Skip to main content

ನನ್ನಿಷ್ಟದ ಪೌರಣಿಕ ಸ್ತ್ರೀ ಪಾತ್ರ

 ಸ್ನೇಹ ಸಂಗಮ ಸ್ಪರ್ಧೆಗಾಗಿ
 
ನನಗಿಷ್ಟವಾದ ಪುರಾಣದ  ಸ್ತ್ರೀಪಾತ್ರ

ಸಾವಿತ್ರಿ
ರಾಜಕುಮಾರಿಯಾಗಿದ್ದು,ಸಕಲ ರಾಜ ವೈಭವವನ್ನು ಅನುಭವಿಸುವ ಅವಕಾಶವಿದ್ದಾಗಲೂ,ತನ್ನ ರಾಜ್ಯವನ್ನು ಕಳೆದುಕೊಂಡು ಅರಣ್ಯವಾಸಿಯಾಗಿದ್ದ ಸತ್ಯವಾನನನ್ನು ಮೆಚ್ಚಿದ ಸಾವಿತ್ರಿಯ ಪಾತ್ರ ನನಗೆ ತುಂಬಾ ಮೆಚ್ಚುಗೆಯಾಗಿದೆ
             ಮುದ್ರದೇಶದ ಅಶ್ವಪತಿ ಯ ಮಗಳಾದ ಸಾವಿತ್ರಿಯೂ ತಂದೆಯ ಅಣತಿಯಂತೆ  ತನ್ನ ಪತಿಯಾಗುವವನನ್ನು ಹುಡುಕಲು ಹೊರತು ಕಾಡಿನಲ್ಲಿದ್ದ ಸತ್ಯವಾನನನ್ನು  ಮೆಚ್ಚಿಕೊಂಡು ಆತ ಅಲ್ಪಾಯುಷಿ ಎಂದು ತಿಳಿದರೂ ಒಮ್ಮೆ ಮನಸ್ಸಿನಲ್ಲಿ ವರಿಸಿಬಿಟ್ಟ ಆತನನ್ನೇ  ಮದುವೆಯಾಗುವುದಾಗಿ ಹಠ ಹಿಡಿದು, ಮದುವೆಯಾದ ಮೇಲೆ ತನ್ನ ಪತಿಗಿಲ್ಲದ ರಾಜೋಚಿತ ಉಡುಪು ತನಗೂ ಬೇಡವೆಂದು ಎಲ್ಲವನ್ನೂ ತ್ಯಜಿಸಿ,ಅರಣ್ಯವಾಸಕ್ಕೆ ಹೊರಟು ಕಾಡಿನಲ್ಲಿ ವೃದ್ಧ ಅತ್ತೆ ಮಾವಂದಿರ ಗಂಡನ ಸೇವೆಯನ್ನು ಶ್ರದ್ಧೆ ಭಕ್ತಿಗಳಿಂದ ಮಾಡುತ್ತಿದ್ದು ಪತಿವ್ರತಾ ಶಿರೋಮಣಿ ಎಂದು ಹೆಸರು ಪಡೆದು ಪ್ರಾಥ ಸ್ಮರಣೀಯಾಳಾಗಿದ್ದಾಳೆ.
                ತನ್ನ ಗಂಡನ ಆಯುಷ್ಯವೃದ್ಧಿಗಾಗಿ ತ್ರಿರಾತ್ರ ಎಂಬ ಮಹಾವ್ರತವನ್ನು ಕೈಕೊಂಡು ಆತನ ಸಾವು ಸಮೀಪಿಸಿರುವುದನ್ನು ಕಂಡು ಆತನ ಜತೆ ತಾನೂ ಕಾಡಿಗೆ ಹೋಗಿ ಅಲ್ಲಿ ಆತನು ತಲೆತಿರುಗಿ ಬಿದ್ದಾಗ ದೃತಿಗೆಡದೆ ಅವನ ಪ್ರಾಣ ಒಯ್ಯಲು ಬಂದ ಯಮಧರ್ಮ ರಾಯ ನನ್ನು ಯಮಲೋಕದವರೆಗೂ ಹಿಂಬಾಲಿಸಿ,  ತನ್ನ ಚತುರೋಕ್ತಿಗಳಿಂದ ಮೆಚ್ಚಿಸಿ ತನ್ನ ಗಂಡನ ಆಯುಷ್ಯವನ್ನು ಮಾತ್ರವಲ್ಲದೆ  ತನ್ನ ಅತ್ತೆ ಮಾವರ ಕಳೆದು ಹೋದ  ಕಣ್ಣು ದೃಷ್ಟಿಯನ್ನೂ,ರಾಜ್ಯವನ್ನೂ ಮರಳಿ ಪಡೆದುಕೊಂಡ ಚತುರೆ  ಪ್ರಾತಃಸ್ಮರಣೀಯಳಾದ ಮಹಾಪತಿರ್ವತೆ ಸಾವಿತ್ರಿ
                ಪಂಕಜಾ.ಕೆ ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...