ಮಳೆಗಾಲದಲ್ಲಿ ಮಕ್ಕಳು ವೃದ್ಧರು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ
ಬೇಸಿಗೆಯ ಸುಡು ಬಿಸಿಲು ಕಳೆದು.ಮಳೆಗಾಲವು ಮೆಲ್ಲ ಮೆಲ್ಲನೆ ಕಾಲಿಟ್ಟಿತು .ಬೇಸಿಗೆಯ ಬಿರುಬಿಸಿಲಿನಲ್ಲಿ ಬಸವಳಿದ ದೇಹ, ಮನಸು ಮಳೆಗಾಲದ ತಂಪಿಗೆ ಖುಷಿಯಿಂದ ಮೈ ತೆರೆದುಕೊಳ್ಳುವುದು ಸಹಜ
ಮಳೆಗಾಲ ಹಲವು ರೋಗಗಳನ್ನು ತನ್ನೊಂದಿಗೆ ತರುತ್ತದೆ .ವೃದ್ಧರು ಮಕ್ಕಳು ಬಹುಬೇಗನೆ ಇದರ ದಾಳಿಗೆ ತುತ್ತಾಗುವರು.ಅದಕ್ಕೆ ಕಾರಣ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವುದು.ಆದ್ದರಿಂದ ಮಳೆಗಾಲದಲ್ಲಿ ಮಕ್ಕಳು ವೃದ್ಧರು ತುಂಬಾ ಎಚ್ಚರಿಕೆಯಿಂದ ಇರಬೇಕು . ರೋಗ ಬಂದಮೇಲೆ ಚಿಕಿತ್ಸೆ ಮಾಡುವುದಕ್ಕಿಂತ ಮೊದಲೇ ಜಾಗ್ರತೆಯಿಂದ ಇರುವುದು ಒಳ್ಳೆಯದು ಈ ದಿನಗಳಲ್ಲಿ ಮಳೆಯಲ್ಲಿ ನೆನೆಯುವುದಾಗಲಿ ಶೀತಗಾಳಿಗೆ ಮೈಯೊಡ್ಡುವುದಾಗಲಿ ಮಾಡದೆ ಬೆಚ್ಚಗಿನ ಉಡುಪು ಧರಿಸಿ ಮೈಯನ್ನು ಮುಚ್ಚಿಕೊಳ್ಳಬೇಕು. ಕುದಿಸಿಅರಿಸಿದ ನೀರನ್ನು ಸೇವಿಸಬೇಕು, ನಿತ್ಯ ತುಳಸಿ ಕಷಾಯ ಕುಡಿದರೆ ಶೀತ ಕೆಮ್ಮು ಹತ್ತಿರ ಸುಳಿಯಲಾರದು ಮಳೆಗಾಲದಲ್ಲಿ ಉಂಡ ಆಹಾರ ಜೀರ್ಣವಾಗುವುದು ನಿಧಾನ ಆದ್ದರಿಂದ ಸಮತೋಲಿತ ಆಹಾರವನ್ನು ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದು ಒಳ್ಳೆಯದು.ಕುಡಿಯುವ ನೀರು ತಿನ್ನುವ ಆಹಾರದ ಬಗ್ಗೆ ಕಾಳಜಿ ಇರಬೇಕು.
ಹಸಿಯಾಗಿ ಸೇವಿಸುವ ತರಕಾರಿಗಳಿಗಿಂತ ಬೇಯಿಸಿದ ತರಕಾರಿ ಈ ದಿನಗಳಲ್ಲಿ ಉತ್ತಮ. ಹಣ್ಣು ತರಕಾರಿಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸಬೇಕು.ಐಸ್ ಕ್ರೀಮ್ ತಂಪು ಪಾನೀಯ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ಮಾಡಬಾರದು. ಸಾಕಷ್ಟು ನೀರು ಸೇವಿಸಬೇಕು.ಮಳೆ ಹಾಗೂ ಮಳೆನೀರಿನಲ್ಲಿ ಮಕ್ಜಳನ್ನು ಆಡಲು ಬಿಡಬಾರದು
ಥಂಡಿಯಾಗಿ ಮೂಗು ಕಟ್ಟಿದಂತೆನಿಸುತ್ತಿದ್ದರೆ ನೀಲಗಿರಿ ತೈಲವನ್ನು ಹಾಕಿದ ಹಬೆಯನ್ನು ಎಳೆದುಕೊಳ್ಳಿ ಒಂದು ಪಾತ್ರೆಯಲ್ಲಿ ನೀರು ಕುದಿಸಿ ಅದಕ್ಕೆ ನಾಲ್ಕಾರು ಬಿಂದು ನೀಲಗಿರಿ ತೈಲ ಹಾಕಿ ನಿಮ್ಮ ಮುಖವನ್ನು ಮತ್ತು ಪಾತ್ರೆ ಕವರ್ ಆಗುವಂತೆ ಒಂದು ಬಟ್ಟೆಯಿಂದ ಮುಚ್ಚಿ ಬಿಸಿ ಹಬೆಯನ್ನು ಮೂಗಿನಿಂದ ಎಳೆದುಕೊಳ್ಳಬೇಕು ಕಟ್ಟಿರುವ ಮೂಗು ಸರಾಗವಾಗುವುದು.ಗಂಟಲು ನೋವು ಶೀತದ ಬಾಧೆಗೆ ಶುಂಠಿ ಕಷಾಯ ಪರಿಣಾಮಕಾರಿ ಉಪ್ಪು ಮತ್ತು ಅರಸಿನಹುಡಿ ಹಾಕಿದ ಬೆಚ್ಚನೆಯ ನೀರಿನಿಂದ ಗಂಟಲನ್ನು ಗಾರ್ಗ್ ಲ್ ಮಾಡುವುದು ಒಳ್ಳೆಯದು ಮಳೆಗಾಲದಲ್ಲಿ ಬಿಸಿನೀರು ಬಿಸಿಯಾದ.ಪದಾರ್ಥವನ್ನು ಸೇವಿಸಬೇಕು ಐಸ್ಕ್ರೀಮ್ ನಂತಹ ತಂಪು.ಪಾನೀಯ ಕರಿದ ಹುರಿದ ತಿಂಡಿಗಳು ನಿಷಿದ್ದ . ನಿಂಬೆರಸ ಜೇನುತುಪ್ಪ ಮಿಶ್ರಣ ಗಂಟಲು ನೋವಿಗೆ ಪರಿಣಾಮಕಾರಿ. ಬೆಳ್ಳುಳ್ಳಿ ಬೇವು ಹಾಗಲಕಾಯಿ ಯನ್ನು ಆಹಾರದಲ್ಲಿ ದಿನನಿತ್ಯ ಉಪಯೋಗಿಸುವುದರಿಂದ ಸೋಂಕುರೋಗ ಬಾರದಂತೆ ತಡೆಯಬಹುದು. ರೋಗನಿರೋಧಕ ಶಕ್ತಿ ವೃದ್ಧಿಗಾಗಿ ಬಾಳೆಹಣ್ಣು ಗಜ್ಜರಿ ಮೂಲಂಗಿ ಅರಸಿನ ಹುಡಿ ಕೊತ್ತಂಬರಿ ಇವುಗಳನ್ನು ಆಹಾರದಲ್ಲಿ ಉಪಯೋಗಿಸಬೇಕು
ಪಂಕಜಾ.ಕೆ.ಮುಡಿಪು.
- Get link
- X
- Other Apps
- Get link
- X
- Other Apps
Comments
Post a Comment