Skip to main content

ಕನಸು ನನಸು.ಕಥೆ ಕವಿ ಸಾಹಿತಿ ಜೀವಾಳ ಉತ್ತಮ

ಚಿತ್ರಕ್ಕೊಂದು ಕಥೆ   (ಸ್ಪರ್ಧೆಗಾಗಿ)

ಕನಸು ---ನನಸು

ಸುಮ ವಿದ್ಯಾವಂತೆ , ಬುದ್ಧಿವಂತೆ   ,ಬಿಡುವಿನ ಸಮಯದಲ್ಲಿ ಏನಾದರೂ ಸಮಾಜಕ್ಕೆ ಒಳಿತು ಆಗುವುದನ್ನು ಮಾಡಬೇಕು  ಎನ್ನುವ ಆಶೆ ಅವಳಿಗೆ. ದಿನಾ ವಾಕಿಂಗ್ ಹೋಗುವ ಅಭ್ಯಾಸ ಇದ್ದ ಆಕೆ ಆದಿನ ಯಾವುದೋ ಯೋಚನೆಯಲ್ಲಿ ನಡೆಯುತ್ತಾ ಇದ್ದಾಗ ,ಬಾಲ್ ಒಂದು ಬಂದು ಆಕೆಯ ಹಣೆಗೆ ಬಡಿಯಿತು. ಆಕೆ ಹಾ ಎಂದು ಕೈ ಯಿಂದ ಹಣೆ ಒತ್ತಿಕೊಂಡು ಸುತ್ತುಮುತ್ತ ನೋಡುವಾಗ  ಕೆಲವು ಮಕ್ಕಳು ಗಾಬರಿಯ ಮುಖ ಮಾಡಿ ದೂರದಲ್ಲಿ ನಿಂತಿರುವುದು ಕಂಡಿತು .ಎಣ್ಣೆ ಕಾಣದ ಕೂದಲು ಶುಚಿತ್ವವಿಲ್ಲದ ಅವರನ್ನು ಕಂಡು ಅಸಹ್ಯವಾದರೂ ಅವರನ್ನು ತಾನು ಬದಲಿಸಬೇಕು  ಎಂದು ನಿಶ್ಹೈಯಿಸಿ ಅವರಲ್ಲಿ ಒಬ್ಬನನ್ನು   ಸನ್ನೆ ಮಾಡಿ ಕರೆದಾಗ,ಆತ ಹೆದರುತ್ತ ಹತ್ತಿರ ಬಂದು ನಿಂತ .ಅವನಲ್ಲಿ ಸುಮಾ ನಿನ್ನ ಹೆಸರೇನು ಯಾವ ಕ್ಲಾಸ್ ಎಂದು ಕೇಳಿದಾಗ ಹುಡುಗ ತನ್ನ ಹೆಸರು ಹೇಳಿದರೂ,ಶಾಲೆಯ ಬಗ್ಗೆ ಏನೊಂದನ್ನು ಹೇಳದೆ ಇದ್ದಾಗ ಒತ್ತಾಯಿಸಿ ಕೇಳುವಾಗ ಅವರು ಶಾಲೆಯ ಮುಖವನ್ನೇ ಕಾಣಲಿಲ್ಲ ವೆಂದು ತಿಳಿದು ಅವರ. ಜತೆ ಅವರ ಮನೆಗೆ ಹೋಗುತ್ತಾಳೆ.ಅಲ್ಲಿ ಅವರ ಮನೆ ಮತ್ತು ಪರಿಸರ ನೋಡಿದಾಗ ಕಡು  ಬಡತನದ ಅವರನ್ನು ಕಂಡು ಅನುಕಂಪದಿಂದ ಅವರಿಗೆ ವಿದ್ಯೆಯ ಮಹತ್ವವನ್ನು ತಿಳಿಸಿ ತಾನು ನಿತ್ಯವೂ ಬಂದು ಮಕ್ಕಳಿಗೆ ವಿದ್ಯೆ ಕಲಿಸುತ್ತೇನೆ ಎಂದು ಹೇಳುತ್ತಾಳೆ. ಅವರಿಗೂ ಮಕ್ಕಳನ್ನು  ಶಾಲೆಗೆ ಕಳಿಸುವ ಮನಸು ಇದ್ದರೂ ತಮ್ಮ ಬಡತನದ ಕಾರಣದಿಂದ ಅದು ಆಷಾಧ್ಯವಾಗಿತ್ತು.ಸುಮಾಳ ಮಾತು ಕೇಳಿ ಖುಷಿಯಿಂದ ಎಲ್ಲರೂ ಒಪ್ಪಿಗೆ ಕೊಟ್ಟರು.ಮರುದಿನ ಸುಮಾ ಅಲ್ಲಿಗೆ ಬಂದಾಗ ಮಕ್ಕಳ ಜತೆ ದೊಡ್ಡವರೂ ನೀಟಾಗಿ ಬಟ್ಟೆ ತೊಟ್ಟು ಸುಮಾ ಹೇಳುವ ಪಾಠವನ್ನು ಕಲಿಯಲು ಖುಷಿಯಿಂದ  ಮನೆಯ ಹೊರಬಾಗದಲ್ಲಿದ್ದ ಕಟ್ಟೆಯಲ್ಲಿ ಸೇರಿದ್ದರು.ಅವರನ್ನು ಕಂಡ ಸುಮಾ ಅವರಿಗೆ ಪಾಠದ ಜತೆ ಶುಚಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುತ್ತಾ   ಕೊಳೆಗೇರಿ ಮಕ್ಕಳ  ನೆಚ್ಚಿನ ಶಿಕ್ಷಕಿಯಾದಳು..ಈ ರೀತಿ ಸುಮಾ ತನ್ನ ಕನಸನ್ನು ನನಸಾಗಿಸಿಕೊಂಡಳು.

ಪಂಕಜಾ.ಕೆ.ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020