ನವಪರ್ವ ಸ್ಪರ್ಧೆಗಾಗಿ
ಮಕ್ಕಳ ಗೀತೆ
.ಪ್ರವಾಸ
ಪ್ರವಾಸ ಹೋಗಲು
ಮಕ್ಕಳು ನಾವು
ಗುರುಗಳ ಜತೆಯಲಿ ಹೊರಟಿಹೆವು
ಅಮ್ಮನು ಕೊಟ್ಟ
ಕುರುಕಲುತಿಂಡಿಯ
ಗೆಳೆಯರ ಜತೆಯಲಿ ಮೆಲ್ಲುತಲಿ
ಕಿಟಕಿಯ ಬದಿಯೇ
ಬಸ್ಸಲಿ ಕುಳಿತು
ಪ್ರಕೃತಿಯ ಚೆಲುವನು ಸವಿಯುತಲಿ
ಓಡುವ ಬಯಲು
ಹರಿಯುವ ನದಿಯು
ನೋಡುತ ಮೈ ಮನ ಮರೆಯುತಲಿ
ಬಾದಾಮಿಯ ಪಟ್ಟದಕಲ್ಲು
ಬೇಲೂರಿನ ಶಿಲಾ ಬಾಲಿಕೆಯು
ಬೆರಗನು ತುಂಬಿತು ನಮ್ಮಯ ಮನದಲ್ಲಿ
ಬಿಜಾಪುರದ ಗೋಲಗುಮ್ಮಟ
ಹಳೆ ಬೀಡಿನ ಅದ್ಭುತಕಲೆಯು
ಮೈಯನು ಮರೆಸಿತು ಮನವನು ಸೆಳೆಯುತಲಿ
ನಮ್ಮಯ ಕಲಿಕೆಗೆ ಬಲು ಉಪಯೋಗ
ಪ್ರವಾಸದ ನಮ್ಮ ಈ ಅನುಭವವು
ಪಂಕಜಾ.ಕೆ. ಮುಡಿಪು
ನಿವೃತ್ತ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್
Comments
Post a Comment