ಕಾವ್ಯಕೂಟ ಚಿತ್ರಕವನ ಸ್ಪರ್ಧೆಗಾಗಿ
ಧರಣಿ ದೇವಿಗೆ ಸಿಂಗಾರ
ಮಳೆಯ ಸಿಂಚನ ಇಳೆಗೆ ಕಂಪನ
ಅರಳಿ ನಗುತಿದೆ ಹಸಿರ ವನಸಿರಿ
ಉಳಿಸಿ ಬೆಳೆಸಿದರದು ಕೊಡುವುದು
ಸ್ವಚ್ಛ ಶುದ್ಧ ತಂಪು ಗಾಳಿಯನು
ಅಂಗೈಯಲ್ಲೇ ಅರಮನೆ ಇರಲು
ಕಡಿದು ಉರುಳಿಸಿ ಅಳಿಸಬೇಡಿರಿ
ಉಳಿಸಿ ಮರಗಳ ಧರಣಿದೇವಿಗೆ
ಉಡಿಸಿ ನಿರಂತರ ಹಸಿರ ಸಿಂಗಾರ
ಅಂಗೈಯಲ್ಲಿ ಗಾಜಿನ ಜಾಡಿಯಲಿ
ಬೆಳೆಸಿ ಬೋನ್ಸಾಯ್ ಗಿಡಗಳ
ತೋರುತಿರುವರು ಹರಣ ಮಾಡುತ
ಪ್ರಕೃತಿ ನಿರ್ಮಿತ ಹಸಿರ ಹಂದರವ
ಹಸಿರು ಇದ್ದರೆ ಉಸಿರು ಇರುವುದು
ಬೆಳೆಸಿ ಉಳಿಸುತ ಹಸಿರು ವನಗಳ
ಸ್ವರ್ಗಸದೃಶ ವಸುಂಧರೆಯ ಚೆಲುವ
ಬಲೆಯನು ಸವಿಯುವಾತುರದಿ
ಪಂಕಜಾ.ಕೆ.ಮುಡಿಪು
Comments
Post a Comment