ಶ್ರಾವಣ ಮಾಸದ ವಿಶ್ವಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ ಕವನ ಸ್ಪರ್ಧೆಗಾಗಿ
ಮದುವೆಯ ಬಂಧ
ಹುಟ್ಟಿನಿಂದಲೇ ಬೆಳೆದ ಮನೆಯನು
ಬಿಟ್ಟು ಹೋಗುವ ನೋವದು
ತಂದೆ ತಾಯಿ ಒಡಹುಟ್ಟಿದವರ
ಅಗಲಿಕೆಯಲಿ ಮೂಕ ಸಂಕಟ ತುಂಬಿದೆ
ಅಗಲಿಕೆಯ ದುಃಖವಿರಲು
ಇನಿಯನೊಲವಿನ ನಿರೀಕ್ಷೆಯು
ಬಾಳಹಂದರ ಭಧ್ರವಾಗುವ
ಖುಷಿಯು ತುಂಬಿದ ಕ್ಷಣವದು
ಅತ್ತೆ ಮಾವ ನಾದಿನಿಯರ
ಪ್ರೀತಿ ನಿರೀಕ್ಷೆಯ ತಪದಲಿ
ತವರ ತೊರೆದು ಬರುವ ಹೆಣ್ಣು
ಮನೆಯ ನಂದಾದೀಪವು
ಅಪರಿಚಿತರ ಜತೆ ಹೊಂದಿಕೊಳ್ಳುತ
ಬಾಳಲೇ ಬೇಕಾದ ಸಂದಿಗ್ದತೆಯಲಿ
ಎಲ್ಲರನು ಮೆಚ್ಚಿಸಲು ಪಡುವ ಪಾಡದು
ಇನಿಯನೊಲವಲಿ ಅರಳಿ ನಗುವ ಬಾಳದು
ಅತ್ತೆ ಮಾವರನೇ ತನ್ನ ತಂದೆ ತಾಯಿ
ಎಂದು ತಿಳಿದು ಬಾಳುವ ಆಸೆಯು
ಮನೆಯ ಜನರ ಸಹಕಾರಪಡೆಯಲು
ಶ್ರಮಿಸ ಬೇಕಿದೆ ನಿತ್ಯವೂ
ಒಲಿಸಿ ಕೊಳ್ಳುತ ಮನೆಯ ಜನರನು
ಪ್ರೀತಿ ಪ್ರೇಮದ ಬಲೆಯಲಿ
ಹೊಂದಿ ಬಾಳುತ ಮನೆಗಳೆರಡನು
ಬೆಳಗುವಂದದ ಜೀವವು
ಪಂಕಜಾ ಕೆ .ಮುಡಿಪು
ಹೆಸರು..ಪಂಕಜಾ.ಕೆ.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
ಶ್ರೀ ಗಣೇಶ ಕೃಪಾ ಮುಡಿಪು
ಅಂಚೆ..ಕುರ್ನಾಡು..574153 ದ.ಕ.
ಮೊಬೈಲ್ ನಂಬರ್ 9964659620
Comments
Post a Comment