Skip to main content

ಕ ದಿಂದ ಳ ವರೆಗೆ ಯಜನಾಕ್ಷರ ಬಳಸಿ.ಪ್ರೇಮಕಾವ್ಯ

ಕ ದಿಂದ ಳ ವರೆಗೆ ವ್ಯಂಜನಾಕ್ಷರ ಬಳಸಿ ಪ್ರೇಮ ಸಂಭಾಷಣೆ 

 ಪ್ರೇಮಕಾವ್ಯ 

ಕ      ಕಂಡ ಕ್ಷಣವೇ ಸೋತೆ ನಾ ನಿನ್ನ ಮುದ್ದು     ಮುಖಕೆ ನಲ್ಲೆ 
ಖ    ಖೈದಿ ಯಾದೆನು ನಿನ್ನ ಆ ತುಂಟ  ಕಣ್ಣೋಟಕೆ ನಲ್ಲ
ಗ   ಗಮನವೆಲ್ಲಾ ನಿನ್ನೆಡೆಯೇ ಸೆಳೆದುಬಿಟ್ಟೆ   ಓ ಚೆಲುವೆ
ಘ.  ಘಂಟೆಗಳು ಕ್ಷಣಗಳಾಗುತ್ತಿದೆ  ನೀ ನನ್ನೊಡನಿದ್ದರೆ ಚೆಲುವ
ಙ  ವಿಜ್ಞಾಪನೆ ಸಲ್ಲಿಸೋಣ ನಮ್ಮ ಮನೆದೇವರಿಗೆ ನಾವಿಂದುಕೂಡಿ

ಚ.  ಚಂದ್ರನಂತಿರುವ ನಿನ್ನ ಮುಖಾರವಿಂದಕೆ ಸೋತೆ ನಲ್ಲೆ
ಛ   ಛಲ ತುಂಬಿದ ಆ ಕಣ್ಣ ನೋಟದ ಸೊಬಗು ಸೆಳೆಯಿತು ನಲ್ಲ
ಜ.  ಜಯಿಸಿದೆ ನೀ ನನ್ನ ಕಠೋರ ಹೃದಯವ ನಲ್ಲೆ
ಝ  ಝರಿಯಂತೆ ಹರಿಯಿತು ನಿನ್ನ ಒಲವು ನನ್ನೆಡೆಗೆ ನಲ್ಲ
ಞ  ಯಜ್ಞ ಕುಂಡದೆದುರಲಿ ಹೋಮಾಗ್ನಿಯಲಿ ನಾವಿಬ್ಬರು ಒಂದಾಗೋಣ

 ಟ. ಟಕ ಟಕನೆಂದು ನಡೆದಾಡುತ್ತ ಬರುವ ನಿನಗಾಗಿ ಕಾಯುವೆ
ಠ. ಠಕ್ಕನಂತೆ ಏಕೆ ಕದ್ದು ನೋಡುವೆ ನೀ ಇಂದು ನನ್ನ ನಲ್ಲ
ಡ. ಡವ ಡವ ಎನ್ನುತ್ತಿದೆ ನಿನ್ನ ಹೃದಯ ನಾ ಬಲ್ಲೆ ಅದನು ನಲ್ಲೆ
 ಢ  ಢಕ್ಕೆಯಂತೆ ಬಾರಿಸುತ್ತಿದೆ ನನ್ನೆದೆಯ ಮಿಡಿತ ನಿನಗಾಗಿ ನಲ್ಲ
ಣ. ಜಾಣತನದಲಿ  ನಾವಿಬ್ಬರು ಸಂಸಾರ ಸಾಗಿಸೋಣ

ತ  ತನುಮನವೆಲ್ಲಾ ನೀನೇ ತುಂಬಿರುವೆಯಲ್ಲಾ ನಲ್ಲ
ಥ   ಥಕ  ಥಕ ನೆಂದು ಕುಣಿಯುತ್ತಿದೆ ನನ್ನೀ ಹೃದಯ ನಲ್ಲೆ
ದ  ದಯಮಾಡಿ ಹೀಗೆ  ಕಣ್ಣಲ್ಲಿ ನನ್ನ ಕಾಡಬೇಡ ಓ ಚೆಲುವ
ಧ ಧನ ಕನಕ  ಯಾವಾದರಲ್ಲೂ ನನಗೆ ಬಯಕೆಯಿಲ್ಲ ಚೆಲುವೆ
ನ ನಂಬು ನನ್ನನು ಓ ನನ್ನ ಮನವ ಕದ್ದ ಚೆಲು ಚಕೋರಿ

ಪ ಪರಿ ಪರಿಯಲಿ ಬೇಡಿದರೂ ಕರಗದೆ ನಿನ್ನೀ ಹೃದಯ
ಫ. ಫಲಾಪೇಕ್ಷೆಯಿಲ್ಲದೆ ನಿನಗಾಗಿ ನಾನೋಡಿ ಬಂದೆ ನಲ್ಲೆ
ಬ  ಬಡಿದಿದೆ ನನ್ನೆದೆಯ ಮಿಡಿತ ನಿನಗಾಗಿ  ಅನುದಿನವೂ ನಲ್ಲ
ಮ ಮನಸು ಬೇಡವೆಂದರೂ ಬಿಡದೆ ನಿನ್ನೆಡೆಗೆ ವಾಲಿದೆ
ಯ.ಯಕ್ಷ ಯಕ್ಷಿಣಿಯರಂತೆ ವಿಹರಿಸೋಣ  ಬಾನಲ್ಲಿ ನಲ್ಲ
ರ ರವಿಚಂದ್ರರಿರುವ ತನಕ ಒಂದಾಗಿರೋಣ ನಲ್ಲೆ
ಲ ಲಕ್ಷಣವಾಗಿ ಕಾಣುತಿರುವೆ ಈ ಸೀರೆಯಲಿ ನೀನಿಂದು ನಲ್ಲೆ
ವ ವಧುವರರಾಗಿ ಹಸೆಮಣೆಯ ಏರೋಣವೇ ಹೇಳು ನಲ್ಲ 
ಶ  ಶರಧಿ ಯಂತೆ  ನಿತ್ಯ ಹರಿಯುತಿರಲಿ  ನಮ್ಮಿಬ್ಬರ ಈ ಪ್ರೇಮ
ಷ   ಷರತ್ತುಗಳಿಲ್ಲದೆ ಅನುದಿನವೂ ಖುಷಿಯಲ್ಲಿ ಬಾಳೋಣ ನಲ್ಲೆ
ಸ ಸಹನೆ ಬಾಳಲಿ ನಮ್ಮಿಬ್ಬರ ಉಸಿರಾಗಿರಲಿ ನಲ್ಲ
ಹ ಹರಸಿ ಹಾರೈಸಲು ಬಂಧು ಬಾಂದವರು ಬರುವರು ನಲ್ಲೆ
ಳ  ಬಾಳ ಪಯಣವು ಹೀಗೆ ನಗು ನಗುತ ಸಾಗುತಿರಲಿ  ನಲ್ಲ

ಪಂಕಜಾ.ಕೆ.ಮುಡಿಪು.

Comments

Popular posts from this blog

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಒಲವ ಪಯಣ

ಒಲವ ಪಯಣ ನೂರು ನಿರೀಕ್ಷೆಗಳ ಭಾವ ಹೊತ್ತು ಸಪ್ತಪದಿ ತುಳಿದು ಬಂದ ಆ ಹೊತ್ತು ಬಾಳ ಪಯಣದಲಿ ನೀ ಜತೆಯಾದದಿನ ಮರೆಯಲಾರನೆಂದಿಗೂ ಆ ಸುದಿನ ನಿಮ್ಮ  ಜತೆಯಲಿ  ಹೆಜ್ಜೆ  ಹಾಕುತ ವರುಷ  ಕಳೆದುದೇ  ತಿಳಿಯದು ನಡ...