Skip to main content

ಮಂಜುವಾಣಿ ಯಲ್ಲಿ ಪ್ರಕಟ ಮಳೆಗಾಲದಲ್ಲಿ ನಮ್ಮ ಆರೋಗ್ಯ


ಮಳೆಗಾಲದಲ್ಲಿ ಮಕ್ಕಳು ವೃದ್ಧರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ

 ಬೇಸಿಗೆಯ ಸುಡು ಬಿಸಿಲು ಕಳೆದು.ಮಳೆಗಾಲವು ಮೆಲ್ಲ ಮೆಲ್ಲನೆ ಕಾಲಿಟ್ಟಿತು .ಬೇಸಿಗೆಯ ಬಿರುಬಿಸಿಲಿನಲ್ಲಿ ಬಸವಳಿದ ದೇಹ, ಮನಸು ಮಳೆಗಾಲದ ತಂಪಿಗೆ ಖುಷಿಯಿಂದ  ಮೈ ತೆರೆದುಕೊಳ್ಳುವುದು ಸಹಜ
               ಮಳೆಗಾಲ ಹಲವು ರೋಗಗಳನ್ನು ತನ್ನೊಂದಿಗೆ ತರುತ್ತದೆ .ವೃದ್ಧರು ಮಕ್ಕಳು ಬಹುಬೇಗನೆ  ಇದರ ದಾಳಿಗೆ ತುತ್ತಾಗುವರು.ಅದಕ್ಕೆ ಕಾರಣ  ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು.ಆದ್ದರಿಂದ ಮಳೆಗಾಲದಲ್ಲಿ ಮಕ್ಕಳು ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು . ರೋಗ ಬಂದಮೇಲೆ ಚಿಕಿತ್ಸೆ ಮಾಡುವುದಕ್ಕಿಂತ  ಮೊದಲೇ ಜಾಗ್ರತೆಯಿಂದ ಇರುವುದು ಒಳ್ಳೆಯದು  ಈ ದಿನಗಳಲ್ಲಿ ಮಳೆಯಲ್ಲಿ ನೆನೆಯುವುದಾಗಲಿ  ಶೀತಗಾಳಿಗೆ  ಮೈಯೊಡ್ಡುವುದಾಗಲಿ ಮಾಡದೆ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಮುಚ್ಚಿಕೊಳ್ಳಬೇಕು. ಕುದಿಸಿಅರಿಸಿದ ನೀರನ್ನು ಸೇವಿಸಬೇಕು, ನಿತ್ಯ ತುಳಸಿ ಕಷಾಯ  ಕುಡಿದರೆ ಶೀತ ಕೆಮ್ಮು ಹತ್ತಿರ ಸುಳಿಯಲಾರದು ಮಳೆಗಾಲದಲ್ಲಿ ಉಂಡ ಆಹಾರ ಜೀರ್ಣವಾಗುವುದು ನಿಧಾನ ಆದ್ದರಿಂದ ಸಮತೋಲಿತ ಆಹಾರವನ್ನು ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು ಒಳ್ಳೆಯದು.ಕುಡಿಯುವ ನೀರು ತಿನ್ನುವ ಆಹಾರದ ಬಗ್ಗೆ ಕಾಳಜಿ ಇರಬೇಕು.
               ಹಸಿಯಾಗಿ ಸೇವಿಸುವ  ತರಕಾರಿಗಳಿಗಿಂತ ಬೇಯಿಸಿದ  ತರಕಾರಿ ಈ ದಿನಗಳಲ್ಲಿ ಉತ್ತಮ. ಹಣ್ಣು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು.ಐಸ್ ಕ್ರೀಮ್ ತಂಪು ಪಾನೀಯ  ಎಣ್ಣೆಯಲ್ಲಿ ಕರಿದ ಪದಾರ್ಥಗಳ  ಸೇವನೆ ಮಾಡಬಾರದು. ಸಾಕಷ್ಟು ನೀರು ಸೇವಿಸಬೇಕು.ಮಳೆ ಹಾಗೂ ಮಳೆನೀರಿನಲ್ಲಿ ಮಕ್ಜಳನ್ನು ಆಡಲು ಬಿಡಬಾರದು
               ಥಂಡಿಯಾಗಿ ಮೂಗು ಕಟ್ಟಿದಂತೆನಿಸುತ್ತಿದ್ದರೆ  ನೀಲಗಿರಿ ತೈಲವನ್ನು  ಹಾಕಿದ ಹಬೆಯನ್ನು  ಎಳೆದುಕೊಳ್ಳಿ ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ನಾಲ್ಕಾರು ಬಿಂದು ನೀಲಗಿರಿ ತೈಲ ಹಾಕಿ ನಿಮ್ಮ ಮುಖವನ್ನು ಮತ್ತು ಪಾತ್ರೆ ಕವರ್ ಆಗುವಂತೆ ಒಂದು ಬಟ್ಟೆಯಿಂದ ಮುಚ್ಚಿ ಬಿಸಿ ಹಬೆಯನ್ನು ಮೂಗಿನಿಂದ  ಎಳೆದುಕೊಳ್ಳಬೇಕು ಕಟ್ಟಿರುವ ಮೂಗು ಸರಾಗವಾಗುವುದು.ಗಂಟಲು ನೋವು ಶೀತದ  ಬಾಧೆಗೆ ಶುಂಠಿ  ಕಷಾಯ ಪರಿಣಾಮಕಾರಿ ಉಪ್ಪು ಮತ್ತು ಅರಸಿನಹುಡಿ ಹಾಕಿದ ಬೆಚ್ಚನೆಯ ನೀರಿನಿಂದ  ಗಂಟಲನ್ನು ಗಾರ್ಗ್ ಲ್ ಮಾಡುವುದು ಒಳ್ಳೆಯದು   ಮಳೆಗಾಲದಲ್ಲಿ ಬಿಸಿನೀರು ಬಿಸಿಯಾದ.ಪದಾರ್ಥವನ್ನು ಸೇವಿಸಬೇಕು ಐಸ್ಕ್ರೀಮ್ ನಂತಹ ತಂಪು.ಪಾನೀಯ ಕರಿದ ಹುರಿದ ತಿಂಡಿಗಳು ನಿಷಿದ್ದ  . ನಿಂಬೆರಸ ಜೇನುತುಪ್ಪ ಮಿಶ್ರಣ ಗಂಟಲು ನೋವಿಗೆ ಪರಿಣಾಮಕಾರಿ. ಬೆಳ್ಳುಳ್ಳಿ  ಬೇವು ಹಾಗಲಕಾಯಿ ಯನ್ನು ಆಹಾರದಲ್ಲಿ ದಿನನಿತ್ಯ ಉಪಯೋಗಿಸುವುದರಿಂದ ಸೋಂಕುರೋಗ ಬಾರದಂತೆ ತಡೆಯಬಹುದು. ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಬಾಳೆಹಣ್ಣು ಗಜ್ಜರಿ ಮೂಲಂಗಿ ಅರಸಿನ ಹುಡಿ ಕೊತ್ತಂಬರಿ ಇವುಗಳನ್ನು ಆಹಾರದಲ್ಲಿ ಉಪಯೋಗಿಸಬೇಕು
               
ಪಂಕಜಾ.ಕೆ.ಮುಡಿಪು. 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...