ಸ್ನೇಹ ಸಂಗಮ ಸ್ಪರ್ಧೆಗಾಗಿ
ನನಗಿಷ್ಟವಾದ ಪುರಾಣದ ಸ್ತ್ರೀಪಾತ್ರ
ಸಾವಿತ್ರಿ
ರಾಜಕುಮಾರಿಯಾಗಿದ್ದು,ಸಕಲ ರಾಜ ವೈಭವವನ್ನು ಅನುಭವಿಸುವ ಅವಕಾಶವಿದ್ದಾಗಲೂ,ತನ್ನ ರಾಜ್ಯವನ್ನು ಕಳೆದುಕೊಂಡು ಅರಣ್ಯವಾಸಿಯಾಗಿದ್ದ ಸತ್ಯವಾನನನ್ನು ಮೆಚ್ಚಿದ ಸಾವಿತ್ರಿಯ ಪಾತ್ರ ನನಗೆ ತುಂಬಾ ಮೆಚ್ಚುಗೆಯಾಗಿದೆ
ಮುದ್ರದೇಶದ ಅಶ್ವಪತಿ ಯ ಮಗಳಾದ ಸಾವಿತ್ರಿಯೂ ತಂದೆಯ ಅಣತಿಯಂತೆ ತನ್ನ ಪತಿಯಾಗುವವನನ್ನು ಹುಡುಕಲು ಹೊರತು ಕಾಡಿನಲ್ಲಿದ್ದ ಸತ್ಯವಾನನನ್ನು ಮೆಚ್ಚಿಕೊಂಡು ಆತ ಅಲ್ಪಾಯುಷಿ ಎಂದು ತಿಳಿದರೂ ಒಮ್ಮೆ ಮನಸ್ಸಿನಲ್ಲಿ ವರಿಸಿಬಿಟ್ಟ ಆತನನ್ನೇ ಮದುವೆಯಾಗುವುದಾಗಿ ಹಠ ಹಿಡಿದು, ಮದುವೆಯಾದ ಮೇಲೆ ತನ್ನ ಪತಿಗಿಲ್ಲದ ರಾಜೋಚಿತ ಉಡುಪು ತನಗೂ ಬೇಡವೆಂದು ಎಲ್ಲವನ್ನೂ ತ್ಯಜಿಸಿ,ಅರಣ್ಯವಾಸಕ್ಕೆ ಹೊರಟು ಕಾಡಿನಲ್ಲಿ ವೃದ್ಧ ಅತ್ತೆ ಮಾವಂದಿರ ಗಂಡನ ಸೇವೆಯನ್ನು ಶ್ರದ್ಧೆ ಭಕ್ತಿಗಳಿಂದ ಮಾಡುತ್ತಿದ್ದು ಪತಿವ್ರತಾ ಶಿರೋಮಣಿ ಎಂದು ಹೆಸರು ಪಡೆದು ಪ್ರಾಥ ಸ್ಮರಣೀಯಾಳಾಗಿದ್ದಾಳೆ.
ತನ್ನ ಗಂಡನ ಆಯುಷ್ಯವೃದ್ಧಿಗಾಗಿ ತ್ರಿರಾತ್ರ ಎಂಬ ಮಹಾವ್ರತವನ್ನು ಕೈಕೊಂಡು ಆತನ ಸಾವು ಸಮೀಪಿಸಿರುವುದನ್ನು ಕಂಡು ಆತನ ಜತೆ ತಾನೂ ಕಾಡಿಗೆ ಹೋಗಿ ಅಲ್ಲಿ ಆತನು ತಲೆತಿರುಗಿ ಬಿದ್ದಾಗ ದೃತಿಗೆಡದೆ ಅವನ ಪ್ರಾಣ ಒಯ್ಯಲು ಬಂದ ಯಮಧರ್ಮ ರಾಯ ನನ್ನು ಯಮಲೋಕದವರೆಗೂ ಹಿಂಬಾಲಿಸಿ, ತನ್ನ ಚತುರೋಕ್ತಿಗಳಿಂದ ಮೆಚ್ಚಿಸಿ ತನ್ನ ಗಂಡನ ಆಯುಷ್ಯವನ್ನು ಮಾತ್ರವಲ್ಲದೆ ತನ್ನ ಅತ್ತೆ ಮಾವರ ಕಳೆದು ಹೋದ ಕಣ್ಣು ದೃಷ್ಟಿಯನ್ನೂ,ರಾಜ್ಯವನ್ನೂ ಮರಳಿ ಪಡೆದುಕೊಂಡ ಚತುರೆ ಪ್ರಾತಃಸ್ಮರಣೀಯಳಾದ ಮಹಾಪತಿರ್ವತೆ ಸಾವಿತ್ರಿ
ಪಂಕಜಾ.ಕೆ ಮುಡಿಪು
Comments
Post a Comment