ಕವಿ ಸಾಹಿತಿಗಳ ಜೀವಾಳ ಚಿತ್ರ ಕಥಾ ಸ್ಪರ್ಧೆಗಾಗಿ
ಮರಳಿ ಗೂಡಿಗೆ
ಪಟ್ಟಣದ ಇಟ್ಟಿಗೆಯಯಂತ ಸಣ್ಣ ಮನೆಯಲ್ಲಿ ಬೆಳೆದಿದ್ದ ಸಾರಿಕಾಳಿಗೆ ಹಳ್ಳಿಗೆ ಹೋಗುವುದೆಂದರೆ ಎಲ್ಲಿಲ್ಲದ ಹಿಗ್ಗು.ಆದರೆ ಪ್ರತಿ ಸಲ ರಜೆಯಲ್ಲಿ ಹಳ್ಳಿಗೆ ಹೋಗುವ ಎಂದರೆ ತಂದೆ ತಾಯಿ ಇಬ್ಬರೂ ಒಂದಲ್ಲ ಒಂದು ನೆಪ ಹೇಳಿ ಹಳ್ಳಿಗೆ ಹೋಗುವುದನ್ನು ಮುಂದಕ್ಕೆ ಹಾಕುತ್ತಿದ್ದರು. ಹಳ್ಳಿಯಲ್ಲಿ ಅಜ್ಜ ಅಜ್ಜಿಯ ಒಡನಾಟ ವಿಶಾಲ ತೋಟ ಬಯಲು ಜುಳು ಜುಳು ಹರಿಯುವ ತೊರೆ ಕಾಡಿನ ಹಕ್ಕಿಗಳ ಮಧುರ ಗಾನ ಎಲ್ಲವೂ ಅವಳನ್ನು ಕಾಡುತ್ತಿದ್ದವು.ಬಾಲ್ಯದಲ್ಲಿ ಒಂದೆರಡು ಬಾರಿ ಹೋಗಿದ್ದು ಬಿಟ್ಟರೆ ಅಲ್ಲಿಗೆ ಹೋಗುವ ಅವಕಾಶವೇ ಸಿಗಲಿಲ್ಲ .ಅದಕ್ಕೆ ಕಾರಣ ಪಟ್ಟಣದ ಬೆರಗಿನ ಲೋಕಕ್ಕೆ ಮರುಳಾದ ಅವಳ ತಂದೆ ತಾಯಿಯರು.
ಹೀಗಿರಲಾಗಿ ಒಂದುದಿನ ಅವರಿದ್ದ ಪಟ್ಟಣಕ್ಕೆ ಹೊಸದಾದ ರೋಗವೊಂದು ಸದ್ದಿಲ್ಲದೆ ಬಂದು ಎಲ್ಲರನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಸರಕಾರ ಎಲ್ಲರನ್ನು ಮನೆಯಲ್ಲೇ ಕುಳಿತಿರಲು ಅದೇಶಿಸಿತು ಇದರಿಂದಾಗಿ ಕೆಲಸ ಕಳೆದುಕೊಳ್ಳಬೇಕಾದ ಸ್ಥಿತಿ ರಾಜೇಶನದಾಯಿತು ಆತ ಹಳ್ಳಿಗೆ ಹೋಗುವ ನಿರ್ಧಾರ ಕೈಕೊಂಡ.ಅದರಂತೆ ಹಳ್ಳಿಗೆ ಬಂದ ಅವರು ಅಲ್ಲಿಯೇ ಇರಬೇಕಾಯಿತು .ಸಾರಿಕಾಳಿಗೆ ತುಂಬಾ ಖುಷಿ ಆಯಿತು ಆಕೆ ಸುತ್ತ ಮುತ್ತಲ ಮನೆಯ ಮಕ್ಕಳ ಜತೆ ತೋಟ ಗುಡ್ಡ ತಿರುಗಿ ಬಾಲ್ಯದ ಆಟವನ್ನು ಆಡುತ್ತಾ ಇದ್ದಳು.ಅದೊಂದು ದಿನ ಎಲ್ಲರೂ ಬಾಳೆಯ ತೋಟದಲ್ಲಿ ತಿರುಗಾಡುತ್ತಾ ಇದ್ದಾಗ , ಬಾಳೆ ಹೂವಿನ ಮಕರಂದ ರುಚಿಯನ್ನು ಸವಿಯಲೆಂದು ಸಾರಿಕಾ ಕೈ ಕಾಲನ್ನು ಎತ್ತರಿಸಿ ಬಾಳೆ ಹೂವನ್ನು ಕೊಯ್ಯುತ್ತಿದ್ದಳು ಮಕ್ಕಳೆಲ್ಲಾ ಆಸೆಯ ಕಣ್ಣುಗಳಿಂದ ಅವಳನ್ನು ನೋಡುತ್ತಾ ನಿಂತು ಬಿಟ್ಟವು. ಸಾರಿಕಾ ಬಾಳೆಹೂವನ್ನು ಮಕ್ಕಳಿಗೂ ಕೊಟ್ಟು ತಾನು ತಿಂದು ಹಳ್ಳಿಯ ಈ ಸುಖ ಪಟ್ಟಣದಲ್ಲಿ ಎಲ್ಲಿದೆ ತಾನು ಇಲ್ಲಿಯೇ ಅಜ್ಜ ಅಜ್ಜಿಯ ಜತೆ ಇದ್ದು ಈ ತೋಟವನ್ನು ನೋಡಿಕೊಳ್ಳಬೇಕು ಎಂದು ನಿರ್ಧರಿಸಿದಳು. ಮತ್ತು ತಾನು ಕಲಿತ ವಿದ್ಯೆಯನ್ನು ಹಳ್ಳಿಯ ಮಕ್ಕಳಿಗೆ ಕಲಿಸಿ ಹಳ್ಳಿಯನ್ನು ಮಾದರಿ ಗ್ರಾಮವನ್ನಾಗಿ ಮಾಡಬೇಕೆಂದು ನಿರ್ಧರಿಸಿದಳು.ಅವಳ ನಿರ್ಧಾರದಿಂದ ಹಿರಿಯ ಜೀವಗಳು ತುಂಬಾ ಖುಷಿಯಾಗಿ ಅವಳನ್ನು ಹರಸಿ ಹಾರೈಸಿದರು
ಪಂಕಜಾ ಕೆ ಮುಡಿಪು
Comments
Post a Comment