Skip to main content

ನೆನಪಿನ ಕಾಣಿಕೆ ಕಥೆ ಮಣ್ಣಿನ ಋಣ ನವಪರ್ವದಲ್ಲಿ ಅತ್ಯುತ್ತಮ

ನವಪರ್ವ ಬಳಗದಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ನನ್ನ ಕಿರು ಕಥೆ

ಕೊಟ್ಟಪದ..ನೆನಪಿನ ಕಾಣಿಕೆ

ಮಣ್ಣಿನ ಋಣ
  
ತುಂಬು ಬಡತನದಲ್ಲಿ ಬೆಳೆದ ಸಾಕೇತನಿಗೆ ತನ್ನ ಬಾಲ್ಯ ಮಿತ್ರ ದನುಷ್ ಎಂದರೆ ಅಚ್ಚುಮೆಚ್ಚು .ಇಬ್ವರೂ ಒಬ್ಬರಿನ್ನೊಬ್ಬರು  ಬಿಟ್ಟಿರಲಾರದಷ್ಟು ಆತ್ಮೀಯರಾಗಿದ್ದರು.ಬಡವನಾಗಿದ್ದ ಸಾಕೇತನು ಓದು ಬರಹದಲ್ಲಿ ಮುಂದಿದ್ದರೂ ,ತನ್ನ ಬಡತನದ ಕಾರಣದಿಂದಾಗಿ ಮುಂದೆ ಕಲಿಯುವ ತನ್ನ ಹಂಬಲವನ್ನು  ಬಿಟ್ಟು ಬಿಡಬೇಕಾದ  ಪರಿಸ್ಥಿತಿ ಬಂತು .ಇದನ್ನು ತಿಳಿದ ಆತನ ಗೆಳೆಯ ದನುಷ್ ತನ್ನ ತಂದೆ ತನಗೆ ಕೊಟ್ಟ ಪ್ಯಾಕೆಟ್ ಮನಿಯಿಂದ ಗೆಳೆಯನ ಶಾಲೆಯ ಶುಲ್ಕ ವನ್ನು ಕಟ್ಟಿ ಗೆಳೆಯನ ವಿದ್ಯಾಭ್ಯಾಸ ಪೂರ್ಣವಾಗುವಂತೆ ನೋಡಿಕೊಂಡ .ಮಿತ್ರನ ಈ ಒಂದು ಉಪಕಾರದಿಂದ ಕಣ್ಣು ತುಂಬಿ ಬಂದ  ಸಾಕೇತ್ ಗೆಳೆಯನ ಕೈಯನ್ನು ಹಿಡಿದುಕೊಂಡು ಅತ್ತು ಬಿಟ್ಟ   .ಗೆಳೆಯ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗುವ ತನ್ನ ನಿರ್ಧಾರವನ್ನು ತಿಳಿಸಿದಾಗ ಆತನಿಗೆ ತನ್ನ ನೆನಪಿನ ಕಾಣಿಕೆಯಾಗಿ ಸಾಕೇತ್ ಚಿಕ್ಕದಾದ ಒಂದು   ಬಾಟಲಿಯನ್ನು ಕೊಟ್ಟು ನಿನಗೆ ಕೊಡಲು ನನ್ನಲ್ಲಿ ಇದರ ಹೊರತು ಬೇರೇನೂ ಇಲ್ಲ  ದಯವಿಟ್ಟು ಇದನ್ನು ತೆಗೆದುಕೊ ಮತ್ತು ಜೋಪಾನವಾಗಿ  ಇಟ್ಟುಕೊ ನಿನ್ನ ವಿದ್ಯೆ ನಿನ್ನ ತಾಯ್ನಾಡಿನ ಉನ್ನತಿಗೆ ಉಪಯೋಗವಾಗಲಿ ಎಂದು ಹಾರೈಸಿ ಗೆಳೆಯನನ್ನು ಅಪ್ಪಿ ಕಣ್ಣೀರಿಟ್ಟು ಬೀಳ್ಕೊಟ್ಟ. ಹೋಗುವ ಅವಸರದಲ್ಲಿ ಇದ್ದ  ಧನುಷ್ ಗೆಳೆಯನು ಕೊಟ್ಟ  ಬಾಟಲಿಯನ್ನು ತೆರೆದು ನೋಡುವ ಗೊಡವೆಗೆ ಹೋಗದೆ ತನ್ನ ಬಟ್ಟೆ ಬರೆಗಳ ಜತೆ ಅದನ್ನು ಸೇರಿಸಿ ಕೊಂಡೊಯ್ದ.ಅಲ್ಲಿತನ್ನ ವಿದ್ಯಾಭ್ಯಾಸದಲ್ಲಿ ಸಂಪೂರ್ಣ ತೊಡಗಿಕೊಂಡ ಆತನಿಗೆ ಹೆಚ್ಚು ಕಡಿಮೆ ಗೆಳೆಯ ಹಾಗೂ ಅವನ ಕಾಣಿಕೆಯ ನೆನಪು ಮರೆತೆ  ಹೋಗಿತ್ತು .ಅದೊಂದು ದಿನ ಆತನ ಸಹಪಾಠಿ  ಧನುಷ್ ನ ವಸ್ತುಗಳನ್ನು ತೆಗೆದಿಡುವಾಗ ಆ  ಬಾಟಲಿಯನ್ನು ಕಂಡು ಕುತೂಹಲದಿಂದ ಅದರ ಮುಚ್ಚಳ ತೆಗೆದು ನೋಡಲಾಗಿ ಅದರಲ್ಲಿ ಕೇವಲ ಮಣ್ಣು ಮಾತ್ರ ಇರುವುದು ಕಂಡು ಧನುಷ್ ನನ್ನು ವಿಚಾರಿಸಲು  ತನ್ನ ಬಾಲ್ಯಗೆಳೆಯ ತನಗೆ ಕೊಟ್ಟ ನೆನಪಿನ ಕಾಣಿಕೆ ಅದು ಎಂದು ಹೇಳುತ್ತಾನೆ ಮತ್ತು ಗೆಳೆಯ ಆ ಸಂಧರ್ಭದಲ್ಲಿ ಹೇಳಿದ ಮಾತುಗಳು ನೆನಪಾಗಿ ಆತ ತನ್ನ ಮುಂದಿನ ಗುರಿಯನ್ನು  ಸ್ಪಷ್ಟಪಡಿಸಿಕೊಳ್ಳುತ್ತಾನೆ . ಅದರಂತೆ ತನ್ನ ವಿದ್ಯಾಭ್ಯಾಸ ಪೂರ್ತಿಯಾದ ತಕ್ಷಣ ತಾಯ್ನಾಡಿಗೆ ಮರಳಿ ಅಲ್ಲಿಯೇ  ತನ್ನ ವಿದ್ಯೆಯಿಂದ ಹಲವರ ಜೀವನಕ್ಕೆ ಬೆಳಕಾಗು ತ್ತಾನೆ.ಈ ಸಂಧರ್ಭದಲ್ಲಿ ತನ್ನ ಪ್ರೀತಿಯ ಗೆಳೆಯನನ್ನು ಭೇಟಿಯಾದ ಧನುಷ್ ತಾಯ್ನಾಡಿಗೆ ವಾಪಸ್ ಬರಲು ನೀನು ಕೊಟ್ಟ ನೆನಪಿನ ಕಾಣಿಕೆಯೇ ಕಾರಣ ತಾಯ್ನಾಡಿನ ಮಣ್ಣಿನ  ವಾಸನೆ ನನ್ನನ್ನು ಮರಳಿ ಇಲ್ಲಿಗೆ ಬರುವಂತೆ ಮಾಡಿತು ಎಂದು ಹೇಳಿ ಗೆಳೆಯನನ್ನು ಆಲಂಗಿಸಿಕೊಳ್ಳುತ್ತಾನೆ. ಧನುಷ್ ನ  ಸಹಾಯದಿಂದ   ಸಾಕೇತನು ಈಗ ಒಳ್ಳೆಯ ಕೆಲಸವನ್ನು ಸಂಪಾದಿಸಿದ್ದು. ಗೆಳೆಯನ ನೆನಪಿನ ಕಾಣಿಕೆ ನನ್ನ ಜೀವನವನ್ನೇ ಬದಲಿಸಿದೆ ಎಂದು ಕಣ್ತುಂಬಿ ಕೊಳ್ಳುತ್ತಾನೆ

 ನೀತಿ.. ತಾಯ್ನಾಡಿನ ಮಣ್ಣಿನ ಋಣವನ್ನು ನಾವು ಎಲ್ಲಿದ್ದರೂ  ತೀರಿಸಬೇಕು
 
 ಪಂಕಜಾ.ಕೆ.ಮುಡಿಪು

Comments

Popular posts from this blog

ಚಂದಿರ ಕವನ

ಚಂದಿರ ಕಾರಿರುಳ  ರಾತ್ರಿಯಲಿ ಮೋಡದ ಮರೆಯಿಂದ ಇಣುಕುತ ಬರುತಿಹನು ಬೆಳ್ಳಿಯತಟ್ಟೆಯ ತರದಲಿ ತೇಲುತ ತಾರೆಗಳನೊಡನಾಡುತ ಬರುತಿಹನು ರಸಿಕರ ಎದೆಯಲಿ ಕನಸನು ತುಂಬುತ ಮೈಮನಕೆಲ್ಲಾ ತಂಪನು ತರುತಿಹನು ಒಲ...

ಶಿಶು ಪ್ರಾಸ ಗೀತೆ

ಶಿಶು ಪ್ರಾಸ ಗೀತೆ  ಕಾವ್ಯಕೂಟ ಸ್ಪರ್ಧೆಗಾಗಿ   1  ಚುಕು ಚುಕು ಎನ್ನುವ ರೈಲು ಪುಟ್ಟನ ಕೈಯಲಿ ಕೋಲು ತಂಗಿಯೂ ಬಂದಳು ಜತೆಗೆ ಆಟವ ಆಡಲು ಹೊರಗೆ   2..ತುಂಟನು ನಮ್ಮ ಪುಟ್ಟ ತಂಟೆಯ ಮಾಡುತ ಬಿದ್ದ ಅಮ್ಮನು ಕೊಟ್ಟಳು ಪೆಟ್ಟು ಕೂಗುತ ಓಡಿದ  ಎದ್ದು ಬಿದ್ದು ಪಂಕಜಾ.ಕೆ.ಮುಡಿಪು 18.6 2020

ರಕ್ತದಾನ ಕವನ ಮತ್ತು ವಿಮರ್ಶೆ

[04/07, 8:09 PM] pankajarambhat: ರಕ್ತದಾನ ಅವಸರದ ಕ್ಷಣಗಳಲಿ ಅಪಘಾತಗಳ ಸುಳಿಯಲಿ ಕಳೆದು ಕೊಂಡಿಹ ರಕ್ತ ತುಂಬಿಸಲು ಬಲು ಕಷ್ಟ ಮಾನವ ಜೀವನ ಅನಿತ್ಯ ರಕ್ತದಾನವೊಂದೇ ಸತ್ಯ ಉಸಿರು ಉಳಿಸುವ ಶಕ್ತಿ ರಕ್ತದಾನಿಯ ಬುತ್ತಿ ಮಾನವತೆಯ ಬಂಧ ರಕ್ತದಾನ ದ ಅನುಬಂಧ ರಕ್ತದಾನ ಒಂದು ಮಹಾದಾನ ಆರೋಗ್ಯ ಭಾಗ್ಯದ ಪಾನ ಬಡವ ಬಲ್ಲಿದ ಭೇಧವಿಲ್ಲ ಜಾತಿ ವಿಜಾತಿಗಳ ಲೆಕ್ಕವಿಲ್ಲ ಹರಿವುದೊಂದೇ ರಕ್ತ ಮನುಜ ಇದರಿಂದ ಶಕ್ತ ರಕ್ತವೆನ್ನುವ ಅಮೃತ ಅದಿಲ್ಲದಿರೆ ಮನುಜ ಮೃತ ರಕ್ತದಾನವ ಮಾಡಬೇಕು ಇನ್ನೊಬ್ಬರ ಪ್ರಾಣ ಉಳಿಸಬೇಕು  ದಾನ ಮಾಡಿದ ರಕ್ತ ತುಂಬುವುದು ನಿತ್ಯ ಬೇಕಿಲ್ಲ ಇದರಲ್ಲಿಭಯ ಉಳಿಸಬೇಕು ನೊಂದಜೀವ ಮಾಡಿ ಬಿಡು ರಕ್ತದಾನ ಕೊಟ್ಟುಬಿಡು ಜೀವದಾನ ಬೇರಿಲ್ಲಇದಕೆ ಸಾಟಿಯದ ದಾನ ರಕ್ತದಾನವೊಂದು ಮಹಾದಾನ ಉಸಿರು ಹೋಗುವ ಮುನ್ನ ಮಾಡಿಬಿಡು ರಕ್ತದಾನ ಸ್ವ ಇಚ್ಛೆಯಿಂದ ಕೊಟ್ಟ ದಾನ  ಕೊಟ್ಟೀತು ಮನಕೆ  ಸಮಾಧಾನ ಪಂಕಜಾ.ಕೆ. ಮುಡಿಪು [04/07, 8:28 PM] +91 94493 26765: ರಕ್ತ ದಾನ ಜೀವವನ್ನೆ ಉಳಿಸುತ್ತೆ ಇದಕ್ಕಿಂದ ಬೇರೆ ದಾನ ಬೇಕೆ. ಸುಂದರ ಕವನ 💐🙏🏻 [04/07, 8:47 PM] +91 96638 12303: ರಕ್ತದಾನದ ಮೇಲೆ ಬರೆದ ಕವನ ಅರ್ಥವತ್ತಾಗಿ,  ಸಂದೇಶಭರಿತವಾಗಿದೆ. ಅಭಿನಂದನೆಗಳು ಮೇಡಂ [04/07, 9:20 PM] +91 72595 69643: ರಕ್ತದಾನ ಜೀವದಾನ. ನೀವು ಬರೆದ ಸಾಲುಗಳು ಅದೆಷ್ಟು ಜೀವಿಗಳನ್ನು ಕಾಪಾಡುವ ಮಾನವೀಯತೆ, ಸೌಜನ್ಯತೆ ಮತ್ತು ಸಹಾಯ ...