ಖಿದ್ಮಾ ಪೌಂಡೇಶನ್ ಕರ್ನಾಟಕ
ಚಿತ್ರಕ್ಕೊಂದು ಕವನ
ನಾಟ್ಯ ವಿಶಾರದ ಗಣಪ
ಗೌರೀ ನಂದನ ಗಜಮುಖವದನ
ಬಾದ್ರಪದ ಶುಕ್ಲದ ಚೌತಿಯದಿನದಲಿ
ಗೆಜ್ಜೆಯ ಕಾಲ್ಗಳ ನಾದವ ಬೀರುತ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ ನೀ ಬಾರೋ
ವಿಘ್ನಗಳ ನಿವಾರಕ ವಿಘ್ನೇಶ್ವರ
ಗರಿಕೆಯ ಅರ್ಪಿಸಿ ಪೂಜಿಪೆ ನಿನ್ನ
ಬೇಡಿದ ವರಗಳ ಕೊಡುತಲಿ
ನಾಟ್ಯವನಾಡುತ ಬೇಗನೆ ನೀ ಬಾರೋ
ನಾಟ್ಯಲೋಲನೆ ನಟರಾಜನೆ
ಕೈಯಲಿ ಕೊಳಲನು ಹಿಡಿದು
ತಕಥೈ ತಕಥೈ ಕುಣಿಯುತಲಿ
ದೊಡ್ಡ ಹೊಟ್ಟೆಯ ಕುಣಿಸುತ ನೀ ಬಾರೋ
ಮೂಷಿಕ ವಾಹನ ಮೂಜಗ ಪ್ರಿಯನೇ
ಅಜ್ಞಾನವ ಕಳೆದು ಸುಜ್ಞಾನವ ನೀಡು
ಬಗೆ ಬಗೆ ಭಕ್ಸ್ಯವ ಅರ್ಪಿಸಿ ಭಜಿಸುವೆ
ಅನುದಿನ ಕರುಣಿಸು ನಮಗೆ ನೆಮ್ಮದಿಯ
ಪಾರ್ವತಿ ಸುತನೆ ಮೋದಕ ಪ್ರಿಯನೇ
ವಿದ್ಯಾದಾಯಕ ಲಂಬೋದರನೆ
ನಿತ್ಯದ ಬದುಕಿನ ವಿಘ್ನವ ಕಳೆಯುತ
ಕೊಡು ನಮಗೆ ನೀನು ಅಯೋರಾರೋಗ್ಯಗಳ
ಪಂಕಜಾ.ಕಬ್ಬಿನಹಿತ್ಲು.ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment