗಮುಕ್ತ ಸಮಾಜ ಕಟ್ಟಲು
ಹಗಲಿರುಳೆನ್ನದೆ ದುಡಿಯುವನು
ವೈದ್ಯ ನಾರಾಯಣ ಎನ್ನುವ ಮಾತನು
ಸಾಕಾರಗೊಳಿಸಲು ಶ್ರಮಿಸುವನು
ವೈದ್ಯರ ದಿನದಲಿ ಇವರನು ನೆನೆಯುತ
ಭಕ್ತಿಯಲಿ ಕೈಯನು ಮುಗಿಯೋಣ
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment