ಕವಿಶೈಲ ವಾರದ ಸ್ಪರ್ಧೆಗಾಗಿ
ದತ್ತ ಪದ...ನಿರೀಕ್ಷೆ
ಶೀರ್ಷಿಕೆ . ..ಕಾಯುವಿಕೆಯ ತಪ
ಕಾಡಿನ ದಾರಿಯ ಮದ್ಯದಲಿ
ತನ್ನಯ ಮುರುಕಲು ಗುಡಿಸಿಲಲಿ
ಕಾಯುತಲಿರುವಳು ಶಬರಿಯು
ಶ್ರೀ ರಾಮನ ದಾರಿಯ ಕಾತರದಿ
ನಿತ್ಯವೂ ಕಾಡನು ಸುತ್ತುವಳು
ಬಗೆ ಬಗೆ ಹೂಗಳ ಕೊಯ್ಯುವಳು
ತರ ತರ ಹಣ್ಣನು ಆರಿಸಿ ಹೆಕ್ಕುತ
ಶ್ರೀ ರಾಮನ ದಾರಿಯ ಕಾಯುವಳು
ಬಂದೇ ಬರುವನು ಎನ್ನುತಲಿ
ಕಣ್ಣನು ಹಿಗ್ಗಿಸಿ ಇಣುಕುವಳು
ಸಹನೆಯಲಿ ನಿತ್ಯವೂ ಕಾಯುವಳು
ನಿರೀಕ್ಷೆಯ ತಪದಲಿ ಬಳಲಿದಳು
ಹೆಕ್ಕಿದ ಹಣ್ಣಿನ ರುಚಿಯನು ನೋಡುತ
ಸಿಹಿ ಸಿಹಿ ಹಣ್ಣನು ತೆಗೆದಿಟ್ಟು
ತನ್ನನ್ನು ತಾನೇ ಮರೆಯುವಳು
ಭಕ್ತಿಯ ಮನದಲಿ ತುಂಬುವಳು
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment