ಕವಿ ಸಾಹಿತಿಗಳ ಜೀವಾಳ ಚಿತ್ರ ಕವನ ಸ್ಪರ್ಧೆಗಾಗಿ
ಶಿಲ್ಪಿ
ಕಲ್ಲಕುಟ್ಟುತ ಕೆತ್ತುತಿರುವನು
ಚೆಲುವ ಮೂರ್ತಿಯ ಶಿಲ್ಪದಿ
ದೇವಮೂರ್ತಿಯು ಕೈಯ ಚಳಕದಿ
ಮೂಡಿ ಬಂದಿದೆ ಬೇಗನೆ
ನಗುತ ಕುಳಿತಳು ಬಾಲೆ ಬಳಿಯಲಿ
ಲಂಗದಾವಣಿಯಲಿರುತಲಿ
ಕಪ್ಪು ಲಂಗಕೆ ಹಳದಿ ದಾವಣಿ
ಕೈಯ ಬಳೆಗಳ ನಾದವೂ
ಕಿವಿಯಲಾಡುವ ಜುಮುಕಿಯಂತೆ
ಮನವು ತೂಗಿದೆ ತರುಣಿಯ
ತಲೆಯ ತುಂಬಾ ಮುಡಿದ ಹೂಗಳು
ಹೆಚ್ಚಿಸಿದೆ ಅವಳ ಚೆಲುವನು
ಅಜ್ಜ ಮಾಡುವ ಕೆಲಸವನ್ನು
ಬಿಟ್ಟಕಣ್ಣಲಿ ನೋಡುತ
ಮಾತು ಮಾತಿಗೆ ನಗುವು ಚೆಲ್ಲುವ
ಚೆಲುವ ವದನದ ಸುಂದರಿ
ಪ್ರಾಯ ಸಂದರೂ ಬಿಡದ ಕಾಯಕ
ಉಳಿಯ ಪೆಟ್ಟಿಗೆ ಕಲ್ಲದು
ಶಿಲ್ಪವಾಗುತ ಜನರ ಸೆಳೆದಿದೆ
ಶಿಲ್ಪಿ ಶ್ರಮವನು ತಿಳಿಸಿದೆ
ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment