ಖಿದ್ಮಾ ಫೌಂಡೇಷನ್ ಕರ್ನಾಟಕ ಚಿತ್ರಕ್ಕೊಂದು ಕವನ ಸ್ಪರ್ಧೆಗಾಗಿ
ಪ್ರಕೃತಿ ಸೊಬಗು
ಪಡುಕಡಲಲಿ ಮುಳುಗುವ ನೇಸರ
ಬಾನಲಿ ಬಣ್ಣವ ಕಲಸಿದನು
ಬಾಂದಳವೆಲ್ಲಾ ಓಕುಳಿಯಾಡುತ
ನಿಶೆಯೊಡನಾಡಲು ತೆರಳಿದನು
ಕಡಲಲಿ ತನ್ನಯ ಬಿಂಬವ ತುಂಬಿ
ರಸಿಕರ ಮನವನು ಸೆಳೆಯುವನು
ಎಲ್ಲೆಡೆ ಹಬ್ಬಿದ ಚೆಲು ಬಣ್ಣದ ಬೆರಗು
ಕಣ್ಮನ ತುಂಬಿತು ಪ್ರಕೃತಿಯ ಸೊಬಗು
ರವಿ ಕಡಲೆಡೆಯಲಿ ಮುಳುಗುತಲೇ
ಚಂದಿರ ಭರದಲಿ ಬಾನಲಿ ಬರುತಿಹನು
ಹಾಲಿನ ಹೊಳೆಯನು ಧರೆಯಲಿ ಸುರಿಸಿ
ಕಡಲಿನ ಅಲೆಯಲಿ ಬಿಂಕದಿ ತೇಲುವನು
ಚಂದಿರ ಬಿಂಬವ ಕಾಣುತ ನೈದಿಲೆ
ನಾಚುತ ತನ್ನಯ ದಳಗಳ ಅರಳಿಸಿತು
ಮೋಡದ ಎಡೆಯಲಿ ನುಸುಳುತ ಶಶಿಯು
ತಾರೆಗಳನೊಡನಾಡುತ ನಲಿಯುವನು
ಪಂಕಜಾ.ಕೆ. ಮುಡಿಪು
07.08.2020
Comments
Post a Comment