Skip to main content

ಕವಿ ಸಾಹಿತಿಗಳ ಜೀವಾಳ ಚಿತ್ರಕಥೆ ಮರಳಿ ಗೂಡಿಗೆ

ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ

ಮರಳಿ ಗೂಡಿಗೆ

ಪಟ್ಟಣದ ಇಟ್ಟಿಗೆಯಯಂತ ಸಣ್ಣ ಮನೆಯಲ್ಲಿ ಬೆಳೆದಿದ್ದ ಸಾರಿಕಾಳಿಗೆ ಹಳ್ಳಿಗೆ ಹೋಗುವುದೆಂದರೆ ಎಲ್ಲಿಲ್ಲದ ಹಿಗ್ಗು.ಆದರೆ ಪ್ರತಿ ಸಲ ರಜೆಯಲ್ಲಿ ಹಳ್ಳಿಗೆ ಹೋಗುವ ಎಂದರೆ ತಂದೆ ತಾಯಿ ಇಬ್ಬರೂ ಒಂದಲ್ಲ ಒಂದು ನೆಪ ಹೇಳಿ ಹಳ್ಳಿಗೆ ಹೋಗುವುದನ್ನು  ಮುಂದಕ್ಕೆ ಹಾಕುತ್ತಿದ್ದರು. ಹಳ್ಳಿಯಲ್ಲಿ ಅಜ್ಜ ಅಜ್ಜಿಯ ಒಡನಾಟ  ವಿಶಾಲ ತೋಟ ಬಯಲು ಜುಳು ಜುಳು ಹರಿಯುವ ತೊರೆ ಕಾಡಿನ ಹಕ್ಕಿಗಳ ಮಧುರ ಗಾನ ಎಲ್ಲವೂ ಅವಳನ್ನು ಕಾಡುತ್ತಿದ್ದವು.ಬಾಲ್ಯದಲ್ಲಿ ಒಂದೆರಡು ಬಾರಿ ಹೋಗಿದ್ದು ಬಿಟ್ಟರೆ ಅಲ್ಲಿಗೆ ಹೋಗುವ ಅವಕಾಶವೇ ಸಿಗಲಿಲ್ಲ .ಅದಕ್ಕೆ ಕಾರಣ ಪಟ್ಟಣದ ಬೆರಗಿನ ಲೋಕಕ್ಕೆ ಮರುಳಾದ ಅವಳ ತಂದೆ ತಾಯಿಯರು.     
                 ಹೀಗಿರಲಾಗಿ ಒಂದುದಿನ ಅವರಿದ್ದ ಪಟ್ಟಣಕ್ಕೆ ಹೊಸದಾದ ರೋಗವೊಂದು ಸದ್ದಿಲ್ಲದೆ ಬಂದು ಎಲ್ಲರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಸರಕಾರ  ಎಲ್ಲರನ್ನು ಮನೆಯಲ್ಲೇ ಕುಳಿತಿರಲು ಅದೇಶಿಸಿತು ಇದರಿಂದಾಗಿ ಕೆಲಸ ಕಳೆದುಕೊಳ್ಳಬೇಕಾದ ಸ್ಥಿತಿ ರಾಜೇಶನದಾಯಿತು ಆತ ಹಳ್ಳಿಗೆ ಹೋಗುವ ನಿರ್ಧಾರ ಕೈಕೊಂಡ.ಅದರಂತೆ ಹಳ್ಳಿಗೆ ಬಂದ ಅವರು ಅಲ್ಲಿಯೇ ಇರಬೇಕಾಯಿತು .ಸಾರಿಕಾಳಿಗೆ  ತುಂಬಾ ಖುಷಿ ಆಯಿತು ಆಕೆ ಸುತ್ತ ಮುತ್ತಲ ಮನೆಯ ಮಕ್ಕಳ ಜತೆ ತೋಟ ಗುಡ್ಡ ತಿರುಗಿ  ಬಾಲ್ಯದ ಆಟವನ್ನು ಆಡುತ್ತಾ ಇದ್ದಳು.ಅದೊಂದು ದಿನ ಎಲ್ಲರೂ ಬಾಳೆಯ ತೋಟದಲ್ಲಿ ತಿರುಗಾಡುತ್ತಾ ಇದ್ದಾಗ , ಬಾಳೆ ಹೂವಿನ ಮಕರಂದ ರುಚಿಯನ್ನು ಸವಿಯಲೆಂದು ಸಾರಿಕಾ ಕೈ ಕಾಲನ್ನು ಎತ್ತರಿಸಿ ಬಾಳೆ ಹೂವನ್ನು ಕೊಯ್ಯುತ್ತಿದ್ದಳು ಮಕ್ಕಳೆಲ್ಲಾ ಆಸೆಯ ಕಣ್ಣುಗಳಿಂದ ಅವಳನ್ನು ನೋಡುತ್ತಾ ನಿಂತು ಬಿಟ್ಟವು. ಸಾರಿಕಾ  ಬಾಳೆಹೂವನ್ನು  ಮಕ್ಕಳಿಗೂ ಕೊಟ್ಟು ತಾನು ತಿಂದು  ಹಳ್ಳಿಯ ಈ ಸುಖ ಪಟ್ಟಣದಲ್ಲಿ ಎಲ್ಲಿದೆ ತಾನು ಇಲ್ಲಿಯೇ ಅಜ್ಜ ಅಜ್ಜಿಯ ಜತೆ ಇದ್ದು ಈ ತೋಟವನ್ನು  ನೋಡಿಕೊಳ್ಳಬೇಕು ಎಂದು  ನಿರ್ಧರಿಸಿದಳು.  ಮತ್ತು ತಾನು ಕಲಿತ  ವಿದ್ಯೆಯನ್ನು  ಹಳ್ಳಿಯ  ಮಕ್ಕಳಿಗೆ ಕಲಿಸಿ ಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದು ನಿರ್ಧರಿಸಿದಳು.ಅವಳ ನಿರ್ಧಾರದಿಂದ  ಹಿರಿಯ ಜೀವಗಳು ತುಂಬಾ ಖುಷಿಯಾಗಿ  ಅವಳನ್ನು ಹರಸಿ ಹಾರೈಸಿದರು
                 ಪಂಕಜಾ ಕೆ ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...