ಚಿತ್ರಕ್ಕೊಂದು ನ್ಯಾನೊ ಕಥೆ
ಶ್ರಮದ ಬೆಲೆ
ಯಾವ ಕೆಲಸವನ್ನೂ ಮಾಡದೆ ಉಂಡಾಡಿಯಾಗಿ ತಿರುಗಾಡುತ್ತಿದ್ದ ಮಗನಿಗೆ ,ರಾಮಣ್ಣ ನಿತ್ಯ ಬುದ್ದಿ ಹೇಳಿ ತನ್ನ ಜತೆ ಗದ್ದೆ ಉಳುಮೆಗೆ ಬರಲು ಹೇಳುತ್ತಿದ್ದ. ಅಲ್ಲಿ ಇಲ್ಲಿ ತಿರುಗಾಡುವುದೇ ಕಸುಬಾಗಿದ್ದ ಪ್ರಥಮ ನಿಗೆ ತಂದೆಯ ಮಾತುಗಳು ಹಿಡಿಸುತ್ತಿರಲಿಲ್ಲ .ಕೊರೊನಾ ಬಂದು ಸರಕಾರ ಲಾಕ್ ಡೌನ್ ಆದೇಶಿಸಿದಾಗ ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಾದ ಅವನನ್ನು ತಂದೆ ತನ್ನ ಜತೆ ಗದ್ದೆಗೆ ಕರೆದು ಕೊಂಡು ಹೋಗಿ ಉಳುಮೆ ಮಾಡುವುದನ್ನು ಕಲಿಸಿದ .ಕೆಲಸ ಮಾಡಿ ಅಭ್ಯಾಸವಿಲ್ಲದ ಆತ ದಣಿದರೂ ರಾತ್ರಿ ಮಲಗಿದ ಕೂಡಲೇ ಇಷ್ಟರ ತನಕ ಬಾರದೆ ಇದ್ದ ಸುಖ ನಿದ್ರೆ ಬಂದಾಗ ಶ್ರಮದ ಬೆಲೆ ಆತನಿಗೆ ಗೊತ್ತಾಯಿತು
ಪಂಕಜಾ.ಕೆ ಮುಡಿಪು
Comments
Post a Comment