ಖಿದ್ಮಾ ಪೌಂಡೇಶನ್ ಕರ್ನಾಟಕ ಕವನ ಸ್ಪರ್ಧೆಗಾಗಿ
ವಿಷಯ....ವಿಜಯ ಪತಾಕೆ
ಶೀರ್ಷಿಕೆ. ವಿಜಯ ಗಾನ
ಭಾರತಾಂಬೆಯ ಸೇವೆಗೈಯುವ
ಫಣವ ಮನದಲಿ ತುಂಬುತ
ಹೊರಟು ಬಿಟ್ಟರು ಗಡಿಯ ಕಾಯಲು
ಮನೆ ಮಠಗಳನು ಮರೆಯುತ
ಪ್ರಾಣವೆಂಬ ಹಂಗು ತೊರೆದು
ಕಾದುತಿರುವರು ಧೈರ್ಯದಿ
ಗಡಿಯ ಎಡೆಯಲಿ ನುಸುಳುತಿರುವ
ದುರುಳರನು ಸದೆ ಬಡಿಯುತ
ಹಸಿವು ನಿದ್ದೆಯ ಪರಿವೆಯಿಲ್ಲದೆ
ದುಡಿಯುತಿರುವರು ನಿಸ್ವಾರ್ಥದಿ
ಮಡದಿ ಮಕ್ಕಳ ಬಿಟ್ಟು ಬರುತಲಿ
ದೇಶ ಕಾಯುತ ಮಡಿವರು
ಧೈರ್ಯದಲಿ ಸದೆಬಡಿದು ದುರುಳರ
ತಾಯ ಮಾನವ ಕಾಯ್ದರು
ಸಲ್ಲಿಸುವೆನು ನಮ್ಮ ನಮನವ
ಓ ವೀರ ಶೂರ ಯೋಧನೆ
ರಾಷ್ಟ್ರಕ್ಕಾಗಿ ಪ್ರಾಣತೆತ್ತರೂ
ವಿಜಯ ಪತಾಕೆಯು ಹಾರಿತು
ತಾಯಿ ಭಾರತಿ ಧನ್ಯಳಾದಳು
ವೀರಯೋಧನ ತ್ಯಾಗದಿ
ಪಂಕಜಾ.ಕೆ.ಮುಡಿಪು
Comments
Post a Comment