ಕಾವ್ಯಾ ಕೂಟ ಸ್ಪರ್ಧೆಗಾಗಿ ಕೊಟ್ಟ ಪದ ..ರದೀಪ್ ನಮನ
ಗಜಲ್
ಹೊತ್ತು ಹೆತ್ತು ಸಾಕಿ ಸಲಹಿದ ಮಾತೆಗೆ ನಮನ
ವಿದ್ಯೆ ಬುದ್ದಿಗಳ ಕಲಿಸಿ ಪೊರೆದ ಪಿತನಿಗೆ ನಮನ
ಅರಿವಿನ ಜ್ಯೋತಿಯನು ಬೆಳಗಿಸಿದವರನು ಮರೆಯುವುದುಂಟೆ
ಬದುಕಿನ ದಾರಿಯ ತೋರಿಸಿದ ಗುರುವಿಗೆ ನಮನ
ಊಟ ತಿಂಡಿಯ ಪರಿವೆಯಿಲ್ಲದೆ ದೇಶಕಾಯುವ ಧೀರರಲ್ಲವೇ ಇವರು
ನಿಸ್ವಾರ್ಥ ಸೇವೆಯ ಮಾಡುವ ವೀರ ಯೋಧರಿಗೆ ನಮನ
ಶುದ್ಧ ಗಾಳಿ ನೀರನ್ನು ಕೊಟ್ಟಿರುವ ಭೂಮಾತೆಗೆ ಕೃತಜ್ಞರಾಗಿರಬೇಡವೆ
ವಸುಂಧರೆಯ ಈ ಒಲವಿನ ಕೊಡುಗೆಗೆ ನಮನ
ಕಾಲಕಾಲಕ್ಕೆ ಮಳೆ ಇಲ್ಲದಿದ್ದರೆ ಆದೀತೇ
ಮೋಡಗಳ ಕಟ್ಟಿ ನೀರಧಾರೆ ಸುರಿಸಿದ ವರುಣನಿಗೆ ನಮನ
ಸೂರ್ಯ ಚಂದ್ರರಿಲ್ಲದೆ ಇದ್ದರೆ ಏನಿದೆ ಸೊಗಸು ಜಗದಲಿ
ನಿತ್ಯವೂ ತನ್ನ ಕೆಲಸ ಮಾಡುವ ಜಗದೊಡೆಯನಿಗೆ ನಮನ
ಅನ್ನ ಆಹಾರವಿಲ್ಲದೆ ಬದುಕಲು ಸಾಧ್ಯವೇ ಹೇಳು ಪಂಕಜಾ
ಹೊಲದಲ್ಲಿ ಉತ್ತು ಬಿತ್ತಿ ಬೆಳೆಯುವ ಅನ್ನದಾತನಿಗೆ ನಮನ
ಪಂಕಜಾ .ಕೆ. ಮುಡಿಪು
Comments
Post a Comment