ಕಾವ್ಯ ಮೈತ್ರಿ ಸ್ಪರ್ಧೆಗಾಗಿ
ಶ್ರಾವಣ ಮಂಗಳಗೌರಿ
ಬಂದಿತು ಶ್ರಾವಣ ತಂದಿತು ಹರುಷವ
ವ್ರತ ಉಪವಾಸಗಳ ಆಚರಿಸುವ
ಸಾತ್ವಿಕ ಉಪಾಸನೆಯ ಮಾಸ
ಶ್ರಾವಣ ಮಾಸದ ಐದು ಮಂಗಳವಾರ
ಮಂಗಳ ಗೌರಿಯ ಪೂಜಿಸಿ ಹೆಂಗಳೆಯರು
ಮುತ್ತೈದೆ ಭಾಗ್ಯವನು ಬೇಡುವರು
ದಾಂಪತ್ಯದ ಉಳಿವಿಗೆ ದೇವಿಯ ಹಾರೈಕೆ
ಕುಟುಂಬದ ಸಂತೋಷ ಸಮೃದ್ಧಿಗಾಗಿ
ಹರನರಸಿ ಪಾರ್ವತಿಯನು ಪೂಜಿಪರು
ದುಷ್ಟ ನಾಸಿನಿ ಶಿಷ್ಟ ಪೋಷಿಣಿ
ಸರ್ವ ಮಂಗಳೇ ಶುಭಕಾರಿಣಿ
ದೇವಿ ಗೌರಿಯ ಚರಣಕೆರಗುತಲಿ
ಐದು ವರುಷವು ಯಾರು ಆಚರಿಸಿದರೂ
ವರವ ಕೊಡುವಳು ಮಂಗಲಾಂಬಿಕೆ
ಬಾಳು ಸಂತಶದ ಹೊನಲು ಆಗುವುದು
ಪಂಕಜಾ.ಕೆ.ಮುಡಿಪು
Comments
Post a Comment