Skip to main content

ನವಪರ್ವ ಲೇಖನ ತೃತೀಯ ನಮ್ಮ ಮನೆ ಕೈತೋಟ


ನವಪರ್ವ ಸಾಹಿತ್ಯ ಸಂಕ್ರಾಂತಿ ಸ್ಪರ್ಧೆಗಾಗಿ

ನಮ್ಮ ಮನೆಯ ಕೈತೋಟ (ಲೇಖನ)

      ಹಸಿರೇ. ...ಉಸಿರು

ಮುಂಗಾರು ಮಳೆ ಪ್ರಾರಂಭವಾಯಿತೆಂದರೆ ಮನೆಯ ಸುತ್ತು ಮುತ್ತು ಗಿಡಗಳನ್ನು ನೆಟ್ಟು ಬೆಳೆಸುವುದು ನನ್ನ ಹವ್ಯಾಸಗಳಲ್ಲಿ ಒಂದು. ಕೈತೋಟ ಮಾಡುವುದು ಎಂದರೆ ನನಗೆ ಎಲ್ಲಿಲ್ಲದ ಆಸಕ್ತಿ,ಅದಕ್ಕಾಗಿ  ನರ್ಸರಿ ಮತ್ತು ಸ್ನೇಹಿತರ ಮನೆಗಳಿಂದ ಗಿಡಗಳನ್ನು ತಂದು  ನೆಟ್ಟು ಬೆಳೆಸುತ್ತೇನೆ. ಕೈತೋಟದಲ್ಲಿ ಕೆಲಸಮಾಡುತ್ತಿದ್ದರೆ ಸಮಯ ಸರಿದುದೇ ತಿಳಿಯುವುದಿಲ್ಲ. ಹಿಂದಿನ ವರ್ಷ ಜತನದಿಂದ ಕಾದಿಟ್ಟ ತರಕಾರಿ ಬೀಜಗಳನ್ನು ಹಾಕಿ ಅದು ಇರುವೆಗಳ ಪಾಲಾಗದಂತೆ ಜಾಗ್ರತೆವಹಿಸಿ ಉತ್ತಮವಾಗಿ ಬೆಳೆದು ಫಲ ಸಿಗುವಂತೆ ಮಾಡುವುದು ಸುಲಭದ ಕೆಲಸವಲ್ಲ.
               ನಮ್ಮ ಮನೆಯ ಹಿತ್ತಲಿನಲ್ಲಿ  ಹಲವಾರು ಹೂಗಿಡಗಳನ್ನು , ಔಷಧೀಯ ಗಿಡಗಳನ್ನು, ತರಕಾರಿ ಹಣ್ಣಿನ ಗಿಡಗಳನ್ನೂ ನಾನು ಬೆಳೆಸಿರುತ್ತೇನೆ. ಇದರಿಂದ ಮನೆಗೆ ಬೇಕಾದ ತರಕಾರಿಯನ್ನು ಮಾರ್ಕೆಟ್ ನಿಂದ ತರುವ ಶ್ರಮಮತ್ತು ಹಣದ ಉಳಿತಾಯವಾಗುತ್ತದೆ,ಅಲ್ಲದೆ ಸಾವಯವ ತರಕಾರಿ  ಸಿಗುತ್ತದೆ .ಮನೆಯಲ್ಲೇ ಬೆಳೆಸಿದ ಹಸಿರು ಸೊಪ್ಪು ತರಕಾರಿಗಳು ರಾಸಾಯನಿಕ ಮುಕ್ತವಾಗಿದ್ದು ಆರೋಗ್ಯವರ್ಧಕವೂ ಆಗಿರುತ್ತದೆ
                     ಹೂವು   ತರಕಾರಿಗಳನ್ನು ಮನೆಯಂಗಳದಲ್ಲಿ ಬೆಳೆಸುವುದರಿಂದ  ಮನೆಗೆ ಬೇಕಾದ ಹೂವು ತರಕಾರಿಗಳನ್ನು ಕೊಂಡು ತರಬೇಕಾಗಿಲ್ಲ  .ಮಳೆಗಾಲದಲ್ಲಿ ಅವುಗಳ ಆರೈಕೆ,  ಬೇಸಿಗೆಯಲ್ಲಿ ನೀರುಣಿಸುವ ಕೆಲಸ, ಇತ್ಯಾದಿ ಮಾಡುವುದರಿಂದ ಶರೀರಕ್ಕೆ ಬೇಕಾದ  ವ್ಯಾಯಾಮವು ಸಿಕ್ಕಿ  ಶರೀರ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ. ಮನೆಯ  ಸುತ್ತುಮುತ್ತ  ಸುಂದರ ಕೈತೋಟವಿದ್ದರೆ ಆಹ್ಲಾದಕರ ಶುದ್ಧ ಗಾಳಿಯು ಸುತ್ತಲೂ ತುಂಬುವುದು. ಕೈತೋಟದ ಹಸಿರು, ಬಗೆ ಬಗೆ ಹೂಗಳ ಸೌಂದರ್ಯ, ನೋಡುವುದೇ ಕಣ್ಣಿಗೆ ಒಂದು ಹಬ್ಬವಿದ್ದಂತೆ. ಹೂಗಳ ಮಧುವನ್ನು ಹೀರಲು ಬರುವ ಬಣ್ಣ ಬಣ್ಣದ ಚಿಟ್ಟೆಗಳ ನರ್ತನ, ದುಂಬಿಗಳ ಝೇಂಕಾರ, ಚಿಕ್ಕ ಚಿಕ್ಕ ಹಕ್ಕಿಗಳು ಹೂವಿಂದ ಹೂವಿಗೆ ಹಾರುವ  ಸೊಬಗು ನೋಡುತ್ತಾ ಇದ್ದರೆ   ಎಂತಹ ಅರಸಿಕನಾದರೂ ರಸಿಕನಾಗಿ ಕವಿಯಾಗಬಲ್ಲ
                     ನಮ್ಮ ಮನೆಯ ಕೈತೋಟದಲ್ಲಿ ಮಲ್ಲಿಗೆ , ಸೇವಂತಿಗೆ, ಸುಗಂಧರಾಜ, ಮುರುಗ ಧವನ, ಗುಲಾಬಿ ಅಶೋಕ  ಇತ್ಯಾದಿ ಪರಿಮಳ ಭರಿತ ಹೂವಿನ ಗಿಡಗಳು ಅಲ್ಲದೆ ಅಲಂಕಾರಿಕ ಸಸ್ಯಗಳೂ ತಾವರೆ ನೈದಿಲೆ ಇತ್ಯಾದಿ ನೀರಿನಲ್ಲಿ ಅರಳುವ ಹೂಗಳು  ತಮ್ಮ  ಸೌಂದರ್ಯದಿಂದ ನೋಡುಗರ  ಕಣ್ಣನ್ನು ಸೆಳೆಯುತ್ತದೆ.
                               ಹೂಗಳುಮಾತ್ರವಲ್ಲದೆ ಬಾಳೆ ,ಮಾವು, ಚಿಕ್ಕು ,ಪೇರಳೆ, ಹಲಸು, ಅನನಾಸು, ಇತ್ಯಾದಿ ಹಣ್ಣಿನ ಮರಗಳು ಗಾಳಿಗೆ ತಲೆದೂಗಿ ತಮ್ಮ ಇರುವಿಕೆಯನ್ನು ತಿಳಿಯಪಡಿಸುತ್ತಿವೆ.ಇಷ್ಟು ಮಾತ್ರವಲ್ಲದೆ  ಔಷಧೀಯ ಸಸ್ಯಗಳಾದ ತುಳಸಿ, ಗರಿಕೆ ಒಂದೆಲಗ    ಗರ್ಗ ,ಶುಂಠಿ  ,ಸಾಂಬ್ರಾಣಿ,  ಬಸಳೆ, ತೊಂಡೆ ,ಬೆಂಡೆ, ಬದನೆ, ಅಲತಂಡೆ, ಮುಳ್ಳುಸೌತೆ, ಸೌತೆ, ಇತ್ಯಾದಿ ಸೊಪ್ಪು ತರಕಾರಿಗಳು ತಮ್ಮ ನಿತ್ಯ ಹರಿದ್ವರ್ಣದ ಬಣ್ಣದಿಂದ ನಮ್ಮನ್ನು ಆಕರ್ಷಿಸುತ್ತದೆ.
                                   ಪ್ರತಿಯೊಬ್ಬರು ತಮ್ಮ ತಮ್ಮ ಮನೆಯಂಗಳದಲ್ಲಿ ಮನೆಗೆ ಬೇಕಾದ ಹೂವು ತರಕಾರಿಗಳನ್ನು ಸಾಧ್ಯವಾದಷ್ಟು ಬೆಳೆಸಬೇಕು ಜಾಗದ ಅಭಾವ ಇದ್ದವರು ಮನೆಯ ಟೆರ್ರಾಸ್ ನಲ್ಲಾದರು ಒಂದಷ್ಟು ಹಸಿರನ್ನು ಬೆಳೆಸಿ  ಉತ್ತಮ ಗಾಳಿ  ಶುದ್ಧ ವಾತಾವರಣ ಇರುವಂತೆ ನೋಡಿಕೊಳ್ಳಬೇಕು.  ಇಂದಿನ ಕಾಂಕ್ರೀಟ್ ಕಾಡಿನ ದಿನಗಳಲ್ಲಿ ಇದು ಅತ್ಯಂತ ಅಗತ್ಯವೂ ಆಗಿದೆ  . ಆಗತಾನೆ ಕೊಯ್ದು ತಂದ ಹಸಿರು ತರಕಾರಿಯ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಶುದ್ಧ ಗಾಳಿಯಲ್ಲಿ ನಡೆದಾಡುವುದರಿಂದ ಸಾಂಕ್ರಾಮಿಕ ರೋಗದಿಂದ,   ಕೊರೊನಾದಂತ ಮಹಾಮಾರಿಯಿಂದ  ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬಹುದು ಆದ್ದರಿಂದ ಇಂದೇ  ಗಿಡನೆಟ್ಟು ಹಸಿರು ಬೆಳೆಸಿ ಉಳಿಸಿ 
                        ಪಂಕಜಾ ಕೆ.ಮುಡಿಪು
                        
       ಹೆಸರು...ಪಂಕಜಾ.ಕೆ.
       ವಿಳಾಸ ...ನಿವೃತ್ತ ಅಸ್ಸಿಸ್ಟಂಟ್  ಪೋಸ್ಟ್ ಮಾಸ್ಟರ್ 

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...