ಕಾವ್ಯಕೂಟ ಸ್ಪರ್ಧೆಗಾಗಿ
ಜಾನಪದಗೀತೆ
ಭೂತಾಯಿ ಸೊಬಗು
ಮೂಡಾಲ ಮನ್ಯಾಗ
ಹೊನ್ನ ರಥವೇರಿ ಬರುತಾನ
ಜಗಕೆಲ್ಲಾ ಬೆಳಕಾ ತರುತಾನವ್ವ
ಬೆಳಗಾಗಿ ಬೇಗೆದ್ದು
ಸಿರಿದೇವಿಯ ನೆನೆಯುತ್ತ
ಭೂತಾಯಿ ಒಡಲಿಗೆ ನಮಿಸಬೇಕವ್ವ
ಅನ್ನವ ಕೊಡುವಾಕೆ
ಬನ್ನವಾ ಕಳೆದಾಕೆ
ಹೊತ್ತಾರೆ ಮಾದೇವಿಯ ನೆನೆಯಬೇಕವ್ವ
ಮಳೆ ಬಂದು ಕೆರೆಕಟ್ಟೆ ತುಂಬೈತೆ
ಭೂತಾಯಿ ಒಡಲು ನೆನೆದೈತೆ
ಉತ್ತು ಬಿತ್ತಿ ಬೆಳೆ ಬೆಳೆಯಬೇಕವ್ವ
ಎಲ್ಲೆಲ್ಲೂ ಹಸಿರು ತುಂಬೈತೆ
ಭೂತಾಯಿ ಹಸಿರುಟ್ಟು ನಲಿದಾಳವ್ವ
ಹೂ ಚಿಗುರು ತುಂಬಿ ಚೆಲುವು ಕಣ್ಣು ತುಂಬೈತವ್ವ
ಭೂತಾಯಿ ಒಲಿದಾರೆ
ಬಾಳೆಲ್ಲಾ ಬಂಗಾರವಾಗುತೈತೆ
ಹಟ್ಟಿ ತುಂಬಾ ಕಾಳು ತುಂಬುತೈತೆ
ಪಂಕಜಾ.ಕೆ.ಮುಡಿಪು
Comments
Post a Comment