ಚಿತ್ರಕ್ಕೊಂದು ಕಥೆ (ಸ್ಪರ್ಧೆಗಾಗಿ)
ಕನಸು ---ನನಸು
ಸುಮ ವಿದ್ಯಾವಂತೆ , ಬುದ್ಧಿವಂತೆ ,ಬಿಡುವಿನ ಸಮಯದಲ್ಲಿ ಏನಾದರೂ ಸಮಾಜಕ್ಕೆ ಒಳಿತು ಆಗುವುದನ್ನು ಮಾಡಬೇಕು ಎನ್ನುವ ಆಶೆ ಅವಳಿಗೆ. ದಿನಾ ವಾಕಿಂಗ್ ಹೋಗುವ ಅಭ್ಯಾಸ ಇದ್ದ ಆಕೆ ಆದಿನ ಯಾವುದೋ ಯೋಚನೆಯಲ್ಲಿ ನಡೆಯುತ್ತಾ ಇದ್ದಾಗ ,ಬಾಲ್ ಒಂದು ಬಂದು ಆಕೆಯ ಹಣೆಗೆ ಬಡಿಯಿತು. ಆಕೆ ಹಾ ಎಂದು ಕೈ ಯಿಂದ ಹಣೆ ಒತ್ತಿಕೊಂಡು ಸುತ್ತುಮುತ್ತ ನೋಡುವಾಗ ಕೆಲವು ಮಕ್ಕಳು ಗಾಬರಿಯ ಮುಖ ಮಾಡಿ ದೂರದಲ್ಲಿ ನಿಂತಿರುವುದು ಕಂಡಿತು .ಎಣ್ಣೆ ಕಾಣದ ಕೂದಲು ಶುಚಿತ್ವವಿಲ್ಲದ ಅವರನ್ನು ಕಂಡು ಅಸಹ್ಯವಾದರೂ ಅವರನ್ನು ತಾನು ಬದಲಿಸಬೇಕು ಎಂದು ನಿಶ್ಹೈಯಿಸಿ ಅವರಲ್ಲಿ ಒಬ್ಬನನ್ನು ಸನ್ನೆ ಮಾಡಿ ಕರೆದಾಗ,ಆತ ಹೆದರುತ್ತ ಹತ್ತಿರ ಬಂದು ನಿಂತ .ಅವನಲ್ಲಿ ಸುಮಾ ನಿನ್ನ ಹೆಸರೇನು ಯಾವ ಕ್ಲಾಸ್ ಎಂದು ಕೇಳಿದಾಗ ಹುಡುಗ ತನ್ನ ಹೆಸರು ಹೇಳಿದರೂ,ಶಾಲೆಯ ಬಗ್ಗೆ ಏನೊಂದನ್ನು ಹೇಳದೆ ಇದ್ದಾಗ ಒತ್ತಾಯಿಸಿ ಕೇಳುವಾಗ ಅವರು ಶಾಲೆಯ ಮುಖವನ್ನೇ ಕಾಣಲಿಲ್ಲ ವೆಂದು ತಿಳಿದು ಅವರ. ಜತೆ ಅವರ ಮನೆಗೆ ಹೋಗುತ್ತಾಳೆ.ಅಲ್ಲಿ ಅವರ ಮನೆ ಮತ್ತು ಪರಿಸರ ನೋಡಿದಾಗ ಕಡು ಬಡತನದ ಅವರನ್ನು ಕಂಡು ಅನುಕಂಪದಿಂದ ಅವರಿಗೆ ವಿದ್ಯೆಯ ಮಹತ್ವವನ್ನು ತಿಳಿಸಿ ತಾನು ನಿತ್ಯವೂ ಬಂದು ಮಕ್ಕಳಿಗೆ ವಿದ್ಯೆ ಕಲಿಸುತ್ತೇನೆ ಎಂದು ಹೇಳುತ್ತಾಳೆ. ಅವರಿಗೂ ಮಕ್ಕಳನ್ನು ಶಾಲೆಗೆ ಕಳಿಸುವ ಮನಸು ಇದ್ದರೂ ತಮ್ಮ ಬಡತನದ ಕಾರಣದಿಂದ ಅದು ಆಷಾಧ್ಯವಾಗಿತ್ತು.ಸುಮಾಳ ಮಾತು ಕೇಳಿ ಖುಷಿಯಿಂದ ಎಲ್ಲರೂ ಒಪ್ಪಿಗೆ ಕೊಟ್ಟರು.ಮರುದಿನ ಸುಮಾ ಅಲ್ಲಿಗೆ ಬಂದಾಗ ಮಕ್ಕಳ ಜತೆ ದೊಡ್ಡವರೂ ನೀಟಾಗಿ ಬಟ್ಟೆ ತೊಟ್ಟು ಸುಮಾ ಹೇಳುವ ಪಾಠವನ್ನು ಕಲಿಯಲು ಖುಷಿಯಿಂದ ಮನೆಯ ಹೊರಬಾಗದಲ್ಲಿದ್ದ ಕಟ್ಟೆಯಲ್ಲಿ ಸೇರಿದ್ದರು.ಅವರನ್ನು ಕಂಡ ಸುಮಾ ಅವರಿಗೆ ಪಾಠದ ಜತೆ ಶುಚಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುತ್ತಾ ಕೊಳೆಗೇರಿ ಮಕ್ಕಳ ನೆಚ್ಚಿನ ಶಿಕ್ಷಕಿಯಾದಳು..ಈ ರೀತಿ ಸುಮಾ ತನ್ನ ಕನಸನ್ನು ನನಸಾಗಿಸಿಕೊಂಡಳು.
ಪಂಕಜಾ.ಕೆ.ಮುಡಿಪು
Comments
Post a Comment