Skip to main content

ಲೇಖನ ಶ್ರಾವಣ ಸಂಭ್ರಮ

ಶ್ರಾವಣ ಸಂಭ್ರಮ( ಲೇಖನ)

ಮಾಸಗಳಲ್ಲೆಲ್ಲಾ ಅತಿ ಹೆಚ್ಚು ಹಬ್ಬಗಳು ಬರುವ ಮಾಸವೆಂದರೆ ಅದು ಶ್ರಾವಣ. ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಸಾಲು ಸಾಲೇ ಬರುತ್ತದೆ.
ಭಾರತೀಯ ಸಂಸ್ಕೃತಿ ಯಲ್ಲಿ ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಹಬ್ಬಗಳು ಮನೆ ಮಂದಿಯರನ್ನು ಒಟ್ಟಾಗಿಸಿ ಸಂಭ್ರಮದ ವಾತಾವರಣವನ್ನು ಮನೆಯಲ್ಲಿ ತುಂಬುತ್ತದೆ .ಆಷಾಢದ ಬಿಸಿಲಿಗೆ ಬೇಸತ್ತ ಮನ ಶ್ರಾವಣದ ತಂಪನ್ನು ಅನುಭವಿಸುತ್ತ ತೆರೆದುಕೊಳ್ಳುತ್ತದೆ. ಮನುಷ್ಯರಿಗೆ ಮಾತ್ರವಲ್ಲದೆ ಪ್ರಕೃತಿಗೂ ಈ ಮಾಸ ಸಂಭ್ರಮದ ಮಾಸವಾಗಿದೆ.ಹಿತವಾದ ಮಳೆಯಿಂದ ನೆನೆದ ಪ್ರಕೃತಿಯು ಹಚ್ಚ ಹಸಿರಾಗಿ ಹಸಿರಿನ ಹಂದರವೇ ಹಾಸಿದಂತೆ ಕಣ್ಮನ ತಣಿಸುತ್ತದೆ .. ಆಗಾಗ ಇಣುಕುವ ಸೂರ್ಯನ ಹೊಂಬಿಸಿಲು ,ತುಂತುರು ಮಳೆಯಲ್ಲಿ ನೆನೆಯುವ ಆಹ್ಲಾದ, ಬಾನಿನಲಿ ತೇಲಿ ಬರುವ ಮೋಡಗಳ ದಂಡು,ಗಿಡ ಮರಗಳಲ್ಲಿ ತುಂಬಿದ ಹೂಗಳು ,ಅದರ ಮತ್ತೇರಿಸುವ ಪರಿಮಳ ಎಲ್ಲವೂ  ನಮ್ಮನ್ನು ಕವಿಯಾಗಿಸುತ್ತದೆ.
                ಶ್ರಾವಣ ಮಾಸದಲ್ಲಿ ಬರುವ ಪ್ರತಿಯೊಂದು ಹಬ್ಬವೂ ವೈವಿದ್ಯತೆಯಿಂದ ಕೂಡಿದ್ದು, ಹಬ್ಬದ ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಶರೀರದ ರಕ್ಷಣೆಯನ್ನು ಮಾಡಲು ಸಹಕಾರಿಯಾಗಿದೆ. ಪೂಜೆ ವ್ರತ ಉಪವಾಸಗಳನ್ನು ಮಾಡುವುದರಿಂದ ಶರೀರದಲ್ಲಿ ತುಂಬಿದ ಕೆಟ್ಟ ಶಕ್ತಿಯು ಹೊರಟು ಹೋಗಿ ಸಾತ್ವಿಕತೆ ತುಂಬಿ ಬರುವುದು ಭೀಮನ ಅಮವಾಸ್ಯೆಯಿಂದಲೇ ಶ್ರಾವಣ ಮಾಸದ ಹಬ್ಬಗಳು  ಪ್ರಾರಂಭವಾಗುತ್ತದೆ.
                  ಹಿಂದಿನ ಕಾಲದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗಿ ಸೇರಿ  ಸಂಭ್ರಮಿಸುತ್ತಿದ್ದ ಹಬ್ಬಗಳು ಜಾಗತೀಕರಣದಿಂದಾಗಿ ಹಿಂದಿನಷ್ಟು  ಸಂಭ್ರಮವಿಲ್ಲದಿದ್ದರೂ   ಹೆಚ್ಚಿನ ಹಬ್ಬಗಳು ಮನೆ ಮಟ್ಟಿನ ಆಚರಣೆಯಾಗಿ  ಉಳಿದಿದೆ ಮನೆ ಮಂದಿಯೆಲ್ಲಾ ಒಟ್ಟಾಗಿ ಸೇರಿ ಹಬ್ಬ ಆಚರಿಸುತ್ತಿದ್ದುದರಿಂದ  ಒಗ್ಗಟ್ಟಿನ ಮನೋಭಾವ  ಕೂಡಿ ಬಾಳುವ  ಹಂಚಿ ತಿನ್ನುವ ಮನೋಭಾವ ಎಲ್ಲರಲ್ಲಿ ಇತ್ತು  ಇತ್ತೀಚೆಗೆ  ವಿಭಕ್ತ ಕುಟುಂಬ  ಸಮಯಾಭಾವ ಇತ್ಯಾದಿ ಕಾರಣಗಳಿಂದ  ಹಬ್ಬಗಳು ತಮ್ಮ ಮಹತ್ವವನ್ನು ಕಳೆದುಕೊಂಡಿದೆ. ಈ ವರ್ಷದ ಶ್ರಾವಣ ಮಾಸದಲ್ಲಂತೂ ಯಾವುದೇ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಕೊರೊನಾ ಮಹಾಮಾರಿಯು ಅಡ್ಡಿಯಾಗಿರುವುದು ಒಂದು ದುರಂತ
                 
ಪಂಕಜಾ.ಕೆ ಮುಡಿಪು.
27.7.2020
         

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...