ಕರುನಾಡ ಹಣತೆ ಬೆಂಗಳೂರು ಬಳಗದ ಕವನ ಸ್ಪರ್ಧೆಗಾಗಿ
ಕೂಡಿ ಬಾಳಬೇಕು
ಕೂಡಿ ಬಾಳುವುದೇ ಇದರ ಸೂತ್ರ
ಪ್ರೀತಿ ಒಗ್ಗಟ್ಟುಗಳೇ ಮೂಲಮಂತ್ರ
ಅವಿಭಕ್ತ ಕುಟುಂಬದ ಆಶಯವ್ಯಕ್ತ
ಎಲ್ಲರೂ ಒಂದಾಗಿ ಬಾಳುವುದೇ ಸೂಕ್ತ
ಉತ್ತಮ ಸಂಸ್ಕೃತಿರೂಪಿಸುವ ಕಾರ್ಯಾಗಾರ
ಅವಿಭಕ್ತ ಕುಟುಂಬವೆಂಬ ಮಾಯಾಗಾರ
ಅದ್ಬುತ ತುಂಬಿದ ಜೀವನದ ಸಾರ
ಆಗಲಾರದೆಂದಿಗೂ ಜೀವನ ಬಾರ
ಕೂಡು ಕುಟುಂಬವು ಭದ್ರತೆಯ ನೆಲೆವೀಡು
ಕಷ್ಟ ಸುಖದಲಿ ಹೆಗಲಾಗುವ ಭಾವಬೀಡು
ಅಜ್ಜಯಜ್ಜಿಯರ ಮಾರ್ಗದರ್ಶನದಲ್ಲಿ ಮಗು ನಿರಾಳ
ಪ್ರೀತಿ ಮಮತೆಯ ರಕ್ಷಣೆಯಲ್ಲಿ ಬಾಳಾಗದು ಕರಾಳ
ಶಿಥಿಲಗೊಳ್ಳುತ್ತಿದೆ ಇಂದೀಗ ಈ ಅನು ಬಂಧ
ಸ್ವತಂತ್ರ ಮನೋಭಾವ ದ ಜನರೇ ಇದಕ್ಕೆಕಾರಣ
ನಾನು ನನ್ನದೆನ್ನುವ ಸ್ವಾರ್ಥ ತುಂಬಿದ ಮನವು
ಹೊಂದಾಣಿಕೆಯ ಕೊರತೆಯಲಿ ನರಳುತಿರುವವು
ಪಾಶ್ಚಿಮಾತ್ಯಸಂಸ್ಕೃತಿಯ ಕೆಟ್ಟ ಪರಿಣಾಮವಿದು
ವಿಭಕ್ತ ಕುಟುಂಬಗಳು ಹೆಚ್ಚಳವಾಗುತ್ತಿರುವುದು
ಒಬ್ಬಂಟಿ ಯಾಗಿರುತ ಬಾಳಲೇನಿದೆ ಸೊಗಸು
ಮೌನ ಸಾಮ್ರಾಜ್ಯದಲಿ ತುಂಬಿದೆ ಇರುಸು ಮುರುಸು
ಹಬ್ಬ ಹರಿದಿನಗಳಲ್ಲೂ ಮನೆ ಭಣ ಭಣ
ತೀರಿಸಲಾದೀತೆ ಹೆತ್ತ ತಂದೆ ತಾಯಿಯ ಋಣ
ಪಂಕಜಾ.ಕೆ.ಮುಡಿಪು
ಹೆಸರು...ಪಂಕಜಾ.ಕೆ.ಮುಡಿಪು
ವಿಳಾಸ...ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment