ಕವಿ ಶೈಲ ವಾರದ ಸ್ಪರ್ಧೆಗಾಗಿ
ದೇಶ ಭಕ್ತಿ ಗೀತೆ
ದತ್ತ ಪದ ..ಹುಡುಕು
ನಮ್ಮ ದೇಶ ಭಾರತ
ಹಿಮಾಲಯದಿಂದ ಕನ್ಯಾಕುಮಾರಿಯ ವರೆಗೆ
ಹಬ್ಬಿ ನಿಂತಿದೆ ನಮ್ಮ ದೇಶ ಭಾರತ
ದೇಶಕಾಗಿ ದುಡಿದುಮಡಿದ ವೀರ ಧೀರರ ನಾಡಿದು
ವೀರವನಿತೆಯರು ಕೆಚ್ಚೆದೆಯಿಂದ ಬದುಕಿ ಬಾಳಿದ ಬೀಡಿದು
ಹಸಿರು ವನರಾಜಿಯಿಂದ ತುಂಬಿ ತುಳುಕಿದ ನಾಡಿದು
ಸರ್ವಧರ್ಮ ಸಮನ್ವತೆಯನು ಸಾರುತಿದ್ದ ನಾಡಿದು
ಗಂಗೆ ತುಂಗೆ ಸಲಿಲ ತೀರ್ಥವು ಉಕ್ಕಿ ಹರಿದ ನಾಡಿದು
ಚಿನ್ನ ಬೆಳ್ಳಿ ಮುತ್ತು ರತ್ನಗಳು ತುಂಬಿ ತುಳುಕಿದ ಬೀಡಿದು
ಎಲ್ಲಿ ಹೋಯಿತು ಈಗ ಭರತಖಂಡದ ಹಿರಿಮೆ ಗರಿಮೆಯು
ಹುಡುಕುತಿರುವೆನು ಎಲ್ಲ ಕಡೆಯೂ ಭವ್ಯ ಭಾರತ ಸಂಸ್ಕೃತಿಯನು
ತಾಯಿ ಭಾರತಿ ನಲುಗಿ ಹೋದಳು ಮಾನವನ ಅತಿ ದುರಾಸೆಗೆ
ಮತ್ತೆ ಬಂದೀತೆ ಕಳೆದು ಹೋದ ಭವ್ಯ ದಿವ್ಯ ಸಂಸ್ಕೃತಿ
ಪಂಕಜಾ.ಕೆ. ಮುಡಿಪು
Comments
Post a Comment