ಚಿತ್ರಕ್ಕೊಂದು ಕವನ
ನಿಜ ಭಕುತಿ
ನಾಗರಪಂಚಮಿ ನಾಡಿಗೆ ಹಬ್ಬವು
ನಾರಿಯರೆಲ್ಲರಿಗೆ ನಲಿವಿನ ಕಬ್ಬವು
ಕಲ್ಲಿನ ನಾಗಗೆ ಹಾಲನು ಎರೆದು
ಹೂ ಹಣ್ಣುಗಳ ಅರ್ಪಿಸಿ ಪೂಜಿಸುವರು
ನಿಜದ ನಾಗನ ಕಾಣುತಲಿರಲು
ಭಯದಲಿ ಕಲ್ಲಲಿ ಹೊಡೆಯುವರು
ನಾಗನ ಕೊಂದ ದೋಷವು ಕಾಡಲು
ಪುರೋಹಿತರ ಕರೆಸಿ ಪೂಜೆಯ ಮಾಡುವರು
ಏನಿದು ಮನುಜರ ಈ ಪರಿ ನೀತಿ
ಭಕ್ತಿಯು ಇಲ್ಲದೆ ಹಾಲನು ಸುರಿದು
ಒಲಿಸಲು ಬಹುದೇ ದೇವನನು
ಒಂದುದಳ ತುಳಸಿಯೇ ಸಾಕು ದೇವನ ಒಲಿಸಲಿಕೆ
ಹಾಲನು ಎರೆದು ವ್ಯರ್ಥವ ಮಾಡದೆ
ಬಡವರ ಮಕ್ಕಳಿಗೆ ಕೊಡಬಾರದೆ
ಮಕ್ಕಳೇ ದೇವರು ಎನ್ನುತಲಿರುವರು
ಕಾಣುವ ದೇವರೇ ಅವರಹುದು
ಹಬ್ಬಗಳೆಲ್ಲಕು ಭಕ್ತಿಯೇ ಸಾಕು
ದೇವನು ಅದಕೆ ಒಲಿಯುವನು
ನಿತ್ಯವೂ ದೇವನ ಮನದಲಿ ನೆನೆಯುತ
ಭಕ್ತಿಯಲಿ ಬೇಡಿರಿ ಅವನನ್ನು
ಪಂಕಜಾ ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment